ನೀವು ಒಂದು ಸುರಕ್ಷಿತ ಹಾಗೂ ಖಚಿತವಾದ ಹೂಡಿಕೆಯನ್ನು ಹುಡುಕುತ್ತಿದ್ದರೆ ನಿಮ್ಮ ಸ್ಥಿರ ಠೇವಣಿ (Fixed Deposit) ಒಂದು ಉತ್ತಮ ಆಯ್ಕೆಯಾಗಿದೆ.
ಹೌದು,ಷೇರು ಮಾರುಕಟ್ಟೆಯ ಏರಿಳಿತಗಳ ಭಯವಿಲ್ಲದೆ ಸುರಕ್ಷಿತವಾದ ಹೂಡಿಕೆ ಮಾಡಿ ಖಚಿತವಾದ ಆದಾಯವನ್ನು ಗಳಿಸಲು ಬಯಸುವವರಿಗೆ ಈ ಯೋಜನೆ ಅತಿ ಮುಖ್ಯವಾದ ಯೋಜನೆ ಎಂದೇ ಹೇಳಬಹುದು. ಅದರಲ್ಲೂ ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ ವಿಶೇಷವಾದ ಎಫ್ಡಿ ಯೋಜನೆಯನ್ನು ಪರಿಚಯವನ್ನು ಮಾಡಿದೆ. ಈ ಎಫ್ಡಿಗಳ ಮೂಲಕ ನೀವು ಹೆಚಚ್ಇನ ಬಡ್ಡಿಯನ್ನು ಪಡೆದುಕೊಳ್ಳಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗಾಗಿ 390 ದಿನಗಳ ವಿಶೇಷ ಅವಧಿಯ ಸ್ಥಿರ ಠೇವಣಿ ಯೋಜನೆಯಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚಿನ ಅವಧಿಗೆ ಹಣವನ್ನು ಠೇವಣಿ ಇಟ್ಟು,ನೀವು ಹೆಚ್ಚಿನ ಹಣವನ್ನು ಸಂಪಾದನೆಯನ್ನು ಮಾಡಬಹುದು. ಸಾಮಾನ್ಯವಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಬೇರೆ ಬೇರೆ ಬಡ್ಡಿದರಗಳನ್ನು ನೀಡಲಾಗುತ್ತದೆ ಇದರಿಂದಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ಸಿಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಕಡತಗೊಳಿಸಿದ ನಂತರ ಬ್ಯಾಂಕ್ಗಳ ಎಫ್ ಡಿ ಬಡ್ಡಿದರಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ವಿವಿಧ ಸ್ಥಿರ ಠೇವಣಿಗಳ ಮೇಲೆ ಶೇ 3.25 ರಿಂದ ಶೇ 7.2 ವರೆಗೆ ಬಡ್ಡಿಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಅದರಲ್ಲೂ 390 ದಿನಗಳ ಈ ವಿಶೇಷ ಯೋಜನೆಗೆ ಆಕರ್ಷಕ ಬಡ್ಡಿದರವನ್ನು ಕೂಡ ನಿಗದಿ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕವಾಗಿ ಶೇ 6.70 ಬಡ್ಡಿ ದೊರೆಯುತ್ತದೆ. ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ವಾರ್ಷಿಕವಾಗಿ ಶೇ 7.20 ಬಡ್ಡಿ ಸಿಗಲಿದೆ.
ಸಾಮಾನ್ಯ ಗ್ರಾಹಕರು 390 ದಿನಗಳ ಸ್ಥಿರ ರೇವಣಿ ಯೋಜನೆಯಲ್ಲಿ 3,00,000 ರೂ. ಗಳ ಹಣವನ್ನು ಹೂಡಿಕ ಮಾಡಿದ್ದರೆ ಇವರಿಗೆ ಶೇ 6.70 ಬಡ್ಡಿ ಸೇರಿ ಮೆಚ್ಯೂರಿಟಿ ಅವಧಿಯ ನಂತರ ನಿಮಗೆ ಒಟ್ಟು 3,22,073 ರೂ. ಹಣ ದೊರೆಯುತ್ತದೆ. ಅಂದರೆ, ಬಡ್ಡಿಯ ರೂಪದಲ್ಲಿ ನಿಮಗೆ 22,073 ರೂ ಲಾಭ ನಿಮ್ಮ ಕೈ ಸೇರುತ್ತದೆ.
ಹಿರಿಯ ನಾಗರಿಕರಾಗಿ 3 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಅವರಿಗೆ ಬಡ್ಡಿ ದರ ಶೇ. 7.20 ಸಿಗುತ್ತದೆ.ನಿಮ್ಮ ಖಾತೆಗೆ ಒಟ್ಟು 3,23,768 ಹಣ ಜಮಾ ಆಗುತ್ತದೆ. ಅಂದರೆ, ನಿಮಗೆ ಸಿಗುವ ಬಡ್ಡಿಯ ಮೊತ್ತ 23,768. ಸಾಮಾನ್ಯ ಗ್ರಾಹಕರಿಗಿಂತ ಸುಮಾರು 1,700 ಹೆಚ್ಚಿನ ಲಾಭವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬಹುದು.
ಅಲ್ಪಾವಧಿಗೆ ಹಣವನ್ನು ಮಾಡಬೇಕೆಂದುಕೊಂಡವರಿಗೆ ಈ ಯೋಜನೆ ಉತ್ತಮವಾದ ಆಯ್ಕೆಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇರುವಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಲಾಭವನ್ನು ಗಳಿಸುವುದರ ಜೊತೆಗೆ ಹೆಚ್ಚಿನ ಸುರಕ್ಷಿತ ಕೂಡ ಸಿಗುತ್ತದೆ.
ನೀವು ಎಲ್ಲಿ ಹಣವನ್ಉ ಹೂಡಿಕೆ ಮಾಡಬೇಕೆಂದುಕೊಂಡರೆ ಅವರು ಹೇಳುವ ಎಲ್ಲಾ ಅಂಶಗಳನ್ನು ಗಮನದಲಿಟ್ಟುಕೊಂಡು ಹೂಡಿಕೆ ಮಾಡುವುದು ಉತ್ತಮ ಹೇಳಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications