ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್ಗಳನ್ನು ಆರಂಭ ಮಾಡುತ್ತಾ ಬರುತ್ತಿದೆ. ಅದರಲ್ಲಿ ಕೆಲವು ಧಾರ್ಮಿಕ ಸ್ಥಳಗಳಾದರೆ, ಇನ್ನು ಕೆಲವು ಇತರೆ ಪ್ರಮುಖ ಸ್ಥಳಗಳ ಪ್ರವಾಸವಾಗಿದೆ.
ಈ ಪ್ರವಾಸ ಪ್ಯಾಕೇಜ್ಗಳಲ್ಲಿ ಅಸ್ಸಾಂ & ಮೇಘಾಲಯ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ಇದು 7 ರಾತ್ರಿಗಳು ಮತ್ತು 8 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಹಾಗೆಯೇ ವಿಮಾನದಲ್ಲಿ ಈ ಪ್ರವಾಸ ಮಾಡಲಾಗುತ್ತದೆ. ಈ ಬಗ್ಗೆ ವಿವರ ಇಲ್ಲಿದೆ ಮುಂದೆ ಓದಿ....

ಅಸ್ಸಾಂ ಮತ್ತು ಮೇಘಾಲಯ ಪ್ಯಾಕೇಜ್
ಪ್ಯಾಕೇಜ್ ಹೆಸರು: ಅಸ್ಸಾಂ ಮತ್ತು ಮೇಘಾಲಯ ಪ್ರವಾಸ
ಯಾವೆಲ್ಲ ಸ್ಥಳ?: ಶಿಲ್ಲಾಂಗ್ - ಚಿರಾಪುಂಜಿ - ಮಾವ್ಲಿನ್ನಾಂಗ್ - ಕಾಜಿರಂಗ - ಗುವಾಹಟಿ
ಹೇಗೆ ಪ್ರವಾಸ?: ವಿಮಾನದಲ್ಲಿ ಮತ್ತು ಬಸ್ನಲ್ಲಿ
ಯಾವಾಗ ಪ್ರವಾಸ?: ಫೆಬ್ರವರಿ 22ರಿಂದ ಫೆಬ್ರವರಿ 29
ಪ್ರವಾಸ ಪ್ಯಾಕೇಜ್ ದರ ಎಷ್ಟಿದೆ?
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 61650 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 44550 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 42600 ರೂಪಾಯಿ ಆಗಿದೆ.
5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 36400 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 29950 ರೂಪಾಯಿ ಆಗಿದೆ. 2- 4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 22350 ರೂಪಾಯಿ ಆಗಿದೆ.
ಪ್ಯಾಕೇಜ್ನಲ್ಲಿ ಏನೆಲ್ಲ ಸೇರುತ್ತದೆ?
* ವಿಮಾನ ಪ್ರಯಾಣ ದರ
* ಪ್ರವಾಸ ಕಾರ್ಯಕ್ರಮದ ಪ್ರಕಾರ ನಾನ್ ಎಸಿ ಟೆಂಪೋ ಟ್ರಾವೆಲರ್ ಅಥವಾ ಅದೇ ರೀತಿಯ ವಾಹನದಿಂದ ಎಲ್ಲಾ ಸಾಗಾಟ
* ರಸ್ತೆ ಟೋಲ್ ಮತ್ತು ಪಾರ್ಕಿಂಗ್ ಶುಲ್ಕ.
* 6 ದಿನದ ಉಪಹಾರ ಮತ್ತು ಆರು ದಿನಗಳ ರಾತ್ರಿಯ ಭೋಜನ ಲಭ್ಯವಾಗುತ್ತದೆ.
* ಡಿಲಕ್ಸ್ ಹೋಟೆಲ್ಗಳಲ್ಲಿ ತಂಗಬಹುದಾಗಿದೆ. 3 ರಾತ್ರಿಗಳು ಶಿಲ್ಲಾಂಗ್ನಲ್ಲಿ, 1 ರಾತ್ರಿ ಕಾಜಿರಂಗದಲ್ಲಿ ಮತ್ತು 2 ರಾತ್ರಿಗಳು ಗುವಾಹಟಿಯಲ್ಲಿ ತಂಗುವುದು.
* ಪ್ರವಾಸ ವಿಮೆ ಮತ್ತು ಜಿಎಸ್ಟಿ ಪ್ಯಾಕೇಜ್ನಲ್ಲಿ ಸೇರ್ಪಡೆ
ಪ್ಯಾಕೇಜ್ನಲ್ಲಿ ಏನೆಲ್ಲ ಇಲ್ಲ?
* ಯಾವುದೇ ಇತರ ವಿಮಾನ ದರ/ರೈಲು ದರಗಳು ಈ ಪ್ಯಾಕೇಜ್ನಲ್ಲಿ ಸೇರುವುದು. ಮೇಲೆ ತಿಳಿಸಿದ ಊಟ ಬಿಟ್ಟು ಬೇರೆ ಊಟವಿಲ್ಲ.
* ಯಾವುದೇ ದೋಣಿ/ಕ್ರೂಸ್ ಶುಲ್ಕಗಳು ಪ್ಯಾಕೇಜ್ನಲ್ಲಿ ಸೇರಲ್ಲ
* ಯಾವುದೇ ರಾಷ್ಟ್ರೀಯ ಉದ್ಯಾನವನದ ಪ್ರವೇಶ/ಜೀಪ್ ಸಫಾರಿ ಶುಲ್ಕಗಳು ಪ್ಯಾಕೇಜ್ನಲ್ಲಿ ಸೇರಲ್ಲ
* ಸ್ಮಾರಕ,/ಮ್ಯೂಸಿಯಂ ಪ್ರವೇಶ ಶುಲ್ಕ ಪ್ಯಾಕೇಜ್ನಲ್ಲಿಲ್ಲ.
* ವಿಮಾನ ಪ್ರಯಾಣದ ಸಮಯದಲ್ಲಿ ಊಟ ಪ್ರತ್ಯೇಕ
* ಇತರ ವರ್ಗಾವಣೆ ವಿಧಾನಗಳಿಗೆ ಯಾವುದೇ ರೀತಿಯ ವೆಚ್ಚಗಳು ಇದರಲ್ಲಿ ಸೇರುವುದಿಲ್ಲ
* ಯಾವುದೇ ಇತರ ವರ್ಗಾವಣೆ ಶುಲ್ಕಗಳು
* ಹೋಟೆಲ್ಗಳಲ್ಲಿ ಮಿನರಲ್ ವಾಟರ್, ದೂರವಾಣಿ ಶುಲ್ಕಗಳು, ಲಾಂಡ್ರಿ ಮತ್ತು ವೈಯಕ್ತಿಕ ಖರ್ಚು ಪ್ಯಾಕೇಜ್ನಲ್ಲಿ ಸೇರಲ್ಲ
* ಯಾವುದೇ ಸ್ಥಿರ / ವೀಡಿಯೊ ಕ್ಯಾಮರಾ ಶುಲ್ಕಗಳು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications