ಪ್ರಮುಖ ಖಾಸಗಿ ಬ್ಯಾಂಕ್ಗಳಲ್ಲಿ ಒಂದಾದ ಯೆಸ್ ಬ್ಯಾಂಕ್ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಅನೇಕ ಆಯ್ಕೆಗಳನ್ನ ಒಳಗೊಂಡ ನಿಶ್ಚಿತ ಠೇವಣಿ(ಎಫ್ಡಿ) ಯೋಜನೆಗಳನ್ನು ಹೊಂದಿದೆ. ಏಳು ದಿನಗಳಿಂದ ಪ್ರಾರಂಭವಾಗುವ ಎಫ್ಡಿ ಯೋಜನೆಗಳು 10 ವರ್ಷಗಳ ಅವಧಿಯನ್ನು ಹೊಂದಿದೆ.
ಹೀಗೆ ಎಫ್ಡಿಗಳನ್ನ ಒಳಗೊಂಡಂತೆ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ್ದು, 2021 ರ ಫೆಬ್ರವರಿ 8 ರಿಂದ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕೃತಗೊಂಡಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಯೆಸ್ ಬ್ಯಾಂಕ್ ಏಳು- ಹದಿನಾಲ್ಕು ದಿನಗಳಲ್ಲಿನ ಠೇವಣಿಗಳ ಮೇಲೆ 3.50%, 15 ರಿಂದ 45 ದಿನಗಳಲ್ಲಿ 4%, 46 ರಿಂದ 90 ದಿನಗಳ ಎಫ್ಡಿಗಳಲ್ಲಿ 4.5% ಬಡ್ಡಿದರವನ್ನು ನೀಡುತ್ತದೆ.

ಯೆಸ್ ಬ್ಯಾಂಕ್ನ 3 ತಿಂಗಳ ಮತ್ತು 6 ತಿಂಗಳಿಗಿಂತ ಕಡಿಮೆ ಮತ್ತು 6 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ ಅವಧಿಗೆ ಮುಕ್ತಾಯಗೊಳ್ಳುವ ಅವಧಿಯ ಠೇವಣಿಗಳ ಮೇಲೆ 5% ರಿಂದ 5.5% ನೀಡುತ್ತದೆ. ಮುಕ್ತಾಯದ ಅವಧಿ 9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಎಫ್ಡಿಗಳಿಗೆ, ಬ್ಯಾಂಕ್ 5.75% ಬಡ್ಡಿದರವನ್ನು ನೀಡುತ್ತದೆ.
ಸಾಮಾನ್ಯ ನಾಗರಿಕರಿಗೆ ಅನ್ವಯವಾಗುವ ಪರಿಷ್ಕೃತ ಬಡ್ಡಿದರಗಳು:
7ರಿಂದ 14 ದಿನಗಳು 3.50%
15 ರಿಂದ 45 ದಿನಗಳು 4.00%
46 ರಿಂದ 90 ದಿನಗಳು 4.50%
3 ತಿಂಗಳಿಂದ 6 ತಿಂಗಳ ಒಳಗೆ 5.00%
6 ತಿಂಗಳಿಂದ 9 ತಿಂಗಳ ಒಳಗೆ 5.50%
9 ತಿಂಗಳಿಂದ 1 ವರ್ಷದೊಳಗೆ 5.75%
1 ವರ್ಷದಿಂದ 2 ವರ್ಷದೊಳಗೆ 6.25%
2 ವರ್ಷದಿಂದ 3 ವರ್ಷಗಳು 6.50%
3 ವರ್ಷದಿಂದ 10 ವರ್ಷ 6.75%
ಹಿರಿಯ ನಾಗರಿಕರಿಗೆ ಅನ್ವಯವಾಗುವ ಬಡ್ಡಿದರಗಳು:
ಹಿರಿಯ ನಾಗರಿಕರು ಸಾಮಾನ್ಯ ಜನರಿಗಿಂತ 50 ಬೇಸಿಸ್ ಪಾಯಿಂಟ್ಗಳ ಹೆಚ್ಚಿನ ಬಡ್ಡಿದರಗಳನ್ನು ಪಡೆಯುತ್ತಿದ್ದಾರೆ. 7 ದಿನಗಳಿಂದ 10 ವರ್ಷಗಳಿಗೆ ಅನ್ವಯವಾಗುವ ಎಫ್ಡಿಗಳಲ್ಲಿ ಬ್ಯಾಂಕ್ 4% ರಿಂದ 7.5% ವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು 3 ವರ್ಷದಿಂದ 10 ವರ್ಷಗಳಿಗೆ ಅನ್ವಯವಾಗುವ ಎಫ್ಡಿಗಳಲ್ಲಿ 75 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications