ಕೊರೊನಾ ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗಳು ಎದುರಾಗಬಹುದು ಅಥವಾ ಹಣಕಾಸಿನ ಅಗತ್ಯ ಕಂಡುಬರುತ್ತದೆ ಎಂಬ ಕಾರಣಕ್ಕೆ ಅಂಚೆ ಕಚೇರಿಗಳಲ್ಲಿನ ಸಣ್ಣ ಉಳಿತಾಯ ಹೂಡಿಕೆದಾರರ ಅನುಕೂಲಕ್ಕೆ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ.
ಇದರಿಂದ ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ ಮತ್ತು ರೆಕರಿಂಗ್ ಡೆಪಾಸಿಟ್ (ಆರ್.ಡಿ.) ಖಾತೆದಾರರಿಗೆ ಅನುಕೂಲವಾಗಲಿದೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆದಾರರು ತಮ್ಮ ಉಳಿತಾಯ ಖಾತೆಗಳಿಗೆ ಹಣ ಹಾಕಲು 30ನೇ ಜೂನ್ 2020ರ ತನಕ ಅವಕಾಶ ನೀಡಲಾಗಿದೆ. ದೇಶದಾದ್ಯಂತ ಲಾಕ್ ಡೌನ್ ಇರುವುದರಿಂದ 2019- 20ರ ಅವಧಿಗೆ ಯಾರಿಗೆ ಈ ಮೊತ್ತವನ್ನು ಕಟ್ಟಲು ಸಾಧ್ಯವಾಗಿಲ್ಲವೋ ಅಂಥವರು ಈ ಅವಕಾಶ ಬಳಸಿಕೊಳ್ಳಬಹುದು.
ನವೀಕರಣ ಶುಲ್ಕ ಅಥವಾ ದಂಡ ಶುಲ್ಕ ಮನ್ನಾ
ಮಾರ್ಚ್ 31. 2020ಕ್ಕೆ ಕಡ್ಡಾಯವಾಗಿ ಕನಿಷ್ಠ ಮೊತ್ತವನ್ನು ತುಂಬಲೇ ಬೇಕಿದ್ದ ಖಾತೆದಾರರಿಗೆ ಜೂನ್ ತನಕ ಸಮಯ ನೀಡಿದ್ದು, ನವೀಕರಣ ಶುಲ್ಕ ಅಥವಾ ದಂಡ ಶುಲ್ಕ ಮನ್ನಾ ಮಾಡಲಾಗಿದೆ. ಇನ್ನು ಪಿಪಿಎಫ್ ಖಾತೆ ಮಾರ್ಚ್ 31ರಂದು ಮೆಚ್ಯೂರ್ ಆಗಿದ್ದಲ್ಲಿ (ಒಂದು ವಿಸ್ತರಣೆ ನಂತರವೂ) ಅದನ್ನು ಈಗ ಜೂನ್ 30, 2020ರ ತನಕ ವಿಸ್ತರಿಸಲು ಅವಕಾಶ ಇದೆ.
ಒಂದು ಕಂತಿನಲ್ಲಿ ಠೇವಣಿ ಕಟ್ಟಬಹುದು
ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಖಾತೆದಾರರು ತಮ್ಮ ಹೆಸರಲ್ಲೋ ಅಥವಾ ಅಪ್ರಾಪ್ತರ ಹೆಸರಲ್ಲಿ ಖಾತೆ ತೆರೆದಿದ್ದರೆ ಒಂದು ಕಂತಿನಲ್ಲಿ ಠೇವಣಿ ಕಟ್ಟಬಹುದು. ಆದರೆ ನಿಯಮಾನುಸಾರ, 2019-20ರ ಆರ್ಥಿಕ ವರ್ಷಕ್ಕೆ ಜೂನ್ 30ರೊಳಗೆ ಹಣ ಪಾವತಿ ಮಾಡಲೇಬೇಕು. ಇನ್ನು ಠೇವಣಿಯ ಗರಿಷ್ಠ ಮೊತ್ತದ ಮಿತಿಯನ್ನು ಮೀರುವಂತಿಲ್ಲ ಮತ್ತು ಒಂದು ವೇಳೆ ಮೀರಿದ್ದರೆ ಯಾವುದೇ ಬಡ್ಡಿ ನೀಡದೆ ಹಿಂತಿರುಗಿಸಲಾಗುತ್ತದೆ.
ವಿಥ್ ಡ್ರಾ ಮಾಡುವುದಕ್ಕೆ ಮಾರ್ಚ್ 31, 2020ರ ಬಾಕಿ ಲೆಕ್ಕಕ್ಕೆ
2020- 21 ಹಾಗೂ 2019- 20ನೇ ಸಾಲಿಗೆ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಠೇವಣಿ ಮಾಡಲು ಬಯಸುವವರು ಮಾಡಬಹುದು. ಆದರೆ ಅದನ್ನು ಪ್ರತ್ಯೇಕವಾಗಿ ಮಾಡಬೇಕು. ಐದು ವರ್ಷಗಳ ಒಂದು ಅವಧಿಯ ವಿಸ್ತರಣೆ ಸಮಯ ನಂತರವೂ ಪಿಪಿಎಫ್ ಖಾತೆ ಮೆಚ್ಯೂರ್ ಆಗಿದ್ದಲ್ಲಿ ಇನ್ನೂ ಐದು ವರ್ಷಕ್ಕೆ ವಿಸ್ತರಿಸಬೇಕಿದ್ದಲ್ಲಿ ಅದನ್ನು ಜೂನ್ 30, 2020ರೊಳಗೆ ಮಾಡಬಹುದು. ಪಿಪಿಎಫ್ ಮೇಲೆ ಸಾಲ ಪಡೆಯುವುದಕ್ಕೆ ಅಥವಾ ವಿಥ್ ಡ್ರಾ ಮಾಡುವುದಕ್ಕೆ ಮಾರ್ಚ್ 31, 2020ಕ್ಕೆ ಎಷ್ಟು ಮೊತ್ತ ಖಾತೆಯಲ್ಲಿ ಇರುತ್ತದೋ ಅದನ್ನು ಪರಿಗಣಿಸಲಾಗುತ್ತದೆ.
More From GoodReturns

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ



Click it and Unblock the Notifications