ಇಂದು ಜನರಿಗೆ ಹಲವಾರು ಹೂಡಿಕೆ ಆಯ್ಕೆಗಳು ಲಭ್ಯವಿದೆ. ಆದರೆ ನೀವು ದೀರ್ಘಕಾಲದವರೆಗೆ ನಿಮ್ಮ ಹಣವನ್ನು ಡೆಪಾಸಿಟ್ ಮಾಡುವ ಮತ್ತು ಉತ್ತಮ ಬಡ್ಡಿಯನ್ನು ಪಡೆಯುವ ಯೋಜನೆಯ ಹುಡುಕಾಟದಲ್ಲಿದ್ದರೆ ನಿಮಗಿರುವ ಉತ್ತಮ ಆಯ್ಕೆಗಳಲ್ಲಿ ಅಂಚೆ ಕಚೇರಿ ಯೋಜನೆ ಕೂಡಾ ಒಂದಾಗಿದೆ.
ಹಾಗಾದರೆ ನಿಮಗೆ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಅಂಚೆ ಕಛೇರಿಯ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ, ನಿಮ್ಮ ಮೊತ್ತವು 115 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತದೆ. ಪ್ರಸ್ತುತ, ಈ ಯೋಜನೆಯಲ್ಲಿ ಶೇಕಡ 7.5 ರ ಬಡ್ಡಿಯನ್ನು ನೀಡುತ್ತದೆ. ಹಾಗಾದರೆ ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿಯಲು ಮುಂದೆ ಓದಿ....

ಒಂದು ಸಾವಿರ ರೂಪಾಯಿ ಹೂಡಿಕೆ ಮಾಡಿ
ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ನೀವು ಕನಿಷ್ಟ 1000 ರೂಪಾಯಿ ಮತ್ತು 100 ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಒಳ್ಳೆಯ ವಿಷಯವೆಂದರೆ ಈ ಯೋಜನೆಯಡಿಯಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು. ಇದಲ್ಲದೆ, ಏಕ ಮತ್ತು ಜಂಟಿ ಖಾತೆಯನ್ನು ತೆರೆಯುವ ಆಯ್ಕೆಯನ್ನು ಸಹ ನಿಮಗೆ ನೀಡಲಾಗಿದೆ.
ಹಣ ಡಬಲ್ ಆಗಲಿದೆ ನೋಡಿ
ಶೇಕಡ 7.5 ರಷ್ಟು ಬಡ್ಡಿದರವನ್ನು ನೀವು ಈ ಯೋಜನೆಯಡಿಯಲ್ಲಿ ಪಡೆಯಬಹುದಾಗಿದೆ. ಈಗ ಈ ಯೋಜನೆಯಲ್ಲಿ ನಿಮ್ಮ ಹಣ 115 ತಿಂಗಳಲ್ಲಿ ಡಬಲ್ ಆಗುತ್ತದೆ. ಅಂದರೆ, ನೀವು ಒಂದು ಲಕ್ಷ ರೂಪಾಯಿಯನ್ನು ಡೆಪಾಸಿಟ್ ಮಾಡಿದರೆ, ಅದು 115 ತಿಂಗಳಲ್ಲಿ 2 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ನೀವು 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ 20 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಕೆವಿಪಿಯಲ್ಲಿ ಹೂಡಿಕೆ ಏಕೆ, ಪ್ರಯೋಜನಗಳೇನು?
* ಈ ಯೋಜನೆಯು ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಕ್ಕೆ ಒಳಗಾಗುವುದಿಲ್ಲ. ನೀವು ಗ್ಯಾರಂಟಿ ಆದಾಯವನ್ನು ಪಡೆಯಬಹುದು.
* ನೀವು ಕನಿಷ್ಟ ಒಂದು ಸಾವಿರ ರೂಪಾಯಿ ಮೊತ್ತದೊಂದಿಗೆ ಕೆವಿಪಿ ಖಾತೆಯಲ್ಲಿ ಹೂಡಿಕೆಯನ್ನು ಪ್ರಾರಂಭ ಮಾಡಬಹುದು. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಯಾವುದೇ ಗರಿಷ್ಠ ಮಿತಿ ಇಲ್ಲ.
* ನೀವು ಯಾವುದೇ ಅಂಚೆ ಕಛೇರಿಯಲ್ಲಿ ಈ ಯೋಜನೆಯ ಖಾತೆಯನ್ನು ತೆರೆಯಬಹುದು.
* ಈ ಯೋಜನೆಯು 115 ತಿಂಗಳುಗಳಲ್ಲಿ ಮೆಚ್ಯೂರ್ ಆಗುತ್ತದೆ. ಆದರೆ ನೀವು ಮೊತ್ತವನ್ನು ಹಿಂಪಡೆಯುವವರೆಗೂ ಕೆವಿಪಿಯ ಮೆಚ್ಯೂರಿಟಿ ಆದಾಯ ಮೇಲೆ ಬಡ್ಡಿ ಪಡೆಯಬಹುದಾಗಿದೆ.
* ಸುರಕ್ಷಿತ ಸಾಲವನ್ನು ಪಡೆಯಲು ನಿಮ್ಮ ಕೆವಿಪಿ ಪ್ರಮಾಣಪತ್ರವನ್ನು ನೀವು ಬಳಸಬಹುದು.
* ನಾಮಿನೇಷನ್ ಸೌಲಭ್ಯವು ಕೂಡಾ ಲಭ್ಯವಿದೆ.
ಯಾರು ಖಾತೆಯನ್ನು ತೆರೆಯಬಹುದು?
* ಈ ಯೋಜನೆಯ ಅಡಿಯಲ್ಲಿ ಯಾವುದೇ ವಯಸ್ಕ ವ್ಯಕ್ತಿ ಏಕ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು.
* ಇದಲ್ಲದೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಗು ತನ್ನ ಹೆಸರಿನಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ತೆಗೆದುಕೊಳ್ಳಬಹುದು.
* ಒಬ್ಬ ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥರ ಪರವಾಗಿ ಪಾಲಕರು ಖಾತೆಯನ್ನು ತೆರೆಯಬಹುದು.
* ಖಾತೆಯನ್ನು ತೆರೆಯುವಾಗ, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಕೆವಿಪಿ ಅರ್ಜಿ ನಮೂನೆ ಮುಂತಾದ ದಾಖಲೆಗಳು ಬೇಕಾಗಬಹುದು.
ಅಕಾಲಿಕ ವಾಪಸಾತಿ ನಿಯಮಗಳು
ಕೆವಿಪಿ ಖಾತೆಯಲ್ಲಿ ಡೆಪಾಸಿಟ್ ಮಾಡಿದ ದಿನಾಂಕದಿಂದ 2 ವರ್ಷ ಮತ್ತು 6 ತಿಂಗಳ ನಂತರ ಅವಧಿಪೂರ್ವವಾಗಿ ಡೆಪಾಸಿಟ್ ಅನ್ನು ಹಿಂಪಡೆಯಬಹುದಾಗಿದೆ. ಆದಾಗ್ಯೂ, ಕೆಲವು ಷರತ್ತುಗಳು ಇದೆ. ಕೆವಿಪಿ ಹೊಂದಿರುವವರು ಅಥವಾ ಜಂಟಿ ಖಾತೆಯ ಸಂದರ್ಭದಲ್ಲಿ, ಯಾವುದೇ ಅಥವಾ ಎಲ್ಲಾ ಖಾತೆದಾರರ ಮರಣದ ಸಂದರ್ಭದಲ್ಲಿ ನೀವು ಅಕಾಲಿಕವಾಗಿ ಡೆತ್ ಆದರೆ ಹಣವನ್ನು ಅಕಾಲಿಕವಾಗಿ ವಿತ್ಡ್ರಾ ಮಾಡಬಹುದು. ನ್ಯಾಯಾಲಯದ ಆದೇಶದ ಮೇರೆಗೆ ಹಣವನ್ನು ವಿತ್ಡ್ರಾ ಮಾಡಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications