ಕೆಲವು ವಾರಗಳ ಹಿಂದೆ ಬಾಯಿಲರ್ ಕೋಳಿ ದರವು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಈಗ ಬೆಲೆಯು ಮತ್ತೆ ಏರಿಕೆಯಾಗುತ್ತಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷ ಹತ್ತಿರವಾಗುತ್ತಿದ್ದಂತೆ ಮೊಟ್ಟೆ ಮತ್ತು ಕೋಳಿ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತಾ ಸಾಗುತ್ತಿದೆ.
ಬೇಡಿಕೆ ಅಧಿಕವಾದಂತೆ ಬೆಲೆಯೂ ಕೂಡಾ ಅಧಿಕವಾಗಿದೆ. ಈ ಕೊಯ್ಲು ಋತುವಿನಲ್ಲಿ ಕಡಿಮೆ ಮೆಕ್ಕೆಜೋಳ ಮತ್ತು ಸೋಯಾ ಬೆಳೆ ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಕೋಳಿ ಸಾಕಣೆದಾರರು ಮತ್ತು ಕೈಗಾರಿಕೋದ್ಯಮಿಗಳು ಮತ್ತಷ್ಟು ಬೆಲೆ ಏರಿಕೆಯ ನಿರೀಕ್ಷೆಯನ್ನು ಹೊಂದಿದ್ದಾರೆ.

ಅಲ್ಪ ಮತ್ತು ಅನಿಯಮಿತ ಮಳೆಯಿಂದಾಗಿ ಖಾರಿಫ್ ಮೆಕ್ಕೆಜೋಳದ ಕೊಯ್ಲು ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಿಂದ ಬೆಳೆ ಹಾನಿಯಾದ ನಂತರ ಪಕ್ಷಿಗಳ ಆಹಾರದ ಮತ್ತೊಂದು ಪ್ರಮುಖ ಅಂಶವಾದ ಸೋಯಾ ಬೆಲೆ ಕೂಡಾ ಅಧಿಕವಾಗುತ್ತಿದೆ.
ಫೀಡ್ ಬೆಲೆ ಏರಿಕೆ
ಕರ್ನಾಟಕ ಕೋಳಿ ಸಾಕಣೆದಾರರ ಮತ್ತು ತಳಿಗಾರರ ಸಂಘದ (ಕೆಪಿಎಫ್ಬಿಎ) ಪ್ರಕಾರ, ಕೋಳಿ ಪಕ್ಷಿಗಳಿಗೆ ನೀಡುವ ಫೀಡ್ನಲ್ಲಿ ಶೇಕಡ 60 ರಷ್ಟು ಮೆಕ್ಕೆಜೋಳ, ಶೇಕಡ 20 ರಷ್ಟು ಸೋಯಾ ಮತ್ತು ಉಳಿದವು ವಿಟಮಿನ್ಗಳು, ಸಸ್ಯಜನ್ಯ ಎಣ್ಣೆ, ಧಾನ್ಯಗಳು, ಸೂರ್ಯಕಾಂತಿ ಸಾರ ಮತ್ತು ಮಿಶ್ರಣವಾಗಿದೆ.
ಆಕ್ವಾ, ಡೈರಿ ಮತ್ತು ಕೋಳಿ ಸಾಕಾಣಿಕೆ ಉದ್ಯಮಗಳನ್ನು ಪ್ರತಿನಿಧಿಸುವ 5-6 ಸಂಘಗಳು ಮೆಕ್ಕೆಜೋಳದ ಆಮದು ಮಾಡಿಕೊಳ್ಳಲು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಕ್ಕೆ ನಿರಂತರ ಪ್ರಾತಿನಿಧ್ಯವನ್ನು ನೀಡಿವೆ ಎಂದು ಕೆಪಿಎಫ್ಬಿಎ ಅಧ್ಯಕ್ಷ ನವೀನ್ ಪಸುಪರ್ತಿ ತಿಳಿಸಿದ್ದಾರೆ.
"ರೈತರು ಜನವರಿಯಲ್ಲಿ ಬೆಳೆ ಬಿತ್ತಲು ಪ್ರಾರಂಭಿಸುತ್ತಾರೆ ಮತ್ತು ನಮಗೆ ತಾಜಾ ಉತ್ಪನ್ನಗಳನ್ನು ಪಡೆಯಲು ಕೊಯ್ಲಿಗೆ 120 ದಿನಗಳು ಬೇಕಾಗುತ್ತದೆ. ಮೇಲಾಗಿ ಇದು ನೀರಾವರಿ ಬೆಳೆ, ಮಳೆಯಾಶ್ರಿತ ಬೆಳೆ ಅಲ್ಲ. ಆದ್ದರಿಂದ ವಿಸ್ತೀರ್ಣವು ಸೀಮಿತವಾಗಿರುತ್ತದೆ," ಎಂದು ನವೀನ್ ಪಸುಪರ್ತಿ ಹೇಳಿದ್ದಾರೆ.
"ಮೆಕ್ಕೆಜೋಳದ ಖಾರಿಫ್ ಕೊಯ್ಲು ಹಿಂದಿನ ವರ್ಷಕ್ಕಿಂತ ಶೇಕಡ 27 ರಷ್ಟು ಕಡಿಮೆಯಾಗಿದೆ ಮತ್ತು ಕೇವಲ 25 ದಿನಗಳಲ್ಲಿ ಬೆಲೆ ಟನ್ಗೆ 2,100 ರೂಪಾಯಿಯಿಂದ 2,500 ರೂಪಾಯಿಗೆ ಏರಿಕೆಯಾಗಿದೆ," ಎಂದು ಕೆಪಿಎಫ್ಬಿಎ ಅಧ್ಯಕ್ಷ ನವೀನ್ ಪಸುಪರ್ತಿ ತಿಳಿಸಿದರು.
ಇದೇ ರೀತಿ ಮುಂದುವರಿದರೆ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಕೋಳಿ ಸಾಕಣೆದಾರರು ಉತ್ಪಾದನೆಗೆ ದೊಡ್ಡ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂದರು. "ಆದ್ದರಿಂದ ನಾವು ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುವುದನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈವರೆಗೆ ಪ್ರತಿಕ್ರಿಯೆ ಪಾಸಿಟಿವ್ ಆಗಿದೆ," ಎಂದು ಪಶುಪರ್ತಿ ಹೇಳಿದರು. ಕೆಪಿಎಫ್ಬಿಎ ಮಾಜಿ ಅಧ್ಯಕ್ಷ ಸುಶಾಂತ್ ರೈ ಮಾತನಾಡಿ, ಮೂರು ದಿನಗಳಲ್ಲಿ ಸೋಯಾ ಬೆಲೆ ಟನ್ಗೆ 4,600 ರೂಪಾಯಿಯಿಂದ 4,800 ರೂಪಾಯಿಗೆ ಏರಿದೆ ಎಂದಿದ್ದಾರೆ.
ಎಥೆನಾಲ್ ಉದ್ಯಮದಿಂದ ಹೊಡೆತ
ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳವನ್ನು ಬಳಸುವ ಸರ್ಕಾರದ ಒತ್ತಡವು ಕೋಳಿ ಉದ್ಯಮಕ್ಕೆ ಬೆಳೆಯನ್ನು ಇನ್ನಷ್ಟು ವಿರಳವಾಗಿಸುತ್ತದೆ ಎಂದು ತಳಿಗಾರರು ಮತ್ತು ಉದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಪಿಷ್ಟ ಮತ್ತು ಎಥೆನಾಲ್ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಮೆಕ್ಕೆಜೋಳವನ್ನು ಪಡೆಯುತ್ತವೆ ಎಂದು ರೈ ಹೇಳಿದರು.
ಬೆಂಗಳೂರಿನ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್ಇಸಿಸಿ) ವಲಯದ ಅಧ್ಯಕ್ಷ ಬಿಆರ್ ಸಾಯಿನಾಥ್ ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಿದೆ ಮತ್ತು ಬೇಡಿಕೆಯೂ ಹೆಚ್ಚುತ್ತಿದೆ ಎಂದು ದೃಢಪಡಿಸಿದರು. ಹಿಂದಿನ ಹಣದುಬ್ಬರದ ಸ್ವಭಾವದಿಂದಾಗಿ ಅನೇಕರು ತರಕಾರಿಗಳನ್ನು ಆರಿಸುವುದರಿಂದ ಮೊಟ್ಟೆಗಳ ಬಳಕೆ ಅಧಿಕ ಮಾಡುತ್ತಿದ್ದಾರೆ.
More From GoodReturns

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications