ಸಂಬಳ ಪಡೆಯುವ ಉದ್ಯೋಗಿಗಳು ಸಾಮಾನ್ಯವಾಗಿ ನಿವೃತ್ತಿ ಯೋಜನೆ ಬಗ್ಗೆ ಚಿಂತೆ ಹೊಂದಿರುತ್ತಾರೆ. ನೀವು ಒಂದು ನಿರ್ದಿಷ್ಠ ವಯಸ್ಸಿನವರೆಗೆ ಮಾತ್ರ ಕೆಲಸ ಮಾಡಬಹುದು. ಇದಾದ ನಂತರ ನಿವೃತ್ತಿ ತೆಗೆದುಕೊಳ್ಳಬೇಕಾಗುತ್ತದೆ. ನಿವೃತ್ತಿಯ ನಂತರ ಖರ್ಚಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ನಿಯಮಿತ ಪಿಂಚಣಿ ಅಗತ್ಯ.
ಇದಕ್ಕಾಗಿ, ಎಲ್ಐಸಿಯ ಪಿಂಚಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಎಲ್ಐಸಿ ತನ್ನ ಗ್ರಾಹಕರಿಗೆ ಅನೇಕ ಪಿಂಚಣಿ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಒಂದು ಎಲ್ಐಸಿ ಸರಳ ಪಿಂಚಣಿ ಯೋಜನೆ ಆಗಿದೆ. ಇದು ನಾನ್ಲಿಂಕ್ಡ್, ಸಿಂಗಲ್ ಪ್ರೀಮಿಯಂ, ವರ್ಷಾಶನ ಯೋಜನೆಯಾಗಿದೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಪಿಂಚಣಿ ಪಡೆಯಬಹುದು.

ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸಿ
ಎಲ್ಐಸಿಯ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಒಮ್ಮೆ ಮಾತ್ರ ಮಾಡಬೇಕು. ಹೂಡಿಕೆದಾರರು ಎಲ್ಐಸಿ ಸರಳ ಪಿಂಚಣಿ ಯೋಜನೆಯನ್ನು ಒಂಟಿಯಾಗಿ ಅಥವಾ ಅವರ ಸಂಗಾತಿಯೊಂದಿಗೆ ಜಂಠಿಯಾಗಿ ಮಾಡುವ ಆಯ್ಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 40 ವರ್ಷ ಆಗಿದೆ. ಗರಿಷ್ಠ ವಯಸ್ಸು 80 ವರ್ಷ ಆಗಿದೆ. ಒಟ್ಟು ಮೊತ್ತದ ಹೂಡಿಕೆಯ ನಂತರ ನೀವು ಪಿಂಚಣಿ ಪಡೆಯಬಹುದು.
ಯೋಜನೆಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಹೂಡಿಕೆದಾರರು ಒಂದು ದೊಡ್ಡ ಮೊತ್ತದ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಯೋಜನೆಯ ವಿಶೇಷತೆಯೆಂದರೆ, ಒಬ್ಬ ವ್ಯಕ್ತಿಯು ಎಷ್ಟು ಪಿಂಚಣಿಯನ್ನು ಆರಂಭದಲ್ಲಿ ಪಡೆಯುತ್ತಾರೋ, ಅದೇ ಮೊತ್ತದ ಪಿಂಚಣಿಯು ಜೀವನದುದ್ದಕ್ಕೂ ಪಡೆಯುತ್ತದೆ. ಪ್ರಾರಂಭವಾದ 6 ತಿಂಗಳ ನಂತರ ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
ಈ ಆಯ್ಕೆಗಳು ಯೋಜನೆಯಲ್ಲಿವೆ ನೋಡಿ
ಈ ಯೋಜನೆಯಲ್ಲಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಿಂಚಣಿ ಪಡೆಯಬಹುದು. ಮಾಸಿಕ ಪಿಂಚಣಿ ಕನಿಷ್ಠ ಒಂದು ಸಾವಿರ ರೂಪಾಯಿ, ತ್ರೈಮಾಸಿಕ ಪಿಂಚಣಿ ಕನಿಷ್ಠ 3,000 ರೂಪಾಯಿ, ಅರ್ಧ ವಾರ್ಷಿಕ ಪಿಂಚಣಿ ಕನಿಷ್ಠ 6,000 ರೂಪಾಯಿ ಮತ್ತು ವಾರ್ಷಿಕ ಪಿಂಚಣಿ ಕನಿಷ್ಠ 12,000 ರೂಪಾಯಿ ಆಗಿದೆ.
ಈ ಯೋಜನೆಯಲ್ಲಿ ಗರಿಷ್ಠ ಪಿಂಚಣಿ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ನೀವು 42 ವರ್ಷ ವಯಸ್ಸಿನವರಾಗಿದ್ದರೆ ಮತ್ತು ನೀವು 30 ಲಕ್ಷ ರೂಪಾಯಿ ವರ್ಷಾಶನವನ್ನು ಖರೀದಿಸುತ್ತಿದ್ದರೆ, ನಿಮಗೆ ಮಾಸಿಕ 12,388 ರೂಪಾಯಿ ಪಿಂಚಣಿ ಸಿಗುತ್ತದೆ. ಈಗ ನೀವು ಪಿಂಚಣಿಯಲ್ಲಿ ಹೆಚ್ಚಿನ ಮೊತ್ತವನ್ನು ಪಡೆಯಲು ಬಯಸಿದರೆ, ಪ್ರೀಮಿಯಂ ಅಧಿಕ ಪಾವತಿ ಮಾಡಬೇಕಾಗುತ್ತದೆ.
ಸಾಲವೂ ಲಭ್ಯವಾಗುತ್ತೆ!
ನೀವು ಎಲ್ಐಸಿಯ ಸರಳ ಪಿಂಚಣಿ ಯೋಜನೆಯಡಿಯಲ್ಲಿಯೂ ಸಾಲವನ್ನು ತೆಗೆದುಕೊಳ್ಳಬಹುದು. ಯೋಜನೆ ಪ್ರಾರಂಭವಾದ ಆರು ತಿಂಗಳ ನಂತರ ಹೂಡಿಕೆದಾರರು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಕಾಯಿಲೆಯ ಚಿಕಿತ್ಸೆಗೆ ಹಣದ ಅಗತ್ಯವಿದ್ದರೆ, ನೀವು ಪಾಲಿಸಿಯಲ್ಲಿ ಡೆಪಾಸಿಟ್ ಮಾಡಿದ ಹಣವನ್ನು ಸಹ ಹಿಂಪಡೆಯಬಹುದು. ಪಾಲಿಸಿಯನ್ನು ಸರೆಂಡರ್ ಮಾಡಿದಾಗ, ಗ್ರಾಹಕರು ಮೂಲ ಬೆಲೆಯ ಶೇಕಡ 95 ರಷ್ಟು ಮೊತ್ತ ಪಡೆಯಬಹುದು.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications