ತೆರಿಗೆ ಕಟ್ಟಬೇಕಾದಷ್ಟು ಆದಾಯ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವುದು ಅಪರಾಧ. ಈ ರೀತಿ ತೆರಿಗೆ ಕದಿಯುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ. ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನ ಆದಾಯದ ಮೇಲೆ ತೆರಿಗೆ, ದಂಡ ಅಥವಾ ಬಡ್ಡಿ ತಪ್ಪಿಸಿದಲ್ಲಿ ಅಥವಾ ಆದಾಯವನ್ನು ಕಡಿಮೆ ತೋರಿಸಿದಲ್ಲಿ ಅಂಥವರಿಗೆ ಮೂರು ತಿಂಗಳಿಗೆ ಕಡಿಮೆ ಇಲ್ಲದಂತೆ ಏಳು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು.
ಜೈಲು ಶಿಕ್ಷೆಯ ಪ್ರಮಾಣವು ನಿರ್ಧಾರ ಆಗುವುದು ಎಷ್ಟು ಮೊತ್ತದ ತೆರಿಗೆ ಕದಿಯಲಾಗಿದೆ ಅಥವಾ ಎಷ್ಟು ಮೊತ್ತದ ಆದಾಯವನ್ನು ಕಡಿಮೆ ತೋರಿಸಲಾಗಿದೆ ಎಂಬುದರ ಆಧಾರದಲ್ಲಿ. ಅಧಿಕಾರಿಗಳ ವಿವೇಚನೆ ಮೇಲೆ ತೆರಿಗೆದಾರರಿಗೆ ದಂಡ ಕೂಡ ವಿಧಿಸಬಹುದು. ಉದ್ದೇಶಪೂರ್ವಕವಾಗಿ ತೆರಿಗೆಯನ್ನು ಕದಿಯುವುದು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 276C ಅಡಿಯಲ್ಲಿ ಬರುತ್ತದೆ.
25 ಲಕ್ಷ ರುಪಾಯಿ ಮೇಲ್ಪಟ್ಟ ಆದಾಯ ಮುಚ್ಚಿಟ್ಟರೆ...
ಸೆಕ್ಷನ್ 276C ಮತ್ತಷ್ಟು ವ್ಯಾಖ್ಯಾನ ನೀಡುತ್ತಾ, ಯಾವುದೇ ವ್ಯಕ್ತಿ 25 ಲಕ್ಷ ರುಪಾಯಿ ಮೇಲ್ಪಟ್ಟ ಆದಾಯವನ್ನು ಮುಚ್ಚಿಟ್ಟಿದ್ದಲ್ಲಿ ಅಥವಾ ಆ ಬಗ್ಗೆ ಮಾಹಿತಿ ಬಹಿರಂಗ ಪಡಿಸದೆ ಇದ್ದಲ್ಲಿ ಅಂಥ ತಪ್ಪಿಗೆ ಕನಿಷ್ಠ ಆರು ತಿಂಗಳಿಂದ ಏಳು ವರ್ಷದ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಒಂದು ವೇಳೆ ಮೊತ್ತವು ಇಪ್ಪತ್ತೈದು ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ಕನಿಷ್ಠ ಮೂರು ತಿಂಗಳಿಂದ ಎರಡು ವರ್ಷದ ತನಕ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಕೋರ್ಟ್ ವಿವೇಚನೆಗೆ ತಕ್ಕಂತೆ ದಂಡ ವಿಧಿಸಬಹುದು
ಇನ್ನೂ ಕೆಲ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿ ಅಥವಾ ಬಡ್ಡಿ ಕಟ್ಟುವುದನ್ನು ತಪ್ಪಿಸಿದಲ್ಲಿ ಹೆಚ್ಚುವರಿಯಾಗಿ ಕನಿಷ್ಠ ಮೂರು ತಿಂಗಳಿಂದ ಎರಡು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು. ಆದಾಯ ತೆರಿಗೆ ಕಾಯ್ದೆ 276C (2) ಅಡಿಯಲ್ಲಿ ಅದಕ್ಕೆ ಅವಕಾಶ ಇದೆ. ಕೋರ್ಟ್ ವಿವೇಚನೆಗೆ ತಕ್ಕಂತೆ ದಂಡವನ್ನು ಕೂಡ ಹಾಕಬಹುದು.
ಉದ್ದೇಶಪೂರ್ವಕವಾಗಿ ತೆರಿಗೆ ಕದಿಯುವುದು ಅಂದರೇನು?
ಈ ಸೆಕ್ಷನ್ ನಲ್ಲಿ ತೆರಿಗೆ ಕದಿಯಲು ಉದ್ದೇಶಪೂರ್ವಕ ಪ್ರಯತ್ನ ಅಂದರೆ, ಆ ವ್ಯಕ್ತಿಯ ಬಳಿ ಲೆಕ್ಕದ ಪುಸ್ತಕ ಅಥವಾ ಇನ್ಯಾವುದೇ ದಾಖಲೆಗಳು ಇದ್ದು, ಅದರಲ್ಲಿ ತಪ್ಪಾದ ಮಾಹಿತಿ ಅಥವಾ ಹೇಳಿಕೆ ಇರುವುದು. ಜತೆಗೆ ಯಾವುದೇ ವ್ಯಕ್ತಿ ತಪ್ಪಾದ ದಾಖಲೆ ಸೃಷ್ಟಿಸಿರುವುದು, ಹೇಳಿಕೆ ನೀಡಿರುವುದು ಅಥವಾ ಲೆಕ್ಕದ ಪುಸ್ತಕದಲ್ಲಿ ಯಾವುದಾದರೂ ಮಾಹಿತಿಯನ್ನು ಕೈ ಬಿಟ್ಟಿರುವುದು ಅಥವಾ ದಾಖಲೆ ಬಿಟ್ಟಿರುವುದು ಕಂಡುಬಂದಲ್ಲಿ ಅಂಥವನ್ನು ಉದ್ದೇಶಪೂರ್ವಕವಾಗಿ ತೆರಿಗೆ ತಪ್ಪಿಸುವ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ.
More From GoodReturns

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications