ಬ್ಯಾಂಕ್ ಖಾತೆಯಲ್ಲಿ ದಿಢೀರನೇ ನಮಗೆ ಕಾರಣ ತಿಳಿಯದೆಯೇ ಅಧಿಕ ಮೊತ್ತ ವಿತ್ಡ್ರಾ ಆದರೆ ಆತಂಕ, ಕೋಪ ಬರುವುದಿಲ್ಲವೇ?. ಇತ್ತೀಚೆಗೆ ಈ ರೀತಿ ನಿಮ್ಮ ಖಾತೆಯಿಂದ ಮೊತ್ತ ಕಡಿತವಾಗಿದೆಯೇ?.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್ಬಿಐ) 295 ರೂಪಾಯಿ ಕಡಿತವಾಗಿದೆ. ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್ಎಸಿಎಚ್) (NACH) ಕಾರಣದಿಂದಾಗಿ ಮೊತ್ತ ಕಡಿತವಾಗಿದೆ. ಆದರೆ 436 ರೂಪಾಯಿ ಕಡಿತವಾಗಿದೆಯೇ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು 2015ರಂದು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷ ಭಿಮಾ ಯೋಜನೆ (ಪಿಎಂಎಸ್ಬಿವೈ) ಅನ್ನು ಜಾರಿ ಮಾಡಿದೆ. ಇದು ಸರ್ಕಾರದ ವಿಮಾ ಸುರಕ್ಷತಾ ಯೋಜನೆಯಾಗಿದೆ. ಎಸ್ಬಿಐ, ಅಂಚೆ ಕಚೇರಿ ಅಥವಾ ಬೇರೆ ಯಾವುದೇ ಬ್ಯಾಂಕ್ ಖಾತೆಯಲ್ಲಿ ಆಟೋ ಡೆಬಿಟ್ ಆಯ್ಕೆ ಮಾಡಿದ್ದರೆ, ನಿಮ್ಮ ಖಾತೆಯಿಂದ ಮೊತ್ತವು ಕಡಿತವಾಗುತ್ತದೆ.

18 ವರ್ಷದಿಂದ 50 ವರ್ಷದವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿಯಲ್ಲಿ ಆಟೋ ಡೆಬಿಟ್ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಪ್ರಮುಖ ಕೆವೈಸಿ ಫಾರ್ಮ್ ಆಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಜೂನ್ನಿಂದ 1ರಿಂದ ಮೇ 31ರವರೆಗಿನ 12 ತಿಂಗಳ ಅವಧಿಯ 2 ಲಕ್ಷ ರೂಪಾಯಿ ಮೊತ್ತದ ಜೀವ ವಿಮಾ ಪಾಲಿಸಿಯನ್ನು ರಿನಿವಲ್ ಮಾಡುವ ಅವಕಾಶವಿದೆ.
ವಾರ್ಷಿಕ ವಿಮೆಯಾಗಿ 436 ರೂಪಾಯಿ ಕಡಿತ
ಈ ವಿಮೆಯಲ್ಲಿ 2 ಲಕ್ಷ ರೂಪಾಯಿಯ ರಿಸ್ಕ್ ಕವರೇಜ್ ಇದೆ. ವಿಮೆ ಪಡೆದ ವ್ಯಕ್ತಿಯು ಯಾವುದೇ ಕಾರಣದಿಂದಲೂ ಸಾವನ್ನಪ್ಪಿದರೆ ಈ ವಿಮೆಯಲ್ಲಿ ರಿಸ್ಕ್ ಕವರೇಜ್ ನೀಡಲಾಗುತ್ತದೆ. ನೀವು ಯೋಜನೆಯಲ್ಲಿ ಮಾಡಿದ ಆಯ್ಕೆಯ ಆಧಾರದಲ್ಲಿ ವಾರ್ಷಿಕ ಪ್ರೀಮಿಯಂ 436 ರೂಪಾಯಿ ಆಗಿದೆ. ಈ ಮೊತ್ತವು ಪ್ರತಿ ವರ್ಷವೂ ಕೂಡಾ ಮೇ 31ಕ್ಕೂ ಮುನ್ನ ನಿಮ್ಮ ಖಾತೆಯಿಂದ ಅಂದರೆ ಚಂದಾದಾರರ ಖಾತೆಯಿಂದ ಕಡಿತ ಮಾಡಲಾಗುತ್ತದೆ.
ಭಾರತೀಯ ಜೀವ ವಿಮಾ ಕಂಪನಿ ಮತ್ತು ಎಲ್ಲಾ ಇತರೆ ಜೀವ ವಿಮಾದಾರರು ಈ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತಾರೆ. ಹಾಗೆಯೇ ಆ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರಿಗೆ ಅಗತ್ಯ ಅನುಮೋದನೆಗಳೊಂದಿಗೆ ನಿಯಮದ ಪ್ರಕಾರ ಈ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಹಾಗೆಯೇ ಈ ಯೋಜನೆಗೆ ಸೇರ್ಪಡೆಯಾಗಲು ಬಯಸುವ ಗ್ರಾಹಕರಿಗೆ ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡುವುದು ಬ್ಯಾಂಕ್ನ ಜವಾಬ್ದಾರಿಯಾಗಿದೆ ಎಂಬುವುದು ನಾವು ತಿಳಿದಿರಬೇಕಾದ ವಿಚಾರ.
ನೀವು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯನ್ನು ಯಾವುದೇ ಕಾರಣದಿಂದಾಗಿ ಮುಂದುವರಿಸಲು ಇಚ್ಛಿಸದಿದ್ದರೆ, ನೀವು ಈ ವಾರ್ಷಿಕ ವಿಮೆ ಆಟೋ ಡೆಬಿಟ್ ಅನ್ನು ಸ್ಥಗಿತಗೊಳಿಸಬಹುದು. ಅದಕ್ಕಾಗಿ ನೀವು ಸಮೀಪದ ಬ್ಯಾಂಕ್ ಬ್ರ್ಯಾಂಚ್ಗೆ ಭೇಟಿ ನೀಡಬಹುದಾಗಿದೆ. ಬ್ಯಾಂಕ್ನಲ್ಲಿ ನಿಮಗೆ ನೀಡಿದ ಮಾರ್ಗದರ್ಶನವನ್ನು ಪಾಲಿಸಿ ನಿಮ್ಮ ಈ ಯೋಜನೆಯನ್ನು ಮುಚ್ಚಬಹುದಾಗಿದೆ.
ಇನ್ನು ಸಮಯಕ್ಕೆ ಸರಿಯಾಗಿ ನಿಮ್ಮ ಖಾತೆಯಲ್ಲಿ ಮೊತ್ತವಿಲ್ಲದಿದ್ದರೆ, ಗಡುವು ಮುಗಿದ ಕೂಡಲೇ ನಿಮ್ಮ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಪಾಲಿಸಿ ಅಂತ್ಯವಾಗಲಿದೆ. ಹಾಗೆಯೇ ನೀವಾಗಿಯೇ ಸಮಯಕ್ಕೆ ಸರಿಯಾಗಿ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸದಿದ್ದರೆ ಈ ವಿಮೆಯು ಮುಕ್ತಾಯವಾಗಲಿದೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications