ಕೇಂದ್ರ ಸರ್ಕಾರವು ಹಲವಾರು ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದೆ. ಸಮಾಜದ ಎಲ್ಲ ಸೆಕ್ಷನ್ ಅಡಿಯಲ್ಲಿನ ಜನರಿಗೆ ಹಲವಾರು ಉಳಿತಾಯ ಹೂಡಿಕೆ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇಂತಹ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (ಎನ್ಎಸ್ಸಿ) ಯೋಜನೆಯು ನಿಮಗೆ ಉತ್ತಮ ರಿಟರ್ನ್ ಅನ್ನು ಪಡೆಯಲು ಸಹಾಯಕವಾಗಿದೆ. ಹಾಗೆಯೇ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಗೂ ಕೂಡಾ ಇದೆ.
ಎನ್ಎಸ್ಇ ಯೋಜನೆಯನ್ನು ನಾವು ಯಾವುದೇ ಅಂಚೆ ಕಚೇರಿಯಲ್ಲಿ ಖರರೀದಿ ಮಾಡಲು ಸಾಧ್ಯವಾಗುತ್ತದೆ. ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಖರೀದಿಸಬಹುದಾಗಿದೆ. ಸರ್ಕಾರವು ಇತ್ತೀಚೆಗೆ ಎನ್ಎಸ್ಸಿ ಬಡ್ಡಿದರವನ್ನು ಏರಿಸಿದೆ. ಎನ್ಎಸ್ಸಿ ಬಡ್ಡಿದರವನ್ನು ಡಿಸೆಂಬರ್ 2022ರ ಕೊನೆಯಲ್ಲಿ ಶೇಕಡ 6.8ರಿಂದ ಶೇಕಡ 7ಕ್ಕೆ ಏರಿಸಿದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಿ, ಅಧಿಕ ರಿಟರ್ನ್ ಪಡೆಯಬೇಕಾದರೆ, ಎನ್ಎಸ್ಇ ಅತೀ ಉತ್ತಮ ಆಯ್ಕೆಯಾಗಿದೆ.

ಪ್ಲ್ಯಾನ್ ಮಾಡಲು ಈ ತಿಂಗಳೇ ಕೊನೆ
ಎನ್ಎಸ್ಸಿಯಲ್ಲಿ ಉತ್ತಮ ರಿಟರ್ನ್ ಲಭ್ಯವಾಗುವುದು ಮಾತ್ರವಲ್ಲದೆ, ತೆರಿಗೆ ಉಳಿತಾಯ ಪ್ರಯೋಜನವನ್ನು ಎನ್ಎಸ್ಸಿ ನೀಡುತ್ತದೆ. ಹಣಕಾಸು ವರ್ಷ 2022-23 ಕೊನೆಯಾದ ಮಾರ್ಚ್ ತಿಂಗಳು ಇದಾದ ಕಾರಣ ನೀವು ಈ ತೆರಿಗೆ ಉಳಿತಾಯದ ಎನ್ಎಸ್ಇ ಯೋಜನೆಯಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಮಾಡಲು ಕೊನೆಯ ಅವಕಾಶವಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆದಾರರು 1.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ.
ನೀವು ಎನ್ಎಸ್ಇಯಲ್ಲಿ ಬರೀ 1 ಸಾವಿರ ರೂಪಾಯಿ ಕನಿಷ್ಠ ಹೂಡಿಕೆ ಮಾಡಬಹುದು. ಆದರೆ ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಮೊತ್ತದ ಮಿತಿಯಿಲ್ಲ. ಫಿಕ್ಸಿಡ್ ಡೆಪಾಸಿಟ್ ಬದಲಾಗಿ ಎನ್ಎಸ್ಇ ಯೋಜನೆಯನ್ನು ಆಯ್ಕೆ ಮಾಡುವವರು ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯ ಮೆಚ್ಯೂರಿಟಿ ಅವಧಿಯು 5 ವರ್ಷವಾಗಿದೆ. ನೀವು ಯಾವುದೇ ಅಂಚೆ ಕಚೇರಿಯಲ್ಲಿ ಎನ್ಎಸ್ಇ ಯೋಜನೆಯನ್ನು ಖರೀದಿ ಮಾಡಬಹುದು.
ಎನ್ಎಸ್ಸಿಯಲ್ಲಿ ಮೂರು ರೀತಿಯ ಹೂಡಿಕೆ ಆಯ್ಕೆಯಿದೆ. ಸಿಂಗಲ್ (ಏಕ), ಜಾಯಿಂಟ್ (ಜಂಠಿ) ಮತ್ತು ಜಾಯಿಂಟ್ ವಿತ್ ಸರ್ವವೈರ್ಶಿಪ್ (ಬದುಕುಳಿದವರೊಂದಿಗೆ ಜಂಠಿ ಖಾತೆ) ಎಂಬುವುದು ಮೂರು ಆಯ್ಕೆಯಾಗಿದೆ. ಏಕ ಹೂಡಿಕೆ ಎಂದರೆ ಓರ್ವ ವ್ಯಕ್ತಿಯು ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿದೆ. ಇಬ್ಬರು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದು ಜಾಯಿಂಟ್ ಯೋಜನೆಯಾಗಿದೆ. ಜಾಯಿಂಟ್ ವಿತ್ ಸರ್ವವೈರ್ಶಿಪ್ನಲ್ಲಿ ಇಬ್ಬರು ಜೊತೆಯಾಗಿ ಹೂಡಿಕೆ ಮಾಡುತ್ತಾರೆ. ಆದರೆ ಒಬ್ಬರಿಗೆ ಮೆಚ್ಯೂರಿಟಿ ಮೊತ್ತ ಲಭ್ಯವಾಗಲಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications