ನವದೆಹಲಿ, ಡಿಸೆಂಬರ್ 09: ಫೋನ್ ಪೇ, ಗೂಗಲ್ ಪೇ ಹಾಗೂ ಆನ್ ಲೈನ್ ಪಾವತಿ ಪ್ರಕ್ರಿಯೆಗಳು ಭಾರತದ ಹಣಕಾಸು ವಹಿವಾಟಿನ ವಲಯದಲ್ಲೇ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಿವೆ.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ನಮ್ಮ ವಹಿವಾಟಿನ ವೈಖರಿಯನ್ನೇ ಬದಲಿಸಿ ಬಿಟ್ಟಿದೆ. ಬಳಕೆದಾರರು ಕೇವಲ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಬಯಸಿದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಅನುಮತಿಸುವ ಮೂಲಕ ಹೆಚ್ಚಿನ ಸಂದರ್ಭಗಳಲ್ಲಿ ನಗದು ಹಣವನ್ನು ಬಳಸುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ.
ಭಾರತದ ಬಹುತೇಕ ನಗರಗಳಲ್ಲಿ ರಸ್ತೆಬದಿಯ ಮಾರಾಟಗಾರರಿಂದ ಹಿಡಿದು ಚಿಲ್ಲರೆ ವ್ಯಾಪಾರಿಗಳವರೆಗೂ ಯುಪಿಐ ಪಾವತಿಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ. ಯುಪಿಐ ಸುರಕ್ಷಿತ ಪಾವತಿ ವ್ಯವಸ್ಥೆಯಾಗಿದ್ದರೂ, ನಿಮ್ಮ ಕಡೆಯಿಂದ ಅಜಾಗರೂಕ ದೋಷಗಳು ಕೆಲವೊಮ್ಮೆ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಹಾಗೆ ಆದಂತ ಸಂದರ್ಭದಲ್ಲಿ ಮುಂದೇನು ಮಾಡಬೇಕು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
ಯಾರದ್ದೋ ಖಾತೆಗೆ ಜಮಾ ಆಯ್ತಾ ನಿಮ್ಮ ಹಣ?
ಜಾಗತಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಜನರು ಹಲವು ರೀತಿಯ ಅನಾನೂಕೂಲತೆಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಾರೆ. ತಪ್ಪಾದ ಯುಪಿಐ ಐಡಿಯನ್ನು ನಮೂದಿಸುವುದು, ಬೇರೆಯವರ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣವನ್ನು ಕಳುಹಿಸುವುದು ಸಹ ನೀವು ಎದುರಿಸಬಹುದಾದ ಸನ್ನಿವೇಶಗಳಲ್ಲಿ ಸೇರಿದೆ. ನಮ್ಮಲ್ಲಿ ಹೆಚ್ಚಿನವರು ಅಂತಹ ಸಂದರ್ಭಗಳಲ್ಲಿ ಭಯಭೀತರಾಗುತ್ತಾರೆ, ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ವರ್ಗಾವಣೆ ಮಾಡಿದ ಮೊತ್ತವನ್ನು ವಾಪಸ್ ಪಡೆದುಕೊಳ್ಳಬಹುದು.
ತಪ್ಪಾದ ಪಾವತಿ ಬಗ್ಗೆ ಆರ್ಬಿಐ ಹೇಳುವುದೇನು?
ಡಿಜಿಟಲ್ ಸೇವೆಗಳ ಮೂಲಕ ಯಾರಿಗೋ ಕಳುಹಿಸಬೇಕಾದ ಹಣವನ್ನು ಇನ್ಯಾವುದೋ ಸಂಖ್ಯೆಗೆ ಕಳುಹಿಸಿದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಒಂದೇ ಒಂದು ಸಂಖ್ಯೆ ತಪ್ಪಾಗುವುದರಿಂದ ಕೈಯಲ್ಲಿದ್ದ ಕಾಸು ಕೈ ತಪ್ಪಿ ಹೋಗಿರುವ ಘಟನೆಗಳು ನಡೆದಿರುತ್ತವೆ. ಈ ಹಂತದಲ್ಲಿ ತೊಂದರೆಯನ್ನು ಅನುಭವಿಸುವ ವ್ಯಕ್ತಿಗಳು ತಾವು ಪಾವತಿ ಮಾಡಲು ಬಯಸಿದ ವ್ಯವಸ್ಥೆಯೊಂದಿಗೆ ದೂರು ಸಲ್ಲಿಸಬೇಕು ಎಂದು ಆರ್ಬಿಐ ಹೇಳುತ್ತದೆ.
ಪ್ಲೀಸ್ ನಮ್ ಹಣ ವಾಪಸ್ ಕೊಡಿ ಎನ್ನುವುದು ಹೇಗೆ?
ಸಾಮಾನ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದಕ್ಕೆ ಸಾರ್ವಜನಿಕರು ಹೆಚ್ಚಾಗಿ ಪೇಟಿಎಂ, ಗೂಗಲ್ ಪೇ ಮತ್ತು ಫೋನ್ ಪೇನಂತಹ ಅಪ್ಲಿಕೇಶನ್ಗಳನ್ನು ಅವಲಂಬಿಸಿದ್ದಾರೆ. ಹೀಗೆ ಇರುವಾಗ ಗ್ರಾಹಕ ಸೇವೆಯಿಂದ ನೀವು ಸಹಾಯವನ್ನು ಪಡೆಯಬಹುದು. ಆ ಮೂಲಕ ನೀವು ತಪ್ಪಾದ ಸಂಖ್ಯೆಗೆ ಕಳುಹಿಸಿದ ಹಣವನ್ನು ಮರುಪಾವತಿ ಮಾಡುವಂತೆ ವಿನಂತಿಸಬಹುದು.
ಪಾವತಿ ವ್ಯವಸ್ಥೆಯು ನಿಮ್ಮ ಸಮಸ್ಯೆ ಬಗೆಹರಿಸದಿದ್ದರೇನು ಗತಿ?
ಒಂದು ಹಂತದಲ್ಲಿ ನೀವು ಬಳಸುವ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಪಾವತಿ ವ್ಯವಸ್ಥೆಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಡಿಜಿಟಲ್ ವಹಿವಾಟುಗಳಿಗಾಗಿ ನೀವು ಆರ್ಬಿಐನ ಓಂಬುಡ್ಸ್ಮನ್ ಅನ್ನು ಸಂಪರ್ಕಿಸಬಹುದು. ಆರ್ಬಿಐ ಪ್ರಕಾರ, "ಸ್ಕೀಮ್ನ ಷರತ್ತು 8 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದೂರಿನ ಆಧಾರದ ಮೇಲೆ ಒಳಗೊಂಡಿರುವ ಕೆಲವು ಸೇವೆಗಳಲ್ಲಿನ ಕೊರತೆಗಾಗಿ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಸಿಸ್ಟಮ್ ಭಾಗವಹಿಸುವವರ ವಿರುದ್ಧ ಗ್ರಾಹಕರ ದೂರುಗಳನ್ನು ನಿವಾರಿಸಲು" ಈ ಹಿರಿಯ ಅಧಿಕಾರಿಗಳಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications