ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿದೆ. ವಿರಾಜಪೇಟೆಯ ಕುಕ್ಲೂರಿನಲ್ಲಿರುವ ರಶ್ಮಿಕಾ ಮನೆ ಮೇಲೆ ಗುರುವಾರ (ಜನವರಿ 16)ರ ಬೆಳಗ್ಗೆ ಐಟಿ ದಾಳಿ ನಡೆಸಿದ್ದು, ದಾಖಲೆಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
2016ಕ್ಕೆ ಚಿತ್ರ ರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದ್ದು ಟಾಲಿವುಡ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಅಂಜನಿ ಪುತ್ರ, ಚಮಕ್ ಸೇರಿದಂತೆ ಗೀತ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಭೀಷ್ಮ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾಗೆ ತೆಲುಗು, ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೇಡಿಕೆ ಇದೆ.
ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾಗಿದೆ. ಹಾಗಿದ್ದಾರೆ ಐಟಿ ಇಲಾಖೆಯು ಏಕೆ ದಾಳಿ ನಡೆಸುತ್ತದೆ. ಯಾವ ನಿಯಮಗಳು ಅನ್ವಯವಾಗುತ್ತವೆ. ದಾಳಿ ವೇಳೆ ಅಧಿಕಾರಿಗಳಿಗೆ ಇರುವ ವ್ಯಾಪ್ತಿಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಐಟಿ ದಾಳಿ ಯಾವಾಗ ಸಂಭವಿಸುತ್ತದೆ?
ತಾಂತ್ರಿಕವಾಗಿ ಹುಟುಕಾಟ ಮತ್ತು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಕರೆಯಲ್ಪಡುವ ಹೆಸರು ಆದಾಯ ತೆರಿಗೆ ದಾಳಿಯಾಗಿದೆ. ಕಪ್ಪು ಹಣವನ್ನು ಪರೀಕ್ಷಿಸಲು ಮತ್ತು ವಶಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆಯು ಹೊಂದಿರುವ ನಿರ್ಣಾಯಕ ಆಯುಧಗಳಲ್ಲಿ ಐಟಿ ದಾಳಿ ಒಂದಾಗಿದೆ. ಇದು ಸಾಂವಿಧಾನಿಕ ಮಾನದಂಡವಾಗಿದ್ದು, ಈ ಕೆಳಗಿನ ಯಾವುದೇ ಸಂದರ್ಭಗಳಲ್ಲಿ ಐಟಿ ದಾಳಿಯು ನಡೆಯುತ್ತದೆ.
- ತೆರಿಗೆ ವಂಚನೆ ಕುರಿತು ವಿಶ್ವಾಸಾರ್ಹ ಮಾಹಿತಿ ಸಿಕ್ಕಾಗ. ಉದಾಹರಣೆಗೆ ಆದಾಯ ತೆರಿಗೆ ಇಲಾಖೆಯ ಗುಪ್ತಚರ ವಿಭಾಗದಿಂದ ಪಡೆದ ವರದಿಗಳಿಂದ ಹೊರಬರುವ ಮಾಹಿತಿ ಮೇಲೆ ದಾಳಿ ನಡೆಯುತ್ತದೆ.
- ಸರ್ಕಾರಿ ಇಲಾಖೆಗಳಿಂದ ಬರುವ ಮಾಹಿತಿಯಿಂದಲೂ ದಾಳಿ
- ತೆರಿಗೆದಾರರ ಮೌಲ್ಯಮಾಪನ ದಾಖಲೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ದಾಳಿ ನಡೆಯಬಹುದು
- ತೆರಿಗೆದಾರರು ಆದಾಯಕ್ಕೆ ಅನುಗುಣವಾಗಿ ಖರ್ಚಿಗೆ ಸಂಬಂಧಿಸಿದಂತೆ ಪಡೆದ ಮಾಹಿತಿ. ಉದಾಹರಣೆಗೆ ಪಡೆಯುವ ಆದಾಯಕ್ಕಿಂತ ಹೆಚ್ಚಾಗಿ ಅದ್ದೂರಿ ಖರ್ಚುಗಳು ಕಂಡುಬಂದಾಗ ದಾಳಿ ನಡೆಯುತ್ತದೆ.
- ರಿಯಲ್ ಎಸ್ಟೇಟ್ನಲ್ಲಿ ಅಕ್ರಮ ಹೂಡಿಕೆ
- ವಿವರಿಸಲಾಗದ ನಗದು ಸಾಲಗಳು, ಷೇರು ವ್ಯವಹಾರ ಇತ್ಯಾದಿ
ಯಾವ ಅಧಿಕಾರಿಗಳು ದಾಳಿ ನಡೆಸಬಹುದು?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132(1) ಪ್ರಕಾರ :
- ಪ್ರಧಾನ ಮಹಾ ನಿರ್ದೇಶಕರು ಅಥವಾ ಮಹಾ ನಿರ್ದೇಶಕರು ಅಥವಾ
- ಪ್ರಧಾನ ನಿರ್ದೇಶಕರು ಅಥವಾ ನಿರ್ದೇಶಕರು ಅಥವಾ
- ಪ್ರಧಾನ ಮುಖ್ಯ ಆಯುಕ್ತರು ಅಥವಾ ಮುಖ್ಯ ಆಯುಕ್ತರು ಅಥವಾ
- ಪ್ರಧಾನ ಆಯುಕ್ತರು ಅಥವಾ ಆಯುಕ್ತರು
ಈ ಮೇಲಿನವರು ಅಧಿಕಾರವನ್ನು ನೀಡಿದರೆ:
ಹೆಚ್ಚುವರಿ ನಿರ್ದೇಶಕರು ಅಥವಾ ಹೆಚ್ಚುವರಿ ಆಯುಕ್ತರು ಅಥವಾ ಜಂಟಿ ನಿರ್ದೇಶಕರು ಇಲ್ಲವೇ ಜಂಟಿ ಆಯುಕ್ತರು ದಾಳಿ ನಡೆಸಬಹುದು. ಇವರ ಜೊತೆಗೆ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಅಥವಾ ಸಹಾಯಕ ಆಯುಕ್ತರು ದಾಳಿ ನಡೆಸಬಹುದು.
ಐಟಿ ದಾಳಿಯ ವೇಳೆ ತೆರಿಗೆ ಅಧಿಕಾರಿಗಳ ಅಧಿಕಾರ ವ್ಯಾಪ್ತಿಯೇನು?
ದಾಳಿ ನಡೆಸಲು ಅಧಿಕಾರ ಹೊಂದಿರುವ ಅಧಿಕಾರಿಗಳ ವ್ಯಾಪ್ತಿ:
- ಯಾವುದೇ ಕಟ್ಟಡ, ಸ್ಥಳ ಇತ್ಯಾದಿಗಳನ್ನು ನಮೂದಿಸಿ ಆ ಸ್ಥಳಗಳನ್ನು ಹುಡುಕಬಹುದು. ಆ ಸ್ಥಳಗಳಲ್ಲಿ ಖಾತೆಯ ಪುಸ್ತಕಗಳು, ಇತರೆ ದಾಖಲೆಗಳು, ಹಣ, ಚಿನ್ನ, ಬೆಳ್ಳಿ, ಆಭರಣ ಅಥವಾ ಇತರ ಅಮೂಲ್ಯವಾದ ವಸ್ತುಗಳು. ಬಹಿರಂಗಪಡಿಸದ ಆದಾಯವನ್ನು ಪ್ರತಿನಿಧಿಸುವ ವಸ್ತುಗಳನ್ನು ಇಡಲಾಗಿದೆಯೇ ಎಂಬ ಅನುಮಾನದಿಂದ ಪರಿಶೀಲನೆ ನಡೆಸಬಹುದು.
- ಕೀಗಳು ಇಲ್ಲದ ವೇಳೆಯಲ್ಲಿ ಲಾಕರ್ಗಳನ್ನು ಒಡೆಯುವ ಅಧಿಕಾರ
- ಮೊದಲ ಅಂಶದಲ್ಲಿ ಉಲ್ಲೇಖಿಸಿದಂತೆ ವ್ಯಕ್ತಿಯು ಕೆಲವು ವಸ್ತುಗಳನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎಂದು ಶಂಕಿಸಿ ಎಲ್ಲಿ ಬೇಕಾದರೂ ಹುಡುಕಾಟ ನಡೆಸಬಹುದು.
- ಮೊದಲ ಅಂಶದಲ್ಲಿ ತಿಳಿಸಲಾದ ಎಲ್ಲಾ ಅಂಶಗಳನ್ನು ವಶಪಡಿಸಿಕೊಳ್ಳಬಹುದು.
- ಹೊಂದಿರುವ ಎಲ್ಲಾ ಸ್ವತ್ತುಗಳಿಗೆ ಗುರುತು ಮಾಡಿ, ಖಾತೆ ಮತ್ತು ದಾಖಲೆಗಳ ಪುಸ್ತಕಗಳ ಪ್ರತಿ ಪಡೆದುಕೊಳ್ಳುವುದು (ಜೆರಾಕ್ಸ್ ಅಥವಾ ಸ್ಕ್ಯಾನ್)
- ಹುಡುಕಾಟದ ಸಮಯದಲ್ಲಿ ದೊರೆತ ಅಮೂಲ್ಯ ವಸ್ತುಗಳ ಟಿಪ್ಪಣಿ ಅಥವಾ ದಾಸ್ತಾನು ಮಾಡುವುದು.
ದಾಳಿ ವೇಳೆ ಯಾವ ಸ್ವತ್ತುಗಳನ್ನು ವಶಪಡಿಸಿಕೊಳ್ಳಬಹುದು?
ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಬಹುದು:
- ಅಘೋಷಿತ ನಗದು, ಆಭರಣ
- ಖಾತೆಯ ಪುಸ್ತಕಗಳು, ಚಲನ್, ಡೈರಿಗಳು ಇತ್ಯಾದಿ
- ಕಂಪ್ಯೂಟರ್ ಚಿಪ್ಸ್ ಮತ್ತು ಇತರ ಡೇಟಾ ಸಂಗ್ರಹ ಸಾಧನಗಳು
- ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಸಾಗಣೆ ಪತ್ರ ಇತ್ಯಾದಿ
ದಾಳಿ ವೇಳೆ ಯಾವ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಂತಿಲ್ಲ?
ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳುವಂತಿಲ್ಲ:
- ವ್ಯವಹಾರದ ಸ್ಟಾಕ್-ಇನ್-ಟ್ರೇಡ್ (ನಗದು ಹೊರತುಪಡಿಸಿ)
- ತೆರಿಗೆ ಇಲಾಖೆ ಮುಂದೆ ಬಹಿರಂಗಪಡಿಸಿದ ಸ್ವತ್ತುಗಳು ಅಥವಾ ನಗದು
- ನಗದು ಕುರಿತು ಸರಿಯಾದ ವಿವರಣೆ ನೀಡಿದಾಗ ವಶಪಡಿಸಿಕೊಳ್ಳುವಂತಿಲ್ಲ
- ತೆರಿಗೆ ರಿಟರ್ನ್ನಲ್ಲಿ ಒದಗಿಸಲಾಗಿರುವ ಆಭರಣಗಳು
- ಪ್ರತಿ ವಿವಾಹಿತ ಮಹಿಳೆಗೆ 500 ಗ್ರಾಂ ಮತ್ತು ಪ್ರತಿ ಅವಿವಾಹಿತ ಮಹಿಳೆಗೆ 250 ಗ್ರಾಂ, ಪುರುಷ ಸದಸ್ಯರಿಗೆ 100 ಗ್ರಾಂ ಚಿನ್ನ
ತೆರಿಗೆ ದಾಳಿಯ ಸಮಯದಲ್ಲಿ ವ್ಯಕ್ತಿಯ ಹಕ್ಕುಗಳು
-ಸಭ್ಯತೆಗೆ ಕಟ್ಟುನಿಟ್ಟಾಗಿ, ಮಹಿಳೆಯೊಬ್ಬಳಿಂದ ಮಾತ್ರ ಮಹಿಳೆಯನ್ನು ವಿಚಾರಣೆ ನಡೆಸುವ ಅಥವಾ ವೈಯಕ್ತಿಕ ಹುಡುಕಾಟವನ್ನು ಒತ್ತಾಯಿಸುವುದು.
- ಕನಿಷ್ಠ ಎರಡು ಗೌರವಾನ್ವಿತ ಮತ್ತು ಸ್ವತಂತ್ರ ನಿವಾಸಿಗಳನ್ನು ಸಾಕ್ಷಿಗಳಾಗಿ ಹೊಂದಲು
- ತುರ್ತು ಸಂದರ್ಭದಲ್ಲಿ ವೈದ್ಯರನ್ನು ಕರೆಯುವುದು
- ಮಕ್ಕಳ ಬ್ಯಾಗ್ಗಳನ್ನು ಪರಿಶೀಲಿಸಿದ ಬಳಿಕ ನಂತರ ಅವರನ್ನು ಶಾಲೆಗೆ ಹೋಗಲು ಅವಕಾಶ ಮಾಡಿಕೊಡುವುದು
- ಸಾಮಾನ್ಯವಾದ ವೇಳೆ ಊಟ-ತಿಂಡಿಗೆ ಅವಕಾಶ ನೀಡುವುದು
- ಎಲ್ಲಾ ಅನುಬಂಧಗಳೊಂದಿಗೆ ಪಂಚನಾಮದ ನಕಲನ್ನು ಹೊಂದಲು ಅಧಿಕಾರ
- ಇಲಾಖೆಯು ಅವನ ವಿರುದ್ಧ ಬಳಸುವ ಯಾವುದೇ ಹೇಳಿಕೆಯ ನಕಲನ್ನು ಹೊಂದಲು
- ಅಧಿಕೃತ ಅಧಿಕಾರಿ ಸಮ್ಮುಖದಲ್ಲಿ ಅಥವಾ ಅವನಿಂದ ಅಧಿಕಾರ ಪಡೆದಿದ್ದ ಅಧಿಕಾರಿಯ ಉಪಸ್ಥಿತಿಯಲ್ಲೇ ವಶಪಡಿಸಿಕೊಂಡ ಖಾತೆಗಳ ಪುಸ್ತಕಗಳನ್ನು ಪರಿಶೀಲಿಸುವುದು
ತೆರಿಗೆ ದಾಳಿಯ ಸಮಯದಲ್ಲಿ ವ್ಯಕ್ತಿಯ ಪ್ರಮುಖ ಕರ್ತವ್ಯಗಳು
-ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಮಯದಲ್ಲಿ ಅವರಿಗೆ ಯಾವುದೇ ಅಡಚಣೆ ಮಾಡದೆ ಪ್ರವೇಶವನ್ನು ಅನುಮತಿಸುವುದು
- ಸ್ವತ್ತುಗಳು ಅಥವಾ ಖಾತೆ ಮತ್ತು ದಾಖಲೆಗಳ ಪುಸ್ತಕಗಳನ್ನು ಇರಿಸಲಾಗಿರುವ ಎಲ್ಲಾ ಸ್ಥಳಗಳನ್ನು ಗುರುತಿಸಲು ಮತ್ತು ಲಾಕರ್ಗಳನ್ನು ತೆರೆಯಲು ಕೀಲಿಗಳನ್ನು ಅಧಿಕೃತ ಅಧಿಕಾರಿಗೆ ಹಸ್ತಾಂತರಿಸುವುದು.
- ಆವರಣದಲ್ಲಿ ಕಂಡುಬಂದಂತಹ ಸ್ವತ್ತುಗಳು, ಖಾತೆಯ ಪುಸ್ತಕಗಳು ಮತ್ತು ದಾಖಲೆಗಳ ಮಾಲೀಕತ್ವವನ್ನು ಗುರುತಿಸುವುದು ಮತ್ತು ವಿವರಿಸುವುದು
- ಯಾವುದೇ ವ್ಯಕ್ತಿಯನ್ನು ಗುರುತಿಸಲು ಮತ್ತು ಆತನಿಗೆ ಸಂಬಂಧಿಸದ ಸ್ವತ್ತುಗಳ ಕುರಿತು ವಿವರಿಸುವಾಗ ತಪ್ಪುದಾರಿಗೆಳೆಯಬಾರದು. ಅವನು ಬೇರೊಬ್ಬ ವ್ಯಕ್ತಿಯಂತೆ ನಟಿಸಿ ಮೋಸ ಮಾಡಿದರೆ ಅಥವಾ ಒಬ್ಬ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ಬದಲಾಯಿಸಿರೆ ಅದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 416ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
- ಯಾವುದೇ ಅನಧಿಕೃತ ವ್ಯಕ್ತಿಯನ್ನು ಮನೆಗೆ ಪ್ರವೇಶಿಸಲು ಅನುಮತಿಸಬಾರದು.
-ಅಧಿಕೃತ ಅಧಿಕಾರಿಯ ಸೂಚನೆ ಅಥವಾ ಅನುಮತಿ ಇಲ್ಲದೆ ಯಾವುದೇ ಲೇಖನವನ್ನು ಅಳಿಸಬಾರದು ಅಥವಾ ಹರಿದು ಹಾಕಬಾರದು. ಹಾಗೇನಾದರೂ ಸಾಕ್ಷಿ ನಾಶಪಡಿಸಲು ಯತ್ನಿಸಿದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 204ರ ಅಡಿಯಲ್ಲಿ ದಂಡ ಅಥವಾ ಶಿಕ್ಷಾರ್ಹ ಅಪರಾಧವಾಗಿದೆ.
- ಎಲ್ಲಾ ಪ್ರಶ್ನೆಗಳಿಗೆ ಸತ್ಯವಾಗಿ ಮತ್ತು ಅವನ ಜ್ಞಾನದ ಅತ್ಯುತ್ತಮವಾಗಿ ಉತ್ತರಿಸುವುದು. ಯಾವುದೇ ಮೂರನೇ ವ್ಯಕ್ತಿಯು ಹಸ್ತಕ್ಷೇಪ ಮಾಡಲು ಅಥವಾ ಹೇಳಲು ಅನುಮತಿಸಬಾರದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications