ದೇಶದಲ್ಲಿ ಈಗ ಹಣದುಬ್ಬರ ಹೆಚ್ಚಳವಾಗಿದೆ. ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇಂಧನ, ಆಹಾರ, ಸಾಲದ ಹೊರೆ ಎಲ್ಲವು ಹೆಚ್ಚಾಗಿದೆ. ಜನರ ಜೇಬಿಗೆ ನಿರಂತರ ಕತ್ತರಿ ಬೀಳುತ್ತಿದೆ. ಈ ನಡುವೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಅವರ ಶಿಕ್ಷಣಕ್ಕಾಗಿ ಹೇಗೆ ಉಳಿತಾಯ ಮಾಡುವುದು, ಮಕ್ಕಳಿನ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸುವುದು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ.
ಪ್ರಸ್ತುತ ಕೊರೊನಾ ವೈರಸ್ನ ಹೊಸ ಅಲೆಯ ಆತಂಕ, ಉಕ್ರೇನ್ ಹಾಗೂ ರಷ್ಯಾ ಯುದ್ಧದ ಪ್ರಭಾವವು ಜನರ ಮೇಲೆ ಬೀರಿದೆ. ರಫ್ತು, ಆಮದು ಸ್ಥಗಿತವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಜನರ ತಿಂಗಳ ಬಜೆಟ್ ಬುಡಮೇಲಾಗಿದೆ. ಉಳಿತಾಯ ಬಿಡಿ, ಬರುವಷ್ಟು ಸಂಬಳದಲ್ಲಿ ಪೂರ್ತಿ ತಿಂಗಳು ಖರ್ಚು ನಿಭಾಯಿಸುವುದು ಕೂಡಾ ಕಷ್ಟವಾಗಿದೆ. ಈ ನಡುವೆ ಈ ಸ್ಪರ್ಧಾತಕ ಜಗತ್ತಿನಲ್ಲಿ ಯಾವ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವುದು ಎಂಬುವುದು ಕೂಡಾ ಚರ್ಚಿಸಿ ಕೈಗೊಳ್ಳಬೇಕಾದ ನಿರ್ಧಾರವಾಗಿದೆ.
ಈ ಸಂದರ್ಭದಲ್ಲಿ ಹಲವಾರು ಮಂದಿಗೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಗುಲುವ ಖರ್ಚನ್ನು ಹೇಗೆ ನಿಭಾಯಿಸುವುದು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ಶಿಕ್ಷಣಕ್ಕಾಗಿ ಸಾಲವು ಲಭ್ಯವಾಗುತ್ತದೆ. ಆದರೆ ಅದರ ಬಡ್ಡಿದರವು ತೀರಾ ಅಧಿಕವಾದ ಕಾರಣ ಜನರು ಸಾಲದ ಸುಳಿಗೆ ಬೀಳುವುದಕ್ಕೆ ಇಚ್ಛಿಸುವುದಿಲ್ಲ. ಈ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ, ಶಿಕ್ಷಣಕ್ಕಾಗಿ ನೀವು ಹೇಗೆ ಉಳಿತಾಯ ಮಾಡುವುದು, ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಹೇಗೆ ವಿವರಿಸುವುದು, ಭವಿಷ್ಯದ ನಿರ್ಧಾರ ಹೇಗೆ ಕೈಗೊಳ್ಳುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ಒತ್ತಿ ಹೇಳಿ, ಹೂಡಿಕೆ ಮಾಡಿ
ನೀವು ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವ ಮುನ್ನ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ನಿರ್ಧಾರ ಮಾಡಿ. ದುಬಾರಿ ಶಿಕ್ಷಣದ ಕಡೆಗೆ ವಾಲುವಾಗ ನೀವು ಹೂಡಿಕೆಯ ವಿಚಾರದಲ್ಲಿ ತಂತ್ರಗಾರಿಕೆ ಮಾಡುವುದು ಮುಖ್ಯವಾಗುತ್ತದೆ. ಪ್ರಪಂಚದ ಆರ್ಥಿಕ ಆಗುಹೋಗುಗಳತ್ತವು ಗಮನವಿರಲಿ. ಹಣದ ಅಪಾಯಗಳು ಸೇರಿದಂತೆ ವಿವಿಧ ಅಪಾಯಗಳನ್ನು ಸರಿದೂಗಿಸಲು ಭೌಗೋಳಿಕೆ ಘಟನೆಗಳ ಬಗ್ಗೆ ತಿಳಿದಿರಿ.
ನಿಮ್ಮ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಾರ?
ಮಕ್ಕಳು ಹೆಚ್ಚಾಗಿ ನಾವು ಮುಂದೆ ಏನು ಮಾಡಬೇಕು ಎಂಬುವುದು ಅನಿಶ್ಚಿತವಾಗಿರುತ್ತದೆ. ಹಲವಾರು ಗೊಂದಲಗಳು ಇರುತ್ತದೆ. ಈ ಬಗ್ಗೆ ಮಕ್ಕಳೊಂದಿಗೆ ಕೂತು ನೀವು ಚರ್ಚಿಸಿ. ಮಕ್ಕಳ ಮೇಲೆ ನಿಮ್ಮ ನಿರ್ಧಾರವನ್ನು ಹೇರಬೇಡಿ. ಶಿಕ್ಷಣದ ಯೋಜನೆಯು ನಿರಂತರವಾಗಿ ಹೊಂದಿಕೊಳ್ಳುವ ಅಗತ್ಯವಿದೆ. ಮಕ್ಕಳು ಒಂದು ವೇಳೆ ವಿದೇಶದಲ್ಲಿ ಹೂಡಿಕೆ ಮಾಡುವುದಾದರೆ ಸರಿಯಾಗಿ ಯೋಜನೆ ರೂಪಿಸಿಕೊಳ್ಳಿ. ಸರ್ಕಾರದ ಯೋಜನೆಗಳ ಬಗ್ಗೆ ತಿಳಿಯಿರಿ. ಹಾಗೆಯೇ ಜಾಗತಿಕ ವಿಚಾರಗಳ ಬಗ್ಗೆ ತಿಳಿಯಿರಿ. ಒಂದು ವೇಳೆ ಅಂತಾರಾಷ್ಟ್ರೀಯವಾಗಿ ರೂಪಾಯಿ ಮೌಲ್ಯ ಕುಸಿತವಾದರೆ ವಿದೇಶಿ ಶಿಕ್ಷಣ ದುಬಾರಿಯಾಗಬಹುದು.
ತುರ್ತು ನಿಧಿಗಾಗಿ ಅಗ್ಗ ವಸ್ತು ಖರೀದಿ
ನೀವು ತುರ್ತು ನಿಧಿಯಾಗಿ ಹಣವನ್ನೇ ಹೊಂದಿರಲು ಸಾಧ್ಯವಾಗದು. ಅದಕ್ಕಾಗಿ ಬೇರೆ ದಾರಿಗಳು ಕೂಡಾ ಇದೆ. ನೀವು ಯಾವುದಾದರು ವಸ್ತು ಉದಾಹರಣೆ ಚಿನ್ನ ಅಗ್ಗವಾಗಿರುವಾಗ ಖರೀದಿ ಮಾಡಿ, ಬಳಿಕ ಹಣ ಹೆಚ್ಚಾದಾಗ ಮಾರಾಟ ಮಾಡಿ ಅದರ ಲಾಭವನ್ನು ಪಡೆಯಬಹುದು. ಈ ಮೂಲಕ ನಿಮ್ಮ ಮಕ್ಕಳ ಶಿಕ್ಷಣಕ್ಕೆ ನೀವು ಉಳಿತಾಯ ಮಾಡಬಹುದು. ಮಕ್ಕಳ ಶಿಕ್ಷಣಕ್ಕೆ ಹಣ ಬೇಕಾದಾಗ ನೀವು ಈ ಉಳಿತಾಯದ ಹಣವನ್ನು ಬಳಕೆ ಮಾಡಬಹುದು. ಹಾಗೆಯೇ ಯಾವಾಗಲೂ ಪ್ಲಾನ್ ಬಿ ಹೊಂದಿರುವುದು ಮುಖ್ಯವಾಗಿದೆ. ಬೇರೆಡೆ ದುಂದು ಖರ್ಚನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
ಹೆಚ್ಚು ಹೂಡಿಕೆ ಮಾಡಿ, ಎಚ್ಚರವಾಗಿರಿ
ಕೆಲವೊಮ್ಮೆ, ನಿಮ್ಮ ಯೋಜನೆಯನ್ನು ನೀವು ಸುಧಾರಿಸಬೇಕಾಗುತ್ತದೆ. ವೇತನ ಹೆಚ್ಚಳ/ಬೋನಸ್ಗಳಂತಹ ಸಂದರ್ಭದಲ್ಲಿ ನೀವು ಸುರಕ್ಷಿತ ಹೂಡಿಕೆ ಮಾಡಿ. ಈ ಹೂಡಿಕೆಯು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಹಾಗೆಯೇ ಮಕ್ಕಳ ಶಿಕ್ಷಣಕ್ಕೆ ಎಷ್ಟು ಹಣ ಬೇಕಾಗಬಹುದು ಎಂದು ನೀವು ಮಕ್ಕಳು ಸಣ್ಣವರಾಗಿರುವಾಗಲೇ ನಿರ್ಧಾರ ಮಾಡುವುದು ಕಷ್ಟವಾದರೂ ಕೂಡಾ ಒಂದು ಅಂದಾಜು ನಿಮ್ಮಲ್ಲಿ ಇರಲಿ. ಶಿಕ್ಷಣ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೀವು ಸಂಪರ್ಕ ಮಾಡಬಹುದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications