ಬ್ಯಾಂಕು, ಹಣಕಾಸು ಸಂಸ್ಥೆಗಳ ಸಾಲದ ನೋಟಿಸುಗಳಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುವ ರೈತರು ಆತ್ಮಹತ್ಯೆಗೆ ಶರಣಾಗಿರುವ ಸಾವಿರಾರು ಘಟನೆಗಳು ನಡೆದಿವೆ.
ಬ್ಯಾಂಕು, ಹಣಕಾಸು ಸಂಸ್ಥೆಗಳ ಸಾಲದ ನೋಟಿಸುಗಳಿಂದಾಗಿ ಮಾನಸಿಕ ಹಿಂಸೆಗೆ ಒಳಗಾಗುವ ರೈತರು ಆತ್ಮಹತ್ಯೆಗೆ ಶರಣಾಗಿರುವ ಸಾವಿರಾರು ಘಟನೆಗಳು ನಡೆದಿವೆ. ಸಾಲದ ಸುಳಿಗೆ ಸಿಲುಕಿದ ರೈತರ ಸಾಲವನ್ನು ಪಾವತಿಸಲು ಕೇರಳ ಮಾದರಿಯಲ್ಲಿ ಕಾಯಿದೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಆತ್ಮಹತ್ಯೆಗೆ ಶರಣಾಗುವ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ 'ಋಣ ಪರಿಹಾರ ಆಯೋಗ' ಕಾನೂನು ಸಿದ್ಧಪಡಿಸಿದೆ. ಇದು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳ ತರುವಾಯ 'ಋಣ ಪರಿಹಾರ' ಮಹತ್ವದ ಯೋಜನೆಯಾಗಲಿದೆ.
ಋಣ ಪರಿಹಾರ ಆಯೋಗ
ರೈತರು ಪಡೆದಿರುವ ಸಾಲಕ್ಕಿಂತಹೆಚ್ಚು ಬಡ್ಡಿಯನ್ನು ಪಾವತಿಸಿ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇನ್ನೊಂದೆಡೆ ರೈತರು ಬರಗಾಲ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿ ಸಾಲ ಪಾವತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಋಣ ಪರಿಹಾರ ಆಯೋಗದ ನೆರವು ಪಡೆಯಬಹುದಾಗಿದೆ. ಈಗಾಗಲೇ ಕೇರಳದಲ್ಲಿ ಋಣ ಪರಿಹಾರ ಆಯೋಗ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಋಣ ಪರಿಹಾರ ಆಯೋಗ ಜಾರಿಗೆ ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ ಎಂದು ಹೇಳಲಾಗಿದೆ.
ರೈತರ ಸ್ಥಿತಿಗತಿಯ ಪರಿಶೀಲನೆ
ಬ್ಯಾಂಕುಗಳಿಂದ ಅಥವಾ ಸಾಲದಾತ ಸಂಸ್ಥೆಗಳಿಂದ ನೋಟಿಸ್ ಬಂದಾಗ ರೈತರು ಗಾಬರಿಯಾಗುತ್ತಾರೆ. ಸ್ವಾಭಿಮಾನಿ ರೈತರು ಮನನೊಂದು ಆತ್ಮಹತ್ಯೆಗೂ ಮುಂದಾಗುತ್ತಾರೆ. ಅಂತಹ ರೈತರಿಗೆ ಪರಿಹಾರ ಒದಗಿಸಲು ಆಯೋಗ ರಚಿಸಲಾಗುತ್ತಿದೆ. ಈ ಆಯೋಗವು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿದೆ. ಸಾಲದ ಸಂಕಷ್ಟದಲ್ಲಿ ಸಿಲುಕಿರುವ ರೈತರ ಸ್ಥಿತಿಗತಿಯ ಪರಿಶೀಲನೆ ನಡೆಸಿ ಅವರ ಸಾಲ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.
ಆಯೋಗದ ಸ್ವರೂಪ
ಹೈಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿರುವ ಋಣ ಪರಿಹಾರ ಆಯೋಗವು ನ್ಯಾಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಏಳು ಸದಸ್ಯರು, ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ರೈತರಾಗಲಿ, ಬ್ಯಾಂಕುಗಳಾಗಲಿ ಆಯೋಗದ ತೀರ್ಮಾನಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದಂತೆ ಕಾನೂನು ಸಿದ್ಧಪಡಿಸಲಾಗುತ್ತಿದೆ. ಒಟ್ಟಿನಲ್ಲಿ ರೈತರಿಗೆ ಪ್ರಾಮಾಣಿಕವಾಗಿ ಪರಿಹಾರ ಕೊಡಿಸುವುದು ಆಯೋಗದ ಕರ್ತವ್ಯ.
ರೈತರು ಏನು ಮಾಡಬಹುದು?
ಯಾವುದೇ ಬ್ಯಾಂಕುಗಳಿಂದ ಸಾಲದ ಕುರಿತಾದ ನೋಟಿಸು ಬಂದ ಕೂಡಲೇ ಆಯೋಗವನ್ನು ಸಂರ್ಪಸಿ ದೂರು ದಾಖಲಿಸಬಹುದು.ಈ ಬಗ್ಗೆ ಆಯೋಗ ವಿವರವಾದ ವಿಚಾರಣೆ ನಡೆಸಿ ಪರಿಶೀಲಿಸಲಿದೆ. ದೂರಿನನ್ವಯ ರೈತರ ಸ್ಥಿತಿಗತಿ ಅಧ್ಯಯನಕ್ಕೆ ಸ್ಥಳ ಪರಿಶೀಲನೆ ಕೂಡ ಮಾಡಬಹುದು. ರೈತರ ಪರಿಸ್ಥಿತಿ ಅಧ್ಯಯನದ ಬಳಿಕ ಬ್ಯಾಂಕುಗಳಿಗೂ ಬಡ್ಡಿ ಮನ್ನಾ ಸೇರಿ ಕೆಲವು ಸೂಚನೆಗಳನ್ನು ನೀಡಲಿದೆ.
ಸಾಲ ಮನ್ನಾ ಶಾಶ್ವತ ಪರಿಹಾರವಲ್ಲ
ಸರ್ಕಾರಗಳು ಕೈಗೊಳ್ಳುವ ಸಾಲಮನ್ನಾ ಯೋಜನೆಗಳು ಶಾಶ್ವತ ಪರಿಹಾರ ಒದಗಿಸುವುದಿಲ್ಲ. ಸಾಲ ಪಡೆದ ಬ್ಯಾಂಕುಗಳಿಗೆ ರೈತರು ಎಷ್ಟು ಹಣ ಪಾವತಿಸಬೇಕು,ಸರ್ಕಾರದಿಂದ ಯಾವ ರೀತಿಯ ನೆರವು ನೀಡಬೇಕು ಎಂಬ ಬಗ್ಗೆ ತೀರ್ಪು ಋಣಪರಿಹಾರ ಆಯೋಗ ನೀಡಲಿದೆ. ಆದ್ದರಿಂದಲೇ ಬ್ಯಾಂಕುಗಳ/ಸಾಲದಾತರ ಕಿರಿಕಿರಿಯಿಂದ ಮುಕ್ತಿ ನೀಡಲು ಆಯೋಗ ರಚಿಸಲಾಗುತ್ತಿದೆ.
ಋಣ ಪರಿಹಾರ ಕಾಯಿದೆ ಕೇಂದ್ರದ ಒಪ್ಪಿಗೆ ಸಿಗಲಿಲ್ಲ
ಗ್ರಾಮೀಣ ಭಾಗಗಳಲ್ಲಿ ಖಾಸಗಿ ಲೇವಾದೇವಿದಾರರು ಬಡ್ಡಿ ಮೂಲಕ ರೈತರ, ಬಡವರ ರಕ್ತ ಹೀರುತ್ತಾರೆ. ಇಂತವರನ್ನು ಬಗ್ಗು ಬಡಿಯುವ ನಿಟ್ಟಿನಲ್ಲಿ ಋಣ ಪರಿಹಾರ ಕಾಯಿದೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದ್ದರೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ. ರಾಜ್ಯ ಸರ್ಕಾರವು ದೇವರಾಜ ಅರಸು ಸರ್ಕಾರದ ಮಾದರಿಯಲ್ಲಿ ಕಾಯಿದೆ ರೂಪಿಸಿತ್ತು. ಖಾಸಗಿ ಲೇವಾದೇವಿದಾರರು ರೈತರಿಗೆ ಒಂದು ವರ್ಷದ ಅವಧಿಯಲ್ಲಿ ಯಾವುದೇ ಹಿಂಸೆ ನೀಡದಿರುವಂತೆ ಕಾಯಿದೆ ರೂಪಿಸಲಾಗಿತ್ತು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications