ವಂದೇ ಭಾರತ್ ಮತ್ತು ನಮೋ ಭಾರತ್ ರೈಲುಗಳ ನಂತರ, ಕೆಲವು ಅತೀ ಹೆಚ್ಚು ಜನಜಂಗುಳಿ ಇರುವ ವಿಭಾಗಗಳಲ್ಲಿ ಪ್ರಯಾಣಿಕರಿಗೆ ಸಹಾಯವಾಗಲೆಂದು ಅಮೃತ್ ಭಾರತ್ ಸೂಪರ್-ಫಾಸ್ಟ್ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸರ್ಕಾರ ಸಜ್ಜಾಗಿದೆ.
ಅಮೃತ್ ಭಾರತ್ ಎಕ್ಸ್ಪ್ರೆಸ್, ವಂದೇ ಭಾರತ್ ಎಕ್ಸ್ಪ್ರೆಸ್ನಂತೆಯೇ ವೇಗವನ್ನು ಹೊಂದಿದೆ. ಇದು ಹವಾನಿಯಂತ್ರಿತ (ಎಸಿ) ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಗೆ ಹೋಲಿಸಿದರೆ ಕಡಿಮೆ ವೆಚ್ಚದ್ದಾಗಿದೆ. ಹೆಚ್ಚಿನ ದೂರವನ್ನು ಸಾಗಲು ಇದನ್ನು ವಿನ್ಯಾಸಗೊಳಿಸಲಾಗಿದೆ. ನಾನ್-ಎಸಿ ಸ್ಲೀಪರ್ ಮತ್ತು ಅನ್ ರಿಸರ್ವ್ಡ್ ಕ್ಲಾಸ್ ಸೇವೆಯಾಗಿದೆ.

ಭಾರತೀಯ ರೈಲ್ವೆಯು ಇನ್ನು ಕೂಡಾ ಮಾರ್ಗಗಳು ಮತ್ತು ನಿಲ್ದಾಣಗಳನ್ನು ಅಂತಿಮಗೊಳಿಸಿಲ್ಲ. ಆದರೆ ಮುಂಬೈ, ಪಾಟ್ನಾ ಮತ್ತು ಚೆನ್ನೈ ವಿಭಾಗಗಳಲ್ಲಿ ಅಮೃತ್ ಭಾರತ್ ಸೇವೆಗಳನ್ನು ಆರಂಭಿಕ ಹಂತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಪ್ರಸ್ತುತ, 22 ಕೋಚ್ಗಳನ್ನು ಒಳಗೊಂಡಿರುವ ಅಮೃತ್ ಭಾರತ್ ಎಕ್ಸ್ಪ್ರೆಸ್ನ ಒಂದು ರೇಕ್ ಪ್ರಾಯೋಗಿಕ ಚಾಲನೆಯಲ್ಲಿದೆ.
ಎರಡನೇ ರೇಕ್ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ಈ ರೈಲಿನಲ್ಲಿ ರೈಲಿನ ಎರಡೂ ತುದಿಗಳಲ್ಲಿ ಎರಡು ಲೋಕೋಮೋಟಿವ್ಗಳನ್ನು ಏಕಕಾಲದಲ್ಲಿ ಬಳಸಲಾಗುತ್ತದೆ. ಒಂದೇ ಚಾಲಕನಿಂದ ಇದನ್ನು ನಿರ್ವಹಣೆ, ನಿಯಂತ್ರಣ ಮಾಡಲಾಗುತ್ತದೆ.
22 ಕೋಚ್ಗಳನ್ನು ಹೊಂದಿರುವ ಈ ರೈಲು
ಈ ವಿಧಾನವು ರೈಲು ವೇಗವಾಗಿ ಚಲಿಸಲು ಅವಕಾಶ ನೀಡತ್ತದೆ. ಹಾಗೆಯೇ ನಿಲ್ದಾಣಗಳಲ್ಲಿ ನಿಲುಗಡೆ ಸಮಯವನ್ನು ಕಡಿಮೆ ಮಾಡುತ್ತದೆ, ರೈಲು ಟರ್ನ್ ಆಗುವ ಸಮಯವು ಕೂಡಾ ಕಡಿಮೆಯಾಗುತ್ತದೆ. ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು 12 ನಾನ್-ಎಸಿ ಸ್ಲೀಪರ್ ಕ್ಲಾಸ್, 8 ಸಾಮಾನ್ಯ ಅನ್ರಿಸರ್ವ್ಡ್ ಕ್ಲಾಸ್ ಮತ್ತು 2 ಲಗೇಜ್ ಕೋಚ್ಗಳು ಸೇರಿದಂತೆ 22 ಕೋಚ್ಗಳನ್ನು ಒಳಗೊಂಡಿದೆ.
ಈ ಕೋಚ್ಗಳು ಕೋಚ್ಗಳ ನಡುವೆ ಸುರಕ್ಷತೆಗಾಗಿ ಮತ್ತು ಶಬ್ದ ಮತ್ತು ಕಂಪನಗಳನ್ನು ಕಡಿಮೆ ಮಾಡಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು, ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನು ಇದು ಹೊಂದಿರುತ್ತದೆ.
ಇನ್ನು ಸೆನ್ಸರ್ ಆಧಾರಿತ ನೀರಿನ ಟ್ಯಾಪ್ಗಳು, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಎಲೆಕ್ಟ್ರಿಕ್ ಔಟ್ಲೆಟ್ಗಳು, ಎಲ್ಇಡಿ ದೀಪಗಳು ಮತ್ತು ಆಧುನಿಕವಾಗಿ ವಿನ್ಯಾಸಗೊಳಿಸಲಾದ ಫ್ಯಾನ್ಗಳು ಮತ್ತು ಸ್ವಿಚ್ಗಳನ್ನು ಸಹ ಹೊಂದಿವೆ. ಹೆಚ್ಚುವರಿಯಾಗಿ, ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅನ್ನು ಒದಗಿಸಲಾಗಿದೆ.
ಪುಶ್-ಪುಲ್ ಲೋಕೋಮೋಟಿವ್ಗಳನ್ನು ಸಿಎಲ್ಡಬ್ಲ್ಯೂನಲ್ಲಿ ತಯಾರಿಸಲಾಗುತ್ತಿದ್ದರೆ, ಕೋಚ್ಗಳನ್ನು ಕೋಚ್ಗಳನ್ನು ಐಸಿಎಫ್ ಚೆನ್ನೈನಲ್ಲಿ ಉತ್ಪಾದಿಸಲಾಗುತ್ತಿದೆ. ಈ ರೈಲುಗಳು ಜನನಿಬಿಡ ನಗರಗಳಿಗೆ ಹಗಲು-ರಾತ್ರಿ ಎಕ್ಸ್ಪ್ರೆಸ್ ಸೇವೆಗಳಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 22 ಬೋಗಿಗಳ ರೈಲು ಸೆಟ್ ತನ್ನ ಪ್ರಯಾಣದ ಉದ್ದಕ್ಕೂ ಸರಿಸುಮಾರು 1,800 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications