ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ 19 ಪ್ರಭಾವವು ಕ್ಷೀಣಿಸುತ್ತಿದೆ. ಇದರ ಪರಿಣಾಮ ಜೀವ ವಿಮಾನಿಗಮ(LIC) ಪಾಲಿಸಿಗಳ ಡೆತ್ ಕ್ಲೇಮ್ ದರ ಶೇ 20ರಷ್ಟು ಕುಸಿತವನ್ನು ಕಂಡಿದೆ. ಆದರೂ ಮೊತ್ತವು 2020 ಕ್ಕಿಂತ ಹಿಂದಿನ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ವಿಮಾ ಸಂಸ್ಥೆ ವರದಿ ನೀಡಿದೆ.
''ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾವಿನ ಹಕ್ಕುಗಳ ಇತ್ಯರ್ಥ(settlement of death claims)ವು 5,743 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7,111 ಕೋಟಿ ರೂ ಸಂಗ್ರಹವಾಗಿತ್ತು'' ಎಂದು ಎಲ್ಐಸಿ ಅಧ್ಯಕ್ಷ ಎಂ ಆರ್ ಕುಮಾರ್ ಹೇಳಿದರು.
"ಆದ್ದರಿಂದ ಮೌಲ್ಯ ಸಾಕಷ್ಟು ಇಳಿಕೆಯಾಗಿದೆ, ಹಾಗೂ ಕೋವಿಡ್ ಆಧಾರದ ಮೇಲೆ ಯಾವುದೇ ಇಳಿಕೆ ಕಂಡುಬಂದಿದೆ ಎಂಬುದು ಸ್ಪಷ್ಟವಾಗಿದೆ... ಹಿಂದಿನ ವರ್ಷದ Q1 ರಿಂದ Q1ಕ್ಕೆ ಹೋಲಿಸಿದರೆ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಬಹುದು," ಕುಮಾರ್ ಹೇಳಿದರು.
ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುವುದಕ್ಕೂ ಮೊದಲು ಕ್ಲೈಮ್ ದರಗಳು ಬಹಳ ಸ್ಥಿರವಾಗಿವೆ ಎಂದು ಜೀವ ವಿಮಾ ನಿಗಮದ (ಎಲ್ಐಸಿ) ಕಾರ್ಯನಿರ್ವಾಹಕ ನಿರ್ದೇಶಕ ದಿನೇಶ್ ಪಂತ್ ಹೇಳಿದ್ದಾರೆ.ಕೋವಿಡ್ನಿಂದಾ ಗಿ ಕಳೆದ ಎರಡು ವರ್ಷಗಳಲ್ಲಿ ಕ್ಲೈಮ್ಗಳಲ್ಲಿ ಏರಿಕೆಯಾಗಿದೆ ಎಂದು ಎಂ ಆರ್ ಕುಮಾರ್ ತಿಳಿಸಿದರು.

"ಈಗ, ಪ್ರಸ್ತುತ ತ್ರೈಮಾಸಿಕದಿಂದ (ಸೆಪ್ಟೆಂಬರ್ 30, 2022 ಕ್ಕೆ ಕೊನೆ), ಇದು ಹೆಚ್ಚು ಸಾಮಾನ್ಯ ಸ್ಥಿತಿಗೆ ನೆಲೆಗೊಳ್ಳುವುದನ್ನು ನಾವು ನೋಡುತ್ತೇವೆ. ಇದು ಇನ್ನೂ 2020ರ ಹಿಂದಿನ(Pre-Covid) ಅಂಕಿಅಂಶಗಳಿಗೆ ಹಿಂತಿರುಗಿಲ್ಲ ಏಕೆಂದರೆ ಪರಿಣಾಮಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವು ಇರುತ್ತದೆ. IBNR ಕೆಲವು (ಇನ್ಕರ್ಡ್ ಆದರೆ ವರದಿಯಾಗದ) ಪ್ರಕರಣಗಳು ತಡವಾಗಿ ವರದಿಯಾಗುತ್ತವೆ" ಎಂದು ಪಂತ್ ಹೇಳಿದರು.
ಈ ಸಮಸ್ಯೆಗಳು ಈಗ ಇತ್ಯರ್ಥವಾಗುತ್ತಿವೆ ಮತ್ತು ಕೋವಿಡ್ ಪರಿಣಾಮವು ಕಡಿಮೆ ಬೆದರಿಕೆಯನ್ನು ತೋರುತ್ತಿದೆ ಎಂದು ಅಧಿಕಾರಿ ಹೇಳಿದರು.
"ಆದ್ದರಿಂದ ನಾವು ಮುಂದಿನ ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ, ಇದು ಕೋವಿಡ್- ಪೂರ್ವ ಮಟ್ಟಕ್ಕೆ ನೆಲೆಗೊಳ್ಳುತ್ತದೆ ಎಂದು ನಾವು ಆಶಾವಾದಿಗಳಾಗಿದ್ದೇವೆ" ಎಂದು ಪಂತ್ ಹೇಳಿದರು.
Q1 FY23 ಗೆ, ದಾಖಲೆಯ ಪ್ರೀಮಿಯಂ ಆದಾಯದ ಹಿನ್ನೆಲೆಯಲ್ಲಿ LIC ಯ ನಿವ್ವಳ ಲಾಭವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 2.94 ಕೋಟಿ ರೂ.ಗಳಿಂದ 682.88 ಕೋಟಿ ರೂ.ಗೆ ಜಿಗಿದಿದೆ.(ಪಿಟಿಐ)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications