ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ದೇಶಗಳು ವಿಶ್ವ ಈರುಳ್ಳಿ ಬಿಕ್ಕಟ್ಟಿನಿಂದ ಬಳಲುತ್ತಿದೆ. ಈ ನಡುವೆ ರೈತರಿಗೆ ಲಭಿಸುವ ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತಾವು ಕಷ್ಟಪಟ್ಟು ಬೆಳೆದ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಕ್ಕಿಂತ ಆ ಈರುಳ್ಳಿಯನ್ನು ಎಸೆಯುವ ದಾರಿಯನ್ನು ತುಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಈರುಳ್ಳಿ ಬೆಲೆಯು ಭಾರೀ ಇಳಿಕೆಯಾಗಿರುವುದು. ಕಡಿಮೆ ಬೆಲೆ ಲಭಿಸುವುದಕ್ಕೆ ರೈತರು ಬೆಲೆಯನ್ನೆ ಎಸೆಯುತ್ತಿದ್ದಾರೆ. ಏನೇ ಆದರೂ ಜನರ ಜೇಬಿಗೂ ಏಟು ಬೀಳಲಿದೆ.
ಇದು ರೈತರ ಒಂದು ರೀತಿಯ ಪ್ರತಿಭಟನೆಯೂ ಹೌದು. ಆದರೆ ವಿಶ್ವ ಬ್ಯಾಂಕ್ಗೆ ವಿಶ್ವ ಈರುಳ್ಳಿ ಬಿಕ್ಕಟ್ಟಿನ ನಡುವೆ ಭಾರತದಲ್ಲಿನ ಸ್ಥಿತಿ ಆತಂಕಕ್ಕೆ ಕಾರಣವಾಗಿದೆ. ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಲು ನಿರ್ಧರಿಸಿದೆ. ರೈತರಿಂದ ಲಾಭವನ್ನು ಹಿಡಿಯದೆ ಈರುಳ್ಳಿ ಖರೀದಿಸುವಂತೆ ನ್ಯಾಷನಲ್ ಅಗ್ರಿಕಲ್ಚರ್ ಕಾಪೋರೇಷನ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾಕ್ಕೆ (ಎನ್ಎಎಫ್ಇಡಿ) ಕೇಂದ್ರ ತಿಳಿಸಿದೆ. ಈ ವಿಶ್ವ ಈರುಳ್ಳಿ ಬಿಕ್ಕಟ್ಟಿನ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ.

ವಿಶ್ವ ಈರುಳ್ಳಿ ಬಿಕ್ಕಟ್ಟಿಗೆ ಕಾರಣವೇನು?
ಭಾರತದಲ್ಲಿ ಈರುಳ್ಳಿ ಬೆಲೆಯ ಮೇಲೆ ಭಾರೀ ಏರಿಳಿತ ಕಂಡು ಬಂದಿದೆ. ವಿಶ್ವದ ಹಲವಾರು ದೇಶಗಳಲ್ಲಿ, ಪ್ರದೇಶಗಳಲ್ಲಿ ರೈತರು ಹಾಗೂ ಮಾರಾಟಗಾರರು ಪ್ರತಿ ಕೆಜಿ ಈರುಳ್ಳಿಗೆ 1-2 ರೂಪಾಯಿಯಷ್ಟೆ ಲಾಭವನ್ನು ಪಡೆಯುತ್ತಿದ್ದಾರೆ. ಕೆಲವೊಮ್ಮೆ ಈ ಲಾಭ ಶೂನ್ಯವೂ ಆಗಿರುವ ಸನ್ನಿವೇಶಗಳು ಹಲವಾರು ಇದೆ. ನಿರೀಕ್ಷೆಗೂ ಅಧಿಕ ಈರುಳ್ಳಿ ಬೆಲೆ ಉತ್ಪಾದನೆಯಾಗಿರುವುದು ಈರುಳ್ಳಿ ಬೆಲೆ ದಿಢೀರ್ ಆಗಿ ಭಾರೀ ಪ್ರಮಾಣ ಇಳಿಕೆಯಾಗಲು ಮುಖ್ಯ ಕಾರಣವಾಗಿದೆ.
ಇದರಿಂದಾಗಿ ಮುಖ್ಯವಾಗಿ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಇದ್ದರೂ ಕೂಡಾ ಲಾಭ ಏನು ಇಲ್ಲದಂತಾಗಿದೆ. ರೈತರ ಲಾಭಾಂಶವು ಭಾರೀ ಇಳಿಕೆಯಾಗಿದೆ. ಭಾರತದಲ್ಲಿ ಪ್ರತಿ ಆಹಾರ ಪದಾರ್ಥಕ್ಕೂ ಈರುಳ್ಳಿ ಪ್ರಮುಖವಾಗಿದೆ. ಆದರೆ ಈಗ ಈ ಬಿಕ್ಕಟ್ಟು ಆತಂಕಕ್ಕೆ ಕಾರಣವಾಗಿದೆ. 500 ಕೆಜಿ ಈರುಳ್ಳಿಗೆ ಬರೀ 2 ರೂಪಾಯಿಯಂತೆ ಲಭ್ಯವಾಗಿರುವ ಬಗ್ಗೆ ವರದಿಯು ಹಲವಾರು ಮಾಧ್ಯಮಗಳಲ್ಲಿ ಕಂಡುಬಂದಿದೆ. ಈರುಳ್ಳಿ ಬೆಳೆದ ರೈತರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ರೈತರು 500 ಕೆಜಿ ಈರುಳ್ಳಿಗೆ 2 ರೂಪಾಯಿ ಚೆಕ್ ಅನ್ನು ಪಡೆದಿರುವ ವರದಿಯು ಕಂಡುಬಂದಿದೆ. ಭಾರೀ ದರ ಇಳಿಕೆ, ಬೇಡಿಕೆ ಕಡಿಮೆಯಾದ ಕಾರಣದಿಂದ ರೈತರಿಗೆ ನಷ್ಟವಾಗಿದ್ದು, ಇದೀಗ ಈರುಳ್ಳಿ ಬಿಕ್ಕಟ್ಟಿಗೆ ನಾಂದಿ ಹಾಡಿದಂತಾಗಿದೆ. ಭವಿಷ್ಯದಲ್ಲಿ ಬೆಳೆ ಕಡಿಮೆಯಾಗುವ ಸಾಧ್ಯತೆ ಕಂಡು ಬಂದಿದೆ. ಇದರಿಂದಾಗಿ ಈರುಳ್ಳಿ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಈರುಳ್ಳಿ ಬೆಲೆ ಕಡಿಮೆಯಾಗಿರುವಾಗ, ಹಲವಾರು ದೇಶಗಳಲ್ಲಿ ಈರುಳ್ಳಿ ದುಬಾರಿಯಾಗಿದೆ. ಇದು ಜಾಗತಿಕ ಈರುಳ್ಳಿ ಬಿಕ್ಕಟ್ಟಿಗೆ ಕಾರಣವಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications