ಕೇಬಲ್ ಟಿವಿ ಗ್ರಾಹಕರಿಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ವರ್ಷದ ಆರಂಭದಲ್ಲೇ ಗುಡ್ ನ್ಯೂಸ್ ನೀಡಿದೆ. ತನ್ನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದ್ದು, ಇನ್ಮುಂದೆ ಕಡಿಮೆ ಬೆಲೆಗೆ ಹೆಚ್ಚು ಚಾನೆಲ್ ಲಭ್ಯವಾಗಲಿವೆ.
2020 ಮಾರ್ಚ್ 1ರಿಂದ ಅನ್ವಯವಾಗುವಂತೆ ಟ್ರಾಯ್ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದು, ಗ್ರಾಹಕರು ಕಡಿಮೆ ಹಣ ಪಾವತಿಸಿ ಹೆಚ್ಚು ಚಾನೆಲ್ ಪಡೆಯಬಹುದಾಗಿದೆ. ಕೇಬಲ್ ದರಗಳು ಜಾಸ್ತಿ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬದಲಾವಣೆ ತರಲು ಮುಂದಾಗಿದೆ.
160 ರುಪಾಯಿಗೆ ಎಲ್ಲಾ ಉಚಿತ ಚಾನೆಲ್ಗಳು
ಟ್ರಾಯ್ ಹೊಸ ನಿಯಮದ ಪ್ರಕಾರ ಗ್ರಾಹಕರು 160 ರುಪಾಯಿ (ತೆರಿಗೆ ಬಿಟ್ಟು) ಪಾವತಿಸಿದರೆ ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್ಗಳನ್ನು ನೀಡಬೇಕು. ಈ ಮೂಲಕ ಕಡಿಮೆ ಹಣ ಪಾವತಿಸಿ ಹೆಚ್ಚಿನ ಚಾನೆಲ್ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜನವರಿ 15 ರೊಳಗೆ ಕೇಬಲ್ ಟಿವಿ ಪ್ರಸಾರಕರು ಟ್ರಾಯ್ ಹೊಸ ನಿಯಮದನ್ವಯ ದರಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಿಬೇಕು. ಆದರೆ ಈ ನಿಯಮಗಳು ಮಾರ್ಚ್ 1ರಿಂದ ಜಾರಿಗೆ ಬರಲಿವೆ.
200 ಚಾನೆಲ್ಗಳು ಫ್ರೀ
ಟ್ರಾಯ್ ಹೊಸ ನಿಯಮದ ಪ್ರಕಾರ ಗ್ರಾಹಕರು 153 ರುಪಾಯಿ (ತೆರಿಗೆ ಸೇರಿ) ಪಾವತಿಸಿದರೆ ಕನಿಷ್ಠ 200 ಚಾನೆಲ್ಗಳನ್ನು ಉಚಿತವಾಗಿ ನೀಡುವುದು ಕಡ್ಡಾಯವಾಗಿದೆ. ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಕೇಂದ್ರ ಪ್ರಕಟಿಸಿದ್ದ 200 ಚಾನೆಲ್ಗಳು ಎಸ್ಸಿಎಫ್ ವ್ಯಾಪ್ತಿಗೆ ಬರುವುದಿಲ್ಲ. ಈ ಚಾನೆಲ್ಗಳನ್ನು ಹೊರತುಪಡಿಸಿ ಕೇಬಲ್ ಆಪರೇಟರ್ಗಳು 200 ಚಾನೆಲ್ ಉಚಿತವಾಗಿ ನೀಡಬೇಕಿದೆ.
130 ರುಪಾಯಿ ಎನ್ಸಿಎಫ್ ಶುಲ್ಕ
ಎನ್ಸಿಎಫ್ ಶುಲ್ಕ ಮಾರ್ಚ್ 1ರಿಂದ ಕಡಿಮೆ ಆಗಲಿದೆ. ಮಾಸಿಕ ಕಡ್ಡಾಯವಾಗಿ ಪಾವತಿ ಮಾಡಬೇಕಿರುವ ಎನ್ಸಿಎಫ್ ಶುಲ್ಕವನ್ನು 130 ರುಪಾಯಿಗೆ(ತೆರಿಗೆ ಬಿಟ್ಟು) ಸೀಮಿತಗೊಳಿಸಲಾಗಿದೆ. ಈ ಮೂಲಕ ತೆರಿಗೆ ಸೇರಿ 153 ರುಪಾಯಿ ಪಾವತಿಸಿದರೆ ಕೇಂದ್ರ ಸರ್ಕಾರದ ಕಡ್ಡಾಯ ಪ್ರಸಾರ ಮಾಡಬೇಕಿರುವ ಚಾನೆಲ್ಗಳು ಹೊರತುಪಡಿಸಿ 200 ಚಾನೆಲ್ಗಳು ಫ್ರೀ ಆಗಿ ಸಿಗಲಿದೆ.
ಒಂದಕ್ಕಿಂತ ಹೆಚ್ಚು ಕನೆಕ್ಷನ್ಗೆ ಗರಿಷ್ಠ 40 ಪರ್ಸೆಂಟ್ ಶುಲ್ಕ
ಕೇಬಲ್ ಗ್ರಾಹಕರು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕನೆಕ್ಷನ್ ಹೊಂದಿದ್ದರೆ ಮೊದಲ ಕನೆಕ್ಷನ್ ಹೊರತುಪಡಿಸಿ ನಂತರ ಪಡೆಯುವ ಪ್ರತಿ ಕನೆಕ್ಷನ್ಗೆ ಗರಿಷ್ಠ 40 ಪರ್ಸೆಂಟ್ ಎನ್ಸಿಎಫ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಹೆಚ್ಚುವರಿ ಕನೆಕ್ಷನ್ಗೆ ಮೊದಲ ಕನೆಕ್ಷನ್ನಷ್ಟೇ ಹಣ ಪಾವತಿಸುವುದು ತಪ್ಪಲಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications