ಭಾರತೀಯ ಜೀವ ವಿಮಾ ನಿಗಮ ಎಲ್ಐಸಿಯಿಂದ ಧನ್ ವರ್ಷ ಎಂಬ ಹೊಸ ಪ್ಲಾನ್ ಅನಾವರಣಗೊಂಡಿದೆ. ಎಲ್ಐಸಿಯ ಪ್ಲಾನ್ ನಂಬರ್ 866 ಆಗಿರುವ ಧನ್ ವರ್ಷ ಕ್ಲೋಸ್ ಎಂಡೆಡ್ ಪ್ಲಾನ್ ಆಗಿದೆ.
ಎಲ್ಐಸಿಯ ಧನ್ ವರ್ಷ ಪಾಲಿಸಿಯು ಷೇರುಪೇಟೆಗೆ ಜೋಡಿತವಾಗದ ಸಿಂಗಲ್ ಪ್ರೀಮಿಯಮ್ ಸೇವಿಂಗ್ ಸ್ಕೀಮ್ ಆಗಿದೆ. ಒಮ್ಮೆ ಪ್ರೀಮಿಯಂ ಕಟ್ಟಿದರೆ ಸಾಕು.
ಇದು ಓಪನ್ ಎಂಡೆಡ್ ಪ್ಲಾನ್ ಅಲ್ಲ. ಕ್ಲೋಸ್ ಎಂಡೆಡ್ ಎಂದರೆ ಇದು ಆಫರ್ ಬಿಡುಗಡೆಯಾದ ಸಮಯದಲ್ಲಿ ಮಾತ್ರ ಪ್ಲಾನ್ ಕೊಳ್ಳಲು ಸಾಧ್ಯ. ಸೀಮಿತ ಅವಧಿಯವರೆಗೆ ಮಾತ್ರ ಪ್ಲಾನ್ ಪಡೆಯುವ ಅವಕಾಶ ಇರುತ್ತದೆ. ಪ್ಲಾನ್ ಅವಧಿ ಮುಗಿದ ಬಳಿಕ, ಅಂದರೆ ಮೆಚ್ಯುರಿಟಿ ಆದ ನಂತರವಷ್ಟೇ ರಿಟರ್ನ್ ಹಣ ಮರಳಿಪಡೆಯಲು ಸಾಧ್ಯ. ಬೇರೆ ಹಲವು ಎಲ್ಐಸಿ ಪ್ಲಾನ್ಗಳಲ್ಲಿರುವಂತೆ ಕಾಲ ಕಾಲಕ್ಕೆ ಡಿವಿಡೆಂಡ್ ಇತ್ಯಾದಿ ಸಿಗುವುದಿಲ್ಲ.
ಆದರೆ, ಒಮ್ಮೆ ಹೂಡಿಕೆ ಮಾಡಿದರೆ ನಿಮ್ಮ ಹಣ ಎರಡು ಪಟ್ಟಿಗಿಂತ ಹೆಚ್ಚಾಗಿ ವಾಪಸ್ ಆಗಿ ಬರುತ್ತದೆ ಎಂಬುದು ಗೊತ್ತಿರಲಿ. ಹಾಗೆಯೇ, ಈ ಪ್ಲಾನ್ ಅವಧಿಯಲ್ಲಿ ನೀವು ಸಾಲ ಪಡೆದುಕೊಳ್ಳುವ ಅವಕಾಶವೂ ಉಂಟು.
ಎರಡು ಆಯ್ಕೆ
ಎಲ್ಐಸಿ ಧನ್ ವರ್ಷ ಯೋಜನೆಯಲ್ಲಿ ಆಯ್ಕೆಗಳಿವೆ. 10 ವರ್ಷ ಮತ್ತು 15 ವರ್ಷದ ಅವಧಿಯ ಪ್ಲಾನ್ಗಳನ್ನು ಆರಿಸಿಕೊಳ್ಳಬಹುದು. ಹಾಗೆಯೇ ಎರಡು ರೀತಿಯ ಪ್ಲಾನ್ಗಳೂ ಇವೆ. ಒಂದು ನಿಮಗೆ ಒಳ್ಳೆಯ ರಿಟರ್ನ್ ತಂದುಕೊಡುತ್ತದೆ. ಇನ್ನೊಂದು, ಅಕಾಲಿಕ ಸಾವಾದರೆ ನಿಮ್ಮ ಅವಲಂಬಿತರಿಗೆ ದೊಡ್ಡ ಮೊತ್ತದ ಪರಿಹಾರ ಕೊಡುತ್ತದೆ.
ಮೊದಲನೆಯ ಆಯ್ಕೆ
ಮೊದಲನೆಯ ಪ್ಲಾನ್ನಲ್ಲಿ ಪ್ರೀಮಿಯಂ ಹಣ 8,86,750 ರೂ ಇದೆ. ಜಿಎಸ್ಟಿ ಸೇರಿ 9,26,654 ರೂ ಕಟ್ಟಬೇಕಾಗುತ್ತದೆ. ಗ್ಯಾರಂಟಿ ರಿಟರ್ನ್ 11,08,438 ರೂ ಇದೆ. 15 ವರ್ಷದ ಬಳಿಕ ಪಾಲಿಸಿ ಮೆಚ್ಯೂರ್ ಆದಾಗ ನಿಮಗೆ 21,25,000 ರೂ ಸಿಗುತ್ತದೆ.
ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ಕನಿಷ್ಠ 11,83,438 ರೂ ಹಣ ಲಭ್ಯವಾಗುತ್ತದೆ. ಪಾಲಿಸಿ ಆರಂಭವಾದ ಮೊದಲ ವರ್ಷದಿಂದಲೇ ಡೆತ್ ಬೆನಿಫಿಟ್ ಆರಂಭವಾಗುತ್ತದೆ.
ಎರಡನೆಯ ಆಯ್ಕೆ
ಎರಡನೇ ಪ್ಲಾನ್ನಲ್ಲಿ 7,98,700 ರೂಗಳ ಏಕಕಾಲದ ಪ್ರೀಮಿಯಮ್ ಅನ್ನು ಕಟ್ಟಬೇಕಾಗುತ್ತದೆ. ಜಿಎಸ್ಟಿ ಸೇರಿ ಇದು 8,34,642 ರೂ ಬೀಳುತ್ತದೆ. ಇದೂ ಕೂಡ 15 ವರ್ಷದವರೆಗೆ ಪ್ಲಾನ್ ಇರುತ್ತದೆ. ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರ ಸಾವಾದರೆ 80.27 ಲಕ್ಷ ರೂ ನಿಂದ 85.47 ಲಕ್ಷ ರೂವರೆಗೆ ಡೆತ್ ಬೆನಿಫಿಟ್ ಸಿಗುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications