ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರಗಳನ್ನು ಒದಗಿಸುವ ಇಮುದ್ರಾ ಲಿಮಿಟೆಡ್ನ ಆರಂಭಿಕ ಷೇರು ಮಾರಾಟವು ಮೇ 20 ರಂದು ಆರಂಭವಾಗಲಿದೆ. ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಆರ್ಎಚ್ಪಿ) ಪ್ರಕಾರ ಆರಂಭಿಕ ಸಾರ್ವಜನಿಕ ಕೊಡುಗೆ ಐಪಿಒ ಮೇ 24 ರಂದು ಮುಕ್ತಾಯಗೊಳ್ಳುತ್ತದೆ. ಆಂಕರ್ ಹೂಡಿಕೆದಾರರಿಗೆ ಬಿಡ್ಡಿಂಗ್ ಮೇ 19 ರಂದು ತೆರೆಯುತ್ತದೆ.
ಕಂಪನಿಯು ತಾಜಾ ವಿತರಣೆಯ ಗಾತ್ರವನ್ನು 200 ಕೋಟಿಯಿಂದ 161 ಕೋಟಿಗೆ ಕಡಿತಗೊಳಿಸಿದೆ. ಬೆಂಗಳೂರು ಮೂಲದ ಕಂಪನಿಯು ಐಪಿಒ ಪೂರ್ವ ನಿಯೋಜನೆ ಅಡಿಯಲ್ಲಿ 16,03,617 ಷೇರುಗಳನ್ನು ರೂ 39 ಕೋಟಿಗೆ ಹಂಚಿಕೆ ಮಾಡಿದೆ.
ಅಲ್ಲದೆ, ಪ್ರವರ್ತಕರು ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 98.35 ಲಕ್ಷ ಷೇರುಗಳ ಮಾರಾಟಕ್ಕೆ ಆಫರ್ ಇದೆ. ಆಫರ್ ಭಾಗವಾಗಿ ವೆಂಕಟರಾಮನ್ ಶ್ರೀನಿವಾಸನ್ ಮತ್ತು ತಾರವ್ ಪ್ರೈವೇಟ್ ಲಿಮಿಟೆಡ್ ಕ್ರಮವಾಗಿ 32.89 ಲಕ್ಷ ಇಕ್ವಿಟಿ ಮತ್ತು 45.16 ಲಕ್ಷ ಇಕ್ವಿಟಿ ಷೇರುಗಳನ್ನು ಆಫ್ಲೋಡ್ ಮಾಡುತ್ತಾರೆ.

ಇದರ ಜೊತೆಗೆ ಕೌಶಿಕ್ ಶ್ರೀನಿವಾಸನ್ 5.1 ಲಕ್ಷ ಈಕ್ವಿಟಿ ಷೇರುಗಳನ್ನು, ಲಕ್ಷ್ಮಿ ಕೌಶಿಕ್ 5.04 ಲಕ್ಷ ಈಕ್ವಿಟಿ ಷೇರುಗಳನ್ನು, ಅರವಿಂದ್ ಶ್ರೀನಿವಾಸನ್, 8.81 ಲಕ್ಷ ಈಕ್ವಿಟಿ ಷೇರುಗಳನ್ನು ಮತ್ತು ಐಶ್ವರ್ಯ ಅರವಿಂದ್ 1.33 ಲಕ್ಷ ಈಕ್ವಿಟಿ ಷೇರುಗಳನ್ನು ಹಿಂತೆಗೆದುಕೊಳ್ಳಲಿದ್ದಾರೆ.
ಬರುವ ಆದಾಯವನ್ನು ಸಾಲವನ್ನು ಮರುಪಾವತಿಸಲು, ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಬೆಂಬಲಿಸಲು, ಉಪಕರಣಗಳನ್ನು ಖರೀದಿಸಲು, ಭಾರತ ಮತ್ತು ಸಾಗರೋತ್ತರ ಸ್ಥಳಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಡೇಟಾ ಕೇಂದ್ರಗಳಿಗೆ ಇತರ ಸಂಬಂಧಿತ ವೆಚ್ಚಗಳನ್ನು ಪಾವತಿಸಲು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ ಮೊತ್ತವನ್ನು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, eMudhra INC ನಲ್ಲಿ ಹೂಡಿಕೆ ಮಾಡಲು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಇಮುದ್ರಾ 2021 ರ ಹಣಕಾಸು ವರ್ಷದಲ್ಲಿ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರಗಳ ಜಾಗದಲ್ಲಿ 37.9 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದಲ್ಲಿನ ಅತಿದೊಡ್ಡ ಪರವಾನಗಿ ಪ್ರಮಾಣೀಕರಣ ಪ್ರಾಧಿಕಾರವಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications