ನಾವು ಹಣ ಹೂಡಿಕೆ ಮಾಡಿದ ನಂತರ ಅದು ಅಪರಿಮಿತ ರಿಟರ್ನ್ಸ್ ನೀಡಲಿ ಎಂದು ಭಾವಿಸುವುದು ಸಹಜ. ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟಾಗಲೂ ನಮ್ಮ ಕೋರಿಕೆ ಇದೆ ಆಗಿರುತ್ತದೆ. ಆದರೆ ಬ್ಯಾಂಕ್ ಡಿಪಾಸಿಟ್ ಕೆಲವೊಂದು ಸಂದರ್ಭದಲ್ಲಿ ಅಪಾಯ ಎದುರಿಸಬಹುದು.
ಏಕಾಏಕಿ ಬಡ್ಡಿ ದರ ಕುಸಿದರೆ ನೀವು ನಿರೀಕ್ಷೆ ಮಾಡಿದಷ್ಟು ಹಣ ಹಿಂದಕ್ಕೆ ಸಿಗುವ ಸಾಧ್ಯತೆ ಕಡಿಮೆಯಾಗಬಹುದು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಡಿಪಾಸಿಟ್ ನ್ನು ಹೊರತುಪಡಿಸಿ ಅತಿಹೆಚ್ಚು ರಿಟರ್ನ್ಸ್ ನೀಡುವ ಆದರೆ ಅಷ್ಟೇ ಸುರಕ್ಷಿತವಾದ ಕೆಲ ಯೋಜನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]

1. ತೆರಿಗೆ ಮುಕ್ತ ಬಾಂಡ್ ಗಳು
ತೆರಿಗೆ ಮುಕ್ತ ಬಾಂಡ್ ಗಳನ್ನು ಕೆಲ ಸಂಘ ಸಂಸ್ಥೆಗಳು ಹೊರಡಿಸುತ್ತವೆ. ಸಾಮಾನ್ಯವಾಗಿ ಶೇ. 7 ರಿಂದ 9.5 ರವರೆಗೆ ಬಡ್ಡಿ ಪಡೆಯಲು ಇಲ್ಲಿ ಸಾಧ್ಯವಿದೆ. ಸರ್ಕಾರದಿಂದ ಸಹಾಯ ಪಡೆಯುತ್ತಿರುವ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇಂಥ ಬಾಂಡ್ ವಿತರಣೆ ಮಾಡುತ್ತವೆ.
2. ಮ್ಯೂಚುವಲ್ ಫಂಡ್ಸ್
ಡೆಟ್ ಮ್ಯೂಚುವಲ್ ಫಂಡ್ ಸಹ ಉತ್ತಮ ಹೂಡಿಕೆ ತಂತ್ರವಾಗಿದೆ. ಇಲ್ಲಿಯೂ ಸರ್ಕಾರದ ರಕ್ಷಣೆ ಇರಲಿದ್ದು ಬ್ಯಾಂಕ್ ಡಿಪಾಸಿಟ್ ಗಳಿಗಿಂತ ಹೆಚ್ಚಿನ ಮರುಪಾವತಿ ನೀಡಬಲ್ಲದು. ಅಲ್ಲದೇ ಇಲ್ಲಿ ನಿಮಗೆ ಬದಲಾವಣೆ ಆಯ್ಕೆ ಸ್ವಾತಂತ್ರ್ಯವೂ ಹೆಚ್ಚಿನದ್ದಾಗಿರುತ್ತದೆ.[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]
3. ತಿಂಗಳ ಆದಾಯ ಯೋಜನೆ
ಎಂಐಪಿ ಎಂದು ಕರೆಯುವ ಯೋಜನೆ ಡೆಟ್ ಆಧಾರಿತವಾಗಿದ್ದು ಮ್ಯೂಚುವಲ್ ಫಂಡ್ ಹೆಸರಿನಲ್ಲಿಯೇ ನಡೆಯುತ್ತದೆ. ಬಹುತೇಕ ಪಾಲು ಡೆಟ್ ಹೆಸರಿನಲ್ಲಿಯೇ ಹೂಡಿಕೆಯಾಗಿರುತ್ತದೆ. ಸುಮಾರು 75 ರಿಂದ 80ರಷ್ಟು ಹಣ ಡೆಟ್ ರೀತಿಯಲ್ಲಿಯೇ ಹೂಡಿಕೆಯಾಗಿದ್ದರೆ ಉಳಿದ ಹಣ ಈಕ್ವಿಟಿ ಮತ್ತು ಹಣದ ರೀತಿಯಲ್ಲಿ ಇರುತ್ತದೆ.
4. ಕಾರ್ಪೋರೇಟ್ ಎನ್ ಸಿಡಿ
ಕಾರ್ಪೋರೇಟ್ ಕಂಪನಿಗಳ ಎನ್ ಸಿಡಿ ಮೇಲೆ ಹೂಡಿಕೆ ಮಾಡಿದರೂ ಹಣ ಗಳಿಸಬಹುದು. ದೀರ್ಘಾವಧಿ ಹೂಡಿಕೆ ಮಾಡಲಿಚ್ಛಿಸುವವರಿಗೆ ಇದು ಉತ್ತಮ ತಂತ್ರ. ನಿಮ್ಮ ಹಣಕ್ಕೆ ಸಂಬಂಧಿಸಿದ ಕಾರ್ಪೋರೇಟ್ ಕಂಪನಿಯ ಆಧಾರ ಅಥವಾ ಹೆಸರು ಇರುವುದರಿಂದ ಹಣ ಕಳೆದುಕೊಳ್ಳುವ ಆತಂಕ ಕಡಿಮೆ.[ಎಸ್ ಬಿಐ ಗೋಲ್ಡ್ ಡಿಪಾಸಿಟ್ ಯೋಜನೆಯ 6 ಲಾಭ]
5. ಪಿಪಿಎಫ್, ಎಸ್ ಎಸ್ ಸಿ, ಮತ್ತು ಎನ್ ಎಸ್ ಸಿ
ದೀರ್ಘ ಕಾಲದ ಹೂಡಿಕೆಗೆ ಇವು ಹೇಳಿ ಮಾಡಿಸಿದ ತಂತ್ರಗಳು. ಆದರೆ ಇಲ್ಲಿ ನೀವು ಹೂಡಿದ ಹಣದ ಮೇಲೆ ನಿಮಗೆ ಅಧಿಕಾರ ಬರಲು ಕೆಲ ದಿನ ಕಾಯಬೇಕಾಗಬಹುದು. ಬ್ಯಾಂಕ್ ನ ಫಿಕ್ಸೆಡ್ ಡಿಪಾಸಿಟ್ ಗೆ ಹೋಲಿಸಿದರೆ ಇವು ಉತ್ತಮ ಮಾರ್ಗ ಎಂದೇ ಹೇಳಬಹುದು.
ಕೊನೆ ಮಾತು
ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ತೆರಿಗೆ ನೀತಿ, ಹಣದ ರಿಟರ್ನ್ಸ್ ಮತ್ತು ಸರ್ಕಾರದ ನೀತಿ ನಿಯಮಗಳನ್ನು ಅರಿತು ಮುಂದಕ್ಕೆ ಹೆಜ್ಜೆ ಇಡಬೇಕಾಗುವುದು. ಇಲ್ಲವಾದಲ್ಲಿ ಮಾಹಿತಿ ಕೊರತೆ ಅಥವಾ ಕೆಟ್ಟ ಮಾರ್ಗದರ್ಶನದಿಂದ ತಪ್ಪು ಹಾದಿ ತುಳಿದಿರುತ್ತೇವೆ.(ಗುಡ್ ರಿಟರ್ನ್ಸ್.ಇನ್)
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications