ಯಾರು ಐಟಿಆರ್ ಫೈಲ್ ಮಾಡುವುದಿಲ್ಲವೋ ಅಂಥವರಿಗೆ ಬಜೆಟ್ 2021ರಲ್ಲಿ ಹೆಚ್ಚಿನ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅಥವಾ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಹಾಕಲು ಹಣಕಾಸು ಸಚಿವರು ಪ್ರಸ್ತಾವ ಮಾಡಿದ್ದಾರೆ. ಟಿಡಿಎಸ್ ಮತ್ತು ಟಿಸಿಎಸ್ ದರ ಹೆಚ್ಚಳಕ್ಕಾಗಿ ಕ್ರಮವಾಗಿ ಸೆಕ್ಷನ್ 206AB ಹಾಗೂ 206CCA ಸೇರ್ಪಡೆ ಮಾಡಲಾಗಿದೆ.
ಆದ್ದರಿಂದ ಟಿಡಿಎಸ್ ಅಥವಾ ಟಿಸಿಎಸ್ ದುಪ್ಪಟ್ಟು ಕಡಿತ ಆಗಲಿದ್ದು, ಕಾಯ್ದೆ ಪ್ರಕಾರ ಅನ್ವಯ ಆಗುವ ದರ ಅಥವಾ 5% ಇವೆರಡರಲ್ಲಿ ಯಾವುದು ಹೆಚ್ಚೋ ಅಷ್ಟನ್ನು ಕಡಿತ ಮಾಡಲಾಗುತ್ತದೆ. ಇದಕ್ಕೆ ಎರಡು ಷರತ್ತು ಸೇರಿಸಲಾಗಿದೆ. ಆ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಐಟಿಆರ್ ಫೈಲ್ ಮಾಡಿರಬಾರದು ಮತ್ತು ಆ ವ್ಯಕ್ತಿಯಿಂದ ಕಳೆದ ಎರಡು ವರ್ಷದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಎಂದು 50 ಸಾವಿರ ರುಪಾಯಿಗಿಂತ ಹೆಚ್ಚು ಮೊತ್ತವನ್ನು ಪ್ರತಿ ವರ್ಷ ಕಡಿತ ಮಾಡಿರಬೇಕು.
ಸದ್ಯಕ್ಕೆ ಇರುವ ನಿಯಮದ ಪ್ರಕಾರ, PAN ಕಾರ್ಡ್ ಒದಗಿಸದಿದ್ದಲ್ಲಿ ಹೆಚ್ಚಿನ ದರದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಹೆಚ್ಚಿನ ದರದಲ್ಲಿ ಹಾಕಲಾಗುತ್ತದೆ. ಈಗ ಹೊಸ ನಿಯಮದ ಪ್ರಕಾರ, ಯಾರು PAN ಕಾರ್ಡ್ ಇದ್ದರೂ ಐಟಿಆರ್ ಫೈಲ್ ಮಾಡುತ್ತಿಲ್ಲವೋ ಅಂಥವರನ್ನು ಗುರಿ ಮಾಡಿಕೊಂಡಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206AA ಮತ್ತು 206CC ಪ್ರಕಾರ, ಯಾವ ವ್ಯಕ್ತಿಯು PAN ಒದಗಿಸುವುದಿಲ್ಲವೋ ಅಂಥವರಿಗೆ ಹೆಚ್ಚಿನ ದರದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಕಡಿತ ಮಾಡಬಹುದು. ಬ್ಯಾಂಕ್ ಗೆ PAN ಮಾಹಿತಿ ನೀಡದಿದ್ದಲ್ಲಿ ಆಗ ಬಡ್ಡಿಯ ಗಳಿಕೆ ಮೇಲೆ ಹೆಚ್ಚಿನ ಟಿಡಿಎಸ್ (10% ಬದಲಿಗೆ 20%) ವಿಧಿಸಲಾಗುತ್ತದೆ.
ಹೆಚ್ಚು ಜನಕ್ಕೆ PAN ಕಾರ್ಡ್ ವಿತರಿಸಬೇಕು. ಅದರ ಬೆನ್ನಿಗೇ ಹೆಚ್ಚು ಜನ ಐಟಿಆರ್ ಫೈಲಿಂಗ್ ಮಾಡಬೇಕು ಎಂಬುದು ಉದ್ದೇಶವಾಗಿತ್ತು. ಈಗಿನ ನಿಯಮವು ಪೂರ್ತಿಯಾಗಿ ತೆರಿಗೆ ಕಡಿತ ಆಗುವ ಅಗತ್ಯ ಇರುವ ವಹಿವಾಟುಗಳಿಗೆ ಅನ್ವಯ ಆಗಲ್ಲ. ಉದಾಹರಣೆಗೆ ವೇತನ ಆದಾಯ, ಅನಿವಾಸಿಗಳಿಗೆ ಪಾವತಿ ಮುಂತಾದವು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications