ದಕ್ಷಿಣ ರೈಲ್ವೆಯು ಚೆನ್ನೈ ಸೆಂಟ್ರಲ್ ಮತ್ತು ಕೊಟ್ಟಾಯಂ ನಡುವೆ ವಂದೇ ಭಾರತ್ ಶಬರಿ ವಿಶೇಷ ರೈಲನ್ನು ಆರಂಭ ಮಾಡಲಾಗುವುದು ಎಂದು ಘೋಷಿಸಿದೆ. ಕಾಚೇಗೌಡ ಮತ್ತು ಕೊಲ್ಲಂ ವಿಶೇಷ ದರದ ರೈಲು ಕೂಡಾ ಆರಂಭದ ಘೋಷಣೆ ಮಾಡಿದೆ. ಶಬರಿಮಲೆ ಸೀಸನ್ನಲ್ಲಿ ಪ್ರಯಾಣಿಕರ ಪ್ರಮಾಣ ಅಧಿಕವಾಗಿದೆ. ಈ ಕಾರಣದಿಂದಾಗಿ ದಕ್ಷಿಣ ರೈಲ್ವೆ ಈ ನಿರ್ಧಾರ ಮಾಡಿದೆ.
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ದಕ್ಷಿಣ ರೈಲ್ವೆ ಈ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಿದೆ. "ವಂದೇಭಾರತ್ ಶಬರಿ ವಿಶೇಷ ರೈಲುಗಳನ್ನು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಕೊಟ್ಟಾಯಂ - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ನಿರ್ವಹಿಸಲಾಗುವುದು," ಎಂದು ತಿಳಿಸಿದೆ. ರೈಲಿನ ಸಂಖ್ಯೆ, ಸಮಯ ವಿವರ ಈ ಕೆಳಗಿದೆ ಮುಂದೆ ಓದಿ....

ವಿಶೇಷ ರೈಲುಗಳ ಸಮಯ
* ರೈಲು ಸಂಖ್ಯೆ 06151 ಎಂಜಿಆರ್ ಚೆನ್ನೈ ಸೆಂಟ್ರಲ್-ಕೊಟ್ಟಾಯಂ ವಂದೇ ಭಾರತ್ ವಿಶೇಷ ರೈಲು ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ಬೆಳಿಗ್ಗೆ 4: 30 ಕ್ಕೆ ಹೊರಟು ಡಿಸೆಂಬರ್ 15, 17, 22 ಮತ್ತು 24 ರಂದು ಅದೇ ದಿನ ಸಂಜೆ 4:15 ಕ್ಕೆ ಕೊಟ್ಟಾಯಂ ತಲುಪಲಿದೆ.
* ರೈಲು ಸಂಖ್ಯೆ 06152 ಕೊಟ್ಟಾಯಂ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಡಿಸೆಂಬರ್ 16, 18, 23 ಮತ್ತು 25 ರಂದು ಬೆಳಿಗ್ಗೆ 4:40 ಕ್ಕೆ ಕೇರಳ ಪಟ್ಟಣದಿಂದ ಹೊರಟು ಅದೇ ದಿನ ಸಂಜೆ 5:15 ಕ್ಕೆ ಹಿಂದಿರುಗಲಿದೆ. ರೈಲು ತನ್ನ ಪ್ರಯಾಣದ ಸಮಯದಲ್ಲಿ ಕಟ್ಪಾಡಿ, ಸೇಲಂ, ಪಾಲಕ್ಕಾಡ್ ಮತ್ತು ಆಲುವಾ ಸೇರಿದಂತೆ ಗೊತ್ತುಪಡಿಸಿದ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
* ರೈಲು ಸಂಖ್ಯೆ 07109 ಕಾಚೆಗುಡ- ಕೊಲ್ಲಂ ಡಿಸೆಂಬರ್ 18 ಮತ್ತು 25 ರಂದು ರಾತ್ರಿ 11:45 ಕ್ಕೆ ಕಾಚೆಗುಡ (ತೆಲಂಗಾಣ) ದಿಂದ ಹೊರಡಲಿದೆ ಮತ್ತು ಜನವರಿ 1, 8 ಮತ್ತು 15 ರಂದು ಹೊರಡಲಿದೆ. ರೈಲು ತನ್ನ ಪ್ರಯಾಣದ ಮೂರನೇ ದಿನದಂದು ಬೆಳಿಗ್ಗೆ 5:30 ಕ್ಕೆ ಕೊಲ್ಲಂಗೆ ಆಗಮಿಸುತ್ತದೆ.
* ರೈಲು ಸಂಖ್ಯೆ 07110 ಕೊಲ್ಲಂ - ಕಾಚೇಗೌಡ ವಿಶೇಷ ದರದ ವಿಶೇಷ ರೈಲು ಡಿಸೆಂಬರ್ 20 ಮತ್ತು 27 ರಂದು ಬೆಳಿಗ್ಗೆ 10:45 ಕ್ಕೆ ಕೊಲ್ಲಂನಿಂದ ಹೊರಡಲಿದೆ. ಜನವರಿ 3, 10 ಮತ್ತು 17 ರಂದು ಅದೇ ಸಮಯದಲ್ಲಿ ಹೊರಡಲಿದೆ. ರೈಲು ತನ್ನ ಹಿಂದಿರುಗುವ ಸಮಯದಲ್ಲಿ ಎರಡನೇ ದಿನ ಮಧ್ಯಾಹ್ನ 3:45 ಕ್ಕೆ ಕಾಚೇಗೌಡ ತಲುಪಲಿದೆ.
ಕೆಲವು ದಿನಗಳ ಹಿಂದೆ ಯಾತ್ರಾರ್ಥಿಗಳ ಹಠಾತ್ ಏರಿಕೆಯ ನಂತರ ಶಬರಿಮಲೆ ಬೆಟ್ಟದ ದೇಗುಲದಲ್ಲಿ ದುರಾಡಳಿತಕ್ಕೆ ಸಂಬಂಧಿಸಿದ ಸಮಸ್ಯೆ ಸ್ಫೋಟವಾಗಿದೆ. ಆದ್ದರಿಂದ ಭಾರತೀಯ ರೈಲ್ವೇ ಈ ಕ್ರಮಕ್ಕೆ ಮುಂದಾಗಿದೆ. ಮಂಡಲಂ-ಮಕರವಿಳಕ್ಕು ಸೀಸನ್ನಲ್ಲಿ ಈ ವರ್ಷ ನವೆಂಬರ್ 17 ರಂದು ಪ್ರಾರಂಭವಾಗಿದೆ. ವರ್ಷದ ಈ ಸಮಯದಲ್ಲಿ ಭಾರೀ ಜನದಟ್ಟಣೆಗೆ ಕಾರಣವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಿರ್ವಹಣೆ ಸಮಸ್ಯೆಗಳ ಬಗ್ಗೆ ಕೇರಳ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಡಿಸೆಂಬರ್ 13 ರಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಶಬರಿಮಲೆಯ ಅಯ್ಯಪ್ಪ ದೇಗುಲದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ದೇವಾಲಯದ ವಿಷಯಗಳಲ್ಲಿ ಸರ್ಕಾರಿ ಶ್ರದ್ಧೆಯಿಂದ ಮಧ್ಯಪ್ರವೇಶಿಸುತ್ತಿದೆ ಎಂದು ಪ್ರತಿಪಾದಿಸಿದರು.


Click it and Unblock the Notifications