ಎನ್ಪಿಎಸ್ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಈಗ ಹೊಸ ನಿಯಮ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ?. ಈ ಹೊಸ ನಿಯಮದ ಬಗ್ಗೆ, ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಒದಿ.
ಎನ್ಪಿಎಸ್ ಚಂದಾದಾರರಿಗೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಪಿಎಫ್ಆರ್ಡಿಎ) ಅನುಮತಿಸಲಾದ ಎಸ್ಎಲ್ಎಂ ಸೌಲಭ್ಯದ ಮೂಲಕ ಪಿಂಚಣಿದಾರರು ತಮ್ಮ ಹೂಡಿಕೆಯ ಶೇಕಡ 60 ರವರೆಗೆ ವರ್ಗಾವಣೆಯನ್ನು ಮಾಡಬಹುದಾಗಿದೆ.

ತನ್ನ ಪಿಂಚಣಿದಾರರಿಗೆ 75 ವರ್ಷ ಆಗುವವರೆಗೆ ಪಿಎಫ್ಆರ್ಡಿಎ ವ್ಯವಸ್ಥಿತ ಒಟ್ಟು ಮೊತ್ತ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಸೂಚಿಸಿದೆ. ಇದು ಎನ್ಪಿಎಸ್ ಸದಸ್ಯರಿಗೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಸಂಪೂರ್ಣ ಪಿಂಚಣಿ ನಿಧಿಯ ಶೇಕಡ 60 ವರೆಗೆ ವಿತ್ಡ್ರಾ ಮಾಡಲು ಅವಕಾಶವಿದೆ.
ಪ್ರಸ್ತುತ ಈ ಯೋಜನೆಯಿಂದ ನಿರ್ಗಮಿಸುವ ಮಾರ್ಗಸೂಚಿ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟ ಅಥವಾ ನಿವೃತ್ತಿಯನ್ನು ತಲುಪಿದ ಚಂದಾದಾರರು ವರ್ಷಾಶನವನ್ನು ತೆಗೆದುಕೊಳ್ಳುವುದನ್ನು ಮುಂದೂಡಬಹುದು. 75 ವರ್ಷ ವಯಸ್ಸಿನವರೆಗೆ ಯಾವುದೇ ರೀತಿಯಾಗಿ ಒಟ್ಟು ಮೊತ್ತವನ್ನು ವರ್ಗಾಯಿಸಬಹುದು. ಏಕಕಾಲದಲ್ಲಿ ಅಥವಾ ವಾರ್ಷಿಕ ಆಧಾರದ ಮೇಲೆ ಒಟ್ಟು ಮೊತ್ತವನ್ನು ಹಿಂಪಡೆಯಲು ನಿಮಗೆ ಆಯ್ಕೆ ಇದೆ.
60 ವರ್ಷ ತುಂಬಲಿರುವ ಅಥವಾ ಹೊಸ ಎಸ್ಎಲ್ಡಬ್ಲ್ಯೂ ಸೌಲಭ್ಯದ ಕುರಿತು ಯೋಜನೆಯನ್ನು ತೊರೆಯಲು ಯೋಚಿಸುತ್ತಿರುವ ಎಲ್ಲಾ ಹೂಡಿಕೆದಾರರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲು ಎನ್ಪಿಎಸ್ ಅಧಿಕಾರಿಗಳು ಸೂಚಿಸುವಂತೆ ಪಿಎಫ್ಆರ್ಡಿಎ ವಿನಂತಿಸಿದೆ.
ಎನ್ಪಿಎಸ್ ಹೂಡಿಕೆಗಳಿಗಾಗಿ ಕೆವೈಸಿ ಸಂಬಂಧಿತ ಕಾರ್ಯವಿಧಾನಗಳನ್ನು ಮೇಲ್ವಿಚಾರಣೆ ಮಾಡುವ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳನ್ನು ಪಿಎಫ್ಆರ್ಡಿಎ ತಮ್ಮ ಚಂದಾದಾರರಿಗೆ ಹೊಸ ಕಾರ್ಯಕ್ರಮದ ಕುರಿತು ತಿಳಿಸಲು ಕೇಳಿದೆ.
ಪಿಎಫ್ಆರ್ಡಿಎ ಅಕ್ಟೋಬರ್ 27, 2023 ರಂದು ಈ ಹೊಸ ಮೊತ್ತದ ವಾಪಸಾತಿ ಆಯ್ಕೆಯ ನಿರ್ದಿಷ್ಟತೆಗಳನ್ನು ವಿವರಿಸುವ ಸಲಹೆಯನ್ನು ಪ್ರಕಟಿಸಿದೆ. ಎಸ್ಎಲ್ಡಬ್ಲ್ಯೂ ಹಲವಾರು ಪ್ರಯೋಜನಗಳನ್ನು ಹೊಂದಿದೆ. ತೆರಿಗೆ ಪ್ರಯೋಜನ ಕೂಡಾ ಇದೆ.
ಹೂಡಿಕೆದಾರರು ನಿವೃತ್ತಿಯನ್ನು ಸುರಕ್ಷಿತವಾಗಿರಿಸಲು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಉತ್ತಮ ಆಯ್ಕೆಯಾಗಿದೆ. ಸದಸ್ಯರು ತಮ್ಮ ಶ್ರೇಣಿ I ಅಥವಾ ಶ್ರೇಣಿ II ಖಾತೆಗಳಿಗೆ ಮಾಸಿಕ ಕೊಡುಗೆ ನೀಡಲು ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚುವರಿಯಾಗಿ, ಕೊಡುಗೆ ಮೊತ್ತವನ್ನು ಮಾಸಿಕ ಬಡ್ಡಿಯೊಂದಿಗೆ ಜಮಾ ಮಾಡಲಾಗುತ್ತದೆ. ಎನ್ಪಿಎಸ್ ಬಡ್ಡಿದರವನ್ನು ಕಾಂಪೋಂಡ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದು ಅಂತಿಮವಾಗಿ ಗಣನೀಯ ಪ್ರಮಾಣದ ಕಾರ್ಪಸ್ ವೃದ್ಧಿಯಾಗಲು ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಶೇಕಡ 9 ರಿಂದ ಶೇಕಡ 12 ರ ನಡುವೆ ಬಡ್ಡಿದರ ಇರುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications