ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಯಾವ ಹೂಡಿಕೆ ಅತೀ ಸುರಕ್ಷಿತ ಹೂಡಿಕೆ ಎಂದು ನೋಡುತ್ತೇವೆ. ಅಂತಹ ಸುರಕ್ಷಿತ ಹೂಡಿಕೆಗಳ ಆಯ್ಕೆಯ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಬರುವ ಆಯ್ಕೆಗಳು ಭಾರತೀಯ ಜೀವ ವಿಮಾ ನಿಗಮ ಯೋಜನೆ ಹೂಡಿಕೆ ಮತ್ತು ಅಂಚೆ ಕಚೇರಿ ಯೋಜನೆಯಲ್ಲಿನ ಹೂಡಿಕೆಯಾಗಿದೆ. ಅಂಚೆ ಕಚೇರಯಲ್ಲಿ ಮಾಡಿದ ಹೂಡಿಕೆ ಎಂದಿಗೂ ಸುರಕ್ಷಿತವಾಗಿದೆ.
ನಾವು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವು ಸುರಕ್ಷಿತವಾಗಿರುವುದು ಮಾತ್ರವಲ್ಲದೆ, ನಾವು ಉತ್ತಮ ರಿಟರ್ನ್ ಅನ್ನು ಪಡೆಯಲು ಕೂಡಾ ಸಾಧ್ಯವಾಗುತ್ತದೆ. ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಈ ಪೈಕಿ ರೆಕ್ಯೂರಿಂಗ್ ಡೆಪಾಸಿಟ್ ಕೂಡಾ ಒಂದಾಗಿದೆ. ಬ್ಯಾಂಕ್ನ ಎಫ್ಡಿ, ಆರ್ಡಿಗಳಿಗಿಂತ ಭಿನ್ನವಾದ, ಅಧಿಕ ರಿಟರ್ನ್ ನೀಡುವ ಯೋಜನೆ ಇದಾಗಿದೆ.

ಅಂಚೆ ಕಚೇರಿಯ ಈ ಯೋಜನೆ ಬಗ್ಗೆ ತಿಳಿಯಿರಿ
10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯಾದರೂ ಕೂಡಾ ಅಂಚೆ ಕಚೇರಿ ಆರ್ಡಿ ಖಾತೆಯನ್ನು ತೆರೆಯಬಹುದಾಗಿದೆ. ಹಾಗೆಯೇ ಇದು ಅತೀ ಸರಳವಾಗಿದೆ. ಹತ್ತು ತಿಂಗಳುಗಳ ಅವಧಿಗೆ ಮಾಸಿಕವಾಗಿ ಹೂಡಿಕೆಯನ್ನು ಡೆಪಾಸಿಟ್ದಾರರು ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಮಾಸಿಕ ಡೆಪಾಸಿಟ್ 100 ರೂಪಾಯಿ ಆಗಿದೆ. ಈ ಅಂಚೆ ಕಚೇರಿ ಆರ್ಡಿ ಯೋಜನೆಗೆ ಶೇಕಡ 5.8ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದಲ್ಲಿ ಈ ಬಡ್ಡಿದರವನ್ನು ಪರಿಷ್ಕರಿಸುತ್ತದೆ.
ಯಾವುದೆ ವ್ಯಕ್ತಿಯು ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಬೇಕು ಎಂದು ಬಯಸುವುದಾದರೆ ಅವರಿಗೆ ಈ ಅಂಚೆ ಕಚೇರಿ ಆರ್ಡಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ನಾವು ಮಾಡಿದ ಹೂಡಿಕೆಯು ಸುರಕ್ಷಿತ ಹಾಗೆಯೇ ಉತ್ತಮ ಬಡ್ಡಿದರವು ಕೂಡಾ ಲಭ್ಯವಾಗುತ್ತದೆ. ಇತರೆ ಹೂಡಿಕೆಗಳಿಗೆ ಹೋಲಿಕೆ ಮಾಡಿದಾಗ ಈ ಹೂಡಿಕೆ ಕಡಿಮೆ ಅಪಾಯಕಾರಿಯಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಿದ ಐದು ವರ್ಷದಲ್ಲಿ ಅಥವಾ 60 ತಿಂಗಳ ಅವಧಿಯಲ್ಲಿ ಹೂಡಿಕೆಯು ಮೆಚ್ಯೂರಿಟಿ ಹೊಂದುತ್ತದೆ. ಈ ಖಾತೆಯನ್ನು ತೆರೆದ ಬಳಿಕ ಹೂಡಿಕೆದಾರರು ತಮ್ಮ ಈ ಅಂಚೆ ಕಚೇರಿ ಆರ್ಡಿ ಖಾತೆಯಿಂದ ಶೇಕಡ 50ರಷ್ಟು ಮೊತ್ತವನ್ನು ವಿತ್ಡ್ರಾ ಮಾಡುವ ಅವಕಾಶವಿದೆ. ಆದರೆ ಹೂಡಿಕೆಯನ್ನು ಆರಂಭ ಮಾಡಿದ ಒಂದು ವರ್ಷದ ಬಳಿಕ ಮಾತ್ರವೇ ಶೇಕಡ 50ರಷ್ಟು ಹೂಡಿಕೆಯನ್ನು ವಿತ್ಡ್ರಾ ಮಾಡುವ ಅವಕಾಶವಿರುವುದು.
16 ಲಕ್ಷ ರೂಪಾಯಿ ರಿಟರ್ನ್ ಪಡೆಯುವುದು ಹೇಗೆ?
ಪ್ರಸ್ತುತ ಬಡ್ಡಿದರವು ಶೇಕಡ 5.8 ಆಗಿದ್ದು, ಬಡ್ಡಿದರದೊಂದಿಗೆ ಸೇರ್ಪಡೆಯಾಗಿ ನೀವು ಗರಿಷ್ಠ 16 ಲಕ್ಷ ರೂಪಾಯಿಯನ್ನು ರಿಟರ್ನ್ ಪಡೆಯಬಹುದಾಗಿದೆ. ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಅಂದರೆ ಪ್ರತಿ ದಿನ 333 ರೂಪಾಯಿ ಹೂಡಿಕೆ ಮಾಡಿ ಅಂತಿಮವಾಗಿ ಮೆಚ್ಯೂರಿಟಿ ವೇಳೆ 16 ಲಕ್ಷ ರೂಪಾಯಿಗೂ ಅಧಿಕ ರಿಟರ್ನ್ ಪಡೆಯಬಹುದು.
ಈ 16 ಲಕ್ಷ ರೂಪಾಯಿಯಲ್ಲಿ ನೀವು ಮಾಡಿರುವ ಹೂಡಿಕೆ 12 ಲಕ್ಷ ರೂಪಾಯಿ ಆಗಿರುತ್ತದೆ. ಉಳಿದಂತೆ ಬಡ್ಡಿದರವಾಗಿ ನಿಮಗೆ 4. 26 ಲಕ್ಷ ರೂಪಾಯಿ ಲಭ್ಯವಾಗಲಿದೆ. ಅಂದರೆ ಒಟ್ಟಾಗಿ 16. 26 ಲಕ್ಷ ರೂಪಾಯಿ ಮೆಚ್ಯೂರಿಟಿ ವೇಳೆ ಲಭ್ಯವಾಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಜಮೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವನ್ನು ನೀವು ಉಳಿತಾಯ ಮಾಡಲು ಅಂತಿಮವಾಗಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications