ಸಾಮಾನ್ಯವಾಗಿ ಈ ಒಂದು ಸನ್ನಿವೇಶ ಬಹುತೇಕ ಜನರಿಗೆ ಎದುರಾಗಿರುತ್ತೆ. ತಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಸಾಲ ನೀಡಿ ಹಿಂಪಡೆಯಲಾಗದೆ ಸಂಕಷ್ಟ ಎದುರಿಸುತ್ತಿರುತ್ತಾರೆ.
ನಿಮಗೆ ಸಾಧ್ಯವಾದಷ್ಟು ಬೇಗ ಹಣವನ್ನು ಹಿಂದಿರುಗಿಸುವ ಭರವಸೆ ನೀಡಿ ಹಣವನ್ನು ಪಡೆದಿರುತ್ತಾರೆ. ನೀವು ಪ್ರೀತಿಯ ಮತ್ತು ಕಾಳಜಿಯುಳ್ಳ ಸ್ನೇಹಿತರಾಗಿರುವುದರಿಂದ ತಕ್ಷಣವೇ ಹಣವನ್ನು ಸಾಲವಾಗಿ ನೀಡುತ್ತಿರಿ. ಸರಿಯಾದ ಸಮಯದಲ್ಲಿ ವಾಪಸ್ ನೀಡಬಹುದು ಎಂಬ ವಿಶ್ವಾಸವನ್ನು ಹೊಂದಿರುತ್ತೀರಿ. ಏಕೆಂದರೆ ನಿಮ್ಮ ಆತ್ಮೀಯತೆ ಬಹಳ ವರ್ಷಗಳದ್ದಾಗಿರುತ್ತದೆ.
ಆದರೆ ತಿಂಗಳುಗಳು ಉರುಳಿದಂತೆ, ನಿಮ್ಮ ಹಣ ಸ್ವಲ್ಪವೂ ಹಿಂತಿರುಗುವುದಿಲ್ಲ. ಹಣವನ್ನು ವಾಪಸ್ ಕೇಳುವ ಬಗ್ಗೆ ಅಂಜಿಕೆಯು ಇರುತ್ತದೆ. ಆದರೆ ನಿಮಗೆ ಅದನ್ನು ಮರಳಿ ಪಡೆಯಬೇಕಾದ ಪರಿಸ್ಥಿತಿಯು ಎದುರಾಗಿರುತ್ತದೆ. ಆದರೂ ನಿಮ್ಮ ಸಂಬಂಧವು ಹಾಳಾಗಬಾರದು ಎಂದು ಬಯಸುತ್ತೀರಿ.
ಇಂತಹ ಸಂದರ್ಭದಲ್ಲಿ ನೀವು ಏನು ಮಾಡುತ್ತೀರಿ? ನಿಮ್ಮ ಹಣವನ್ನು ಮರಳಿ ಪಡೆಯುವುದು ಮತ್ತು ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳುವುದು? ಮರುಪಾವತಿ ಮಾಡದ ಸ್ನೇಹಿತ ಅಥವಾ ಸಂಬಂಧಿಕರೊಂದಿಗೆ ವ್ಯವಹರಿಸುವುದು ಹೇಗೆ ಎಂಬುದಕ್ಕೆ ಕೆಲವು ಮಾರ್ಗಗಳು ಈ ಲೇಖನದಲ್ಲಿ ಓದಿ.
1. ಸೌಮ್ಯವಾಗಿ ಒಮ್ಮೆ ನೆನಪು ಮಾಡಿ
ಕೆಲವೊಮ್ಮೆ ಈ ರೀತಿ ಆಗುತ್ತದೆ. ಬಹುಶಃ ವ್ಯಕ್ತಿಯು ತಲೆಯಲ್ಲಿ ಹಲವು ಯೋಚನೆಗಳಿದ್ದರೆ ಅವರು ಸಾಲದ ಬಗ್ಗೆ ಮರೆತಿರುತ್ತಾರೆ. ಮೆಸೇಜ್ ಕಳುಹಿಸುವುದು ಅಥವಾ ಅವರನ್ನು ಭೇಟಿ ಆಡಲು ಪ್ರಯತ್ನಿಸಿ. ನಿಮ್ಮ ಸ್ನೇಹಿತ ಅಥವಾ ಸಂಬಂಧಿಕರಿಗೆ ಉತ್ತಮ ಹಾಸ್ಯ ಪ್ರಜ್ಞೆ ಇದ್ದರೆ, ನಿಮ್ಮ ಹಣವನ್ನು ಮರಳಿ ಪಡೆಯುವುದನ್ನು ಹಾಸ್ಯ ಮಾಡಿ.
ಹಾಸ್ಯವು ಮನಸ್ಥಿತಿಯನ್ನು ಹಗುರಗೊಳಿಸುತ್ತದೆ. ಜೊತೆಗ ನಿಮಗೆ ಮರುಪಾವತಿ ಮಾಡುವುದರಿಂದ ಆ ಹಣ ಎಷ್ಟು ಮುಖ್ಯವಾಗಿದೆ ಎಂದು ಅವರಿಗೆ ಅರ್ಥವಾಗುವಂತೆ ಸಂವಹನ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
2. ಹಣ ಹಿಂತಿರುಗಿಸಲು ಪಾವತಿ ಯೋಜನೆಯನ್ನು ಸೂಚಿಸಿ
ನಿಮ್ಮ ಸ್ನೇಹಿತ ನಿಮಗೆ ಹಣವನ್ನು ಮರುಪಾವತಿ ಮಾಡಲು ಬಯಸಿದರೆ, ಆದರೆ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ಪಾವತಿ ಯೋಜನೆಯನ್ನು ಸೂಚಿಸಿ. ಅವನೊಂದಿಗೆ ಕುಳಿತುಕೊಳ್ಳಿ ಮತ್ತು ಎಷ್ಟು ಬಾರಿ, ಎಷ್ಟು ಹಣವ್ನು ಸೇರಿದಂತೆ ಪಾವತಿಗಳ ನಿಯಮಗಳು ಮತ್ತು ಷರತ್ತುಗಳನ್ನು ಬರೆಯಿರಿ. ಇದರಿಂದ ನಿಮ್ಮಿಬ್ಬರಿಗೂ ಪ್ರಯೋಜನವಾಗುತ್ತದೆ. ಗಡುವನ್ನು ಸ್ಪಷ್ಟಪಡಿಸಿದಾಗ, ನಿಮ್ಮ ಸ್ನೇಹಿತರು ಜವಾಬ್ದಾರರಾಗಿರುವುದು ಸುಲಭವಾಗುತ್ತದೆ.
3. ಹಣಕಾಸಿನ ಲೆಕ್ಕಾಚಾರಕ್ಕೆ ಸಹಾಯ ಮಾಡಲು ಆಫರ್
ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ಹಣಕೊಡಲು ಮನಸಿದ್ಧರೂ ನೀಡಲು ಸಾಧ್ಯವಾಗದಿದ್ದರೆ, ಅವರ ಹಣಕಾಸು ಸ್ಥಿತಿಯನ್ನು ಪರಿಶೀಲಿಸಲು ಅವರಿಗೆ ಸಹಾಯ ಮಾಡಿ. ಅವನು ಹಣವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಬಜೆಟ್ ಮಾಡಲು ಅಥವಾ ಅದನ್ನು ಹೊಂದಿಸಲು ಸಹಾಯ ಮಾಡಲು ಸೂಚಿಸಿ.
ಈ ರೀತಿಯಾಗಿ, ಪ್ರತಿ ತಿಂಗಳು ನಿಮಗೆ ಮರುಪಾವತಿ ಮಾಡಲು ಅವನು ಎಷ್ಟು ಶಕ್ತನೆಂದು ನೀವು ಇಬ್ಬರೂ ನೋಡಬಹುದು. ಅಲ್ಲದೆ ಹಣ ಉಳಿಸಲು ಆತನಿಗೆ ಸಹಾಯ ಮಾಡಿ ನೀವು ಹಿಂಪಡೆಯಬಹುದು.
4. ಹಣವಿಲ್ಲದಿದ್ದರೆ ಬೇರೆ ವಿಧಾನಗಳನ್ನು ಪರಿಗಣಿಸಿ
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಹಣ ನೀಡಲು ಸಾಧ್ಯವೇ ಇಲ್ಲದೆ ಪರಿಸ್ಥಿತಿಯಿದ್ದರೆ, ಬೇರೆ ವಿಧಾನಗಳನ್ನು ಪರಿಗಣಿಸಿ. ಉದಾಹರಣೆಗೆ ಆತನಿಗೆ ಹಣ ನೀಡಲು ಸಾಧ್ಯವಾಗದೆ ಇದ್ದರೆ, ಆದರೆ ಅದಕ್ಕೆ ಸಮಾನವಾದ ವಸ್ತುವನ್ನು ಅವನು ಹೊಂದಿದ್ದರೆ, ಪರ್ಯಾಯವಾಗಿ ಅವನು ಆ ವಸ್ತುವಿನೊಂದಿಗೆ ಪಾರ್ಟ್ನರ್ ಆಗಲು ಸಿದ್ದರಿದ್ದರೆ ಸಾಲವನ್ನು ಅಳಿಸಿಹಾಕಲು ನೀವು ಸಿದ್ಧರಿದ್ದರೆ ಅದನ್ನು ಪಡೆಯಬಹುದು.
5. ಆರ್ಥಿಕ ಶಿಸ್ತು ಇಲ್ಲದಿದ್ದರೆ ಹೀಗೆ ಮಾಡಿ
ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ನಿಜವಾಗಿಯೂ ನಿಮಗೆ ಮರುಪಾವತಿ ಮಾಡಲು ಬಯಸಿದರೆ, ಆದರೆ ಹಾಗೆ ಮಾಡಲು ಶಿಸ್ತು ಇಲ್ಲದಿದ್ದರೆ, ಯಾವುದಾದರು ವಸ್ತುವನ್ನು ಕೇಳಿ. ಉದಾಹರಣೆಗೆ ಬೈಕ್, ಅಥವಾ ಕಾರು ಸೇರಿದಂತೆ ಯಾವು ವಸ್ತುವನ್ನು ಆತ ಬಿಟ್ಟಿರಲು ಸಾಧ್ಯವಿಲ್ಲವೇ ಅದನ್ನು ಪಡೆಯುವುದು ಉತ್ತಮ ಆಯ್ಕೆಯಾಗಿದೆ.
ಆತ ನಿಮಗೆ ಮರುಪಾವತಿ ಮಾಡುವವರೆಗೆ ನೀವು ಆ ವಸ್ತುವನ್ನು ಹಿಂತಿರುಗಿಸಬಾರದು. ಅಂತಹ ಕ್ರಿಯೆಯು ನಿಮಗೆ ಬೇಗನೆ ಮರುಪಾವತಿ ಮಾಡಲು ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಭರವಸೆಯನ್ನು ಅನುಸರಿಸಲು ಅವನು ಪ್ರಾಮಾಣಿಕವಾಗಿ ಉದ್ದೇಶಿಸಿದ್ದಾನೆಂದು ನಿಮಗೆ ಸಾಬೀತುಪಡಿಸುತ್ತದೆ.
6. ಆ ವ್ಯಕ್ತಿಯನ್ನು ನೇರವಾಗಿ ಭೇಟಿ ಮಾಡಿ
ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ನಿಮ್ಮನ್ನು ಅವಾಯ್ಡ್ ಮಾಡುತ್ತಿರುತ್ತಾರೆ. ಏಕೆಂದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯಬೇಕೆಂದು ನೀವು ಪ್ರಯತ್ನಿಸುತ್ತಿದ್ದೀರಿ ಎಂದು ತಿಳಿದ ಮೇಲೆ. ಫೋನ್ ಕರೆಗೆ ಪ್ರತಿಕ್ರಿಯಿಸದಿದ್ದರೆ, ಅವರನ್ನು ಖುದ್ದಾಗಿ ಭೇಟಿ ಮಾಡಿ. ನೀವು ಭೇಟಿ ನೀಡಿದಾಗ ಉತ್ತಮ ರೀತಿಯಲ್ಲಿ ಕೇಳಿ. ಅವರು ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಸಿ ಮತ್ತು ನಿಮಗೆ ಮರುಪಾವತಿ ಮಾಡಲು ಅವರು ಏನು ಮಾಡಬಹುದು ಎಂದು ಹೇಳಬಹುದು.
7. ನಿಮಗಾಗಿ ಪಾವತಿ ಮಾಡುವಂತೆ ಮಾಡುವುದು
ನಿಮ್ಮ ಸ್ನೇಹಿತರೊಂದಿಗೆ ನೀವು ಸ್ನೇಹಪರವಾಗಿದ್ದರೆ, ನೀವು ಹೊರಗೆ ಊಟಕ್ಕೆ ಅಥವಾ ಸಿನಿಮಾ ನೋಡಲು ಹೋದಾಗಲೆಲ್ಲಾ ನಿಮ್ಮ ಸ್ನೇಹಿತರಿಗೆ ಹಣ ಪಾವತಿಸಲು ಹೇಳಿ. ಅವರು ನಿಮಗೆ ಮರುಪಾವತಿ ಮಾಡಲು ಇದು ಸುಲಭವಾದ ಮಾರ್ಗವಾಗಿದೆ, ಮತ್ತು ಇದು ನಿಮಗೂ ಉತ್ತಮವಾದ ಮುನ್ನುಡಿಯಾಗಿರಬಹುದು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications