ಟಾಟಾ ಕ್ಯಾಪಿಟಲ್ ಗೆ ಸೇರಿದ ಗೃಹ ಸಾಲ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್ ಎಫ್ ಎಲ್) ಎಕ್ಸ್ ಕ್ಲೂಸಿವ್ ಗೃಹ ಸಾಲ ಯೋಜನೆಯನ್ನು ಸೋಮವಾರ ಘೋಷಣೆ ಮಾಡಿದೆ. ನಗರ ಪ್ರದೇಶ, ಟಯರ್ 2 ಹಾಗೂ ಟಯರ್ 3 ನಗರ ಪ್ರದೇಶಗಳ ವೇತನದಾರರು ಮತ್ತು ಸ್ವ ಉದ್ಯೋಗಿಗಳಿಗೆ ಈ ಯೋಜನೆ ಪರಿಚಯಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ 35 ಲಕ್ಷ ರುಪಾಯಿ ತನಕದ ಸಾಲವನ್ನು ವಾರ್ಷಿಕ ಬಡ್ಡಿ ದರ 7.99 ಪರ್ಸೆಂಟ್ ನಲ್ಲಿ ನೀಡಲಾಗುತ್ತದೆ. ಆಸ್ತಿಯ ಮೌಲ್ಯ, ನಗರ ಹಾಗೂ ಪಟ್ಟಣದ ಕ್ಯಾಟಗರಿ ಆಧಾರದ ಮೇಲೆ ಈ ಸಾಲವನ್ನು ಅರ್ಹರು ಪಡೆದುಕೊಳ್ಳಬಹುದು ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾಲ ನೀಡುವುದಕ್ಕೆ ಮಾನದಂಡ ಏನು?
ನಗರ ಪ್ರದೇಶ 1ನೇ ವಿಭಾಗದ ಅಡಿಯಲ್ಲಿ ಬರುವುದಕ್ಕೆ
ವೇತನದಾರರಿಗೆ 35 ಲಕ್ಷದೊಳಗಿನ ಸಾಲಕ್ಕೆ
ಸ್ವ ಉದ್ಯೋಗಿಗಳಿಗೆ 25 ಲಕ್ಷದೊಳಗಿನ ಸಾಲಕ್ಕೆ
ಆಸ್ತಿಯ ಮೌಲ್ಯ
ವೇತನದಾರರಿಗೆ 45 ಲಕ್ಷದೊಳಗಿದ್ದರೆ
ಸ್ವ ಉದ್ಯೋಗಿಗಳಿಗೆ 30 ಲಕ್ಷದೊಳಗಿದ್ದರೆ
ಬಡ್ಡಿ ದರ 7.99 ಪರ್ಸೆಂಟ್
ಬಡ್ಡಿ ದರವು 7.99 ಪರ್ಸೆಂಟ್ ಇರುತ್ತದೆ. ಕೈಗೆಟುಕುವ ದರದ ಗೃಹ ಸಾಲವನ್ನು ಉತ್ತೇಜಿಸುವ ಉದ್ದೇಶಕ್ಕೆ ಈ ಯೋಜನೆ ತರಲಾಗಿದೆ. ಇದರಿಂದ ಸ್ವಂತ ಮನೆ ತೆಗೆದುಕೊಳ್ಳಬೇಕು ಅಂತ ಇರುವವರಿಗೆ ನೆರವಾಗುತ್ತದೆ. ಭಾರತದಾದ್ಯಂತ ಇರುವ ಗ್ರಾಹಕರಿಗೆ ಸುಲಭ ಹಾಗೂ ಸಮಸ್ಯೆ ಇಲ್ಲದಂತೆ ಇಎಂಐ ಯೋಜನೆಯನ್ನು ಒದಗಿಸಲಾಗುತ್ತಿದೆ ಎಂದು ಹೊಸ ಯೋಜನೆ ಬಗ್ಗೆ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ಕೌಲ್ ತಿಳಿಸಿದ್ದಾರೆ.
ಪ್ರೊಸೆಸಿಂಗ್ ಶುಲ್ಕ ಮತ್ತಿತರ ಮಾಹಿತಿ
ಟಿಸಿಎಚ್ ಎಫ್ ಎಲ್ ಹೊಸ ಗೃಹ ಸಾಲ ಯೋಜನೆಗೆ ಅರ್ಹತಾ ಮಾನದಂಡದ ಬಗ್ಗೆ ಪರಿಶೀಲನೆ ಮಾಡಬೇಕಿದ್ದರೆ ಟಾಟಾ ಕ್ಯಾಪಿಟಲ್ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಬಡ್ಡಿ ದರ, ಶುಲ್ಕ, ಪ್ರೊಸೆಸಿಂಗ್ ಶುಲ್ಕ, ಇಎಂಐ ತಡವಾದಲ್ಲಿ ವಿಧಿಸುವ ದಂಡ, ಕಾನೂನು ಮತ್ತು ಇತರ ಶುಲ್ಕಗಳ ಮಾಹಿತಿಯನ್ನು ಅಲ್ಲಿ ಪಡೆಯಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications