Divya Dakshin Yatra: ರಾಮೇಶ್ವರ, ಕನ್ಯಾಕುಮಾರಿ ಸೇರಿ 7 ಪ್ರದೇಶಗಳಿಗೆ ದಿವ್ಯ ದಕ್ಷಿಣ ಯಾತ್ರೆ, ಪ್ಯಾಕೇಜ್ ದರ, ವಿವರ ಇಲ್ಲಿದೆ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಈಗ ಐಆರ್‌ಸಿಟಿಸಿ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಅದುವೇ ದಿವ್ಯ ದಕ್ಷಿಣ ಯಾತ್ರೆಯಾಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಸುಮಾರು 7 ಪ್ರದೇಶಗಳಿಗೆ ಪ್ರಯಾಣ ಮಾಡುವ ಅವಕಾಶವಿದೆ.

8 ರಾತ್ರಿಗಳು ಮತ್ತು 9 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದೆ. ಅರುಣಾಚಲ ಪ್ರದೇಶ, ಕನ್ಯಾಕುಮಾರಿ, ಮದುರೈ, ರಾಮೇಶ್ವರಂ, ತಂಜಾವೂರು, ತಿರುಚಿರಾಪಳ್ಳಿ, ತಿರುವನಂತಪುರಕ್ಕೆ ಈ ದಿವ್ಯ ದಕ್ಷಿಣ ಯಾತ್ರೆ ಪ್ರವಾಸ ಪ್ಯಾಕೇಜ್‌ನಲ್ಲಿ ಭೇಟಿ ನೀಡುವ ಅವಕಾಶವಿದೆ. ರೈಲು ಪ್ರವಾಸ ಇದಾಗಿದ್ದು, ಸ್ಥಳೀಯವಾಗಿ ಬಸ್‌ನ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಮಾಡುತ್ತದೆ. ಈ ಪ್ರವಾಸ ಪ್ಯಾಕೇಜ್‌ನ ಸಂಪೂರ್ಣ ವಿವರ ಇಲ್ಲಿದೆ ಮುಂದೆ ಓದಿ....

 7 ಪ್ರದೇಶಗಳಿಗೆ ದಿವ್ಯ ದಕ್ಷಿಣ ಯಾತ್ರೆ, ಪ್ಯಾಕೇಜ್ ದರ,ವಿವರ ಇಲ್ಲಿದೆ

ಪ್ರವಾಸ ಪ್ಯಾಕೇಜ್‌ನ ಪ್ರಮುಖ ಮಾಹಿತಿ

* ಪ್ರವಾಸದ ಹೆಸರು: ದಿವ್ಯ ದಕ್ಷಿಣ್‌ ಯಾತ್ರಾ ವಿದ್ ಜ್ಯೋತಿರ್ಲಿಂಗ
* ದಿನ: 8 ರಾತ್ರಿ, 9 ದಿನ
* ಪ್ರವಾಸ ದಿನ: ಆಗಸ್ಟ್ 23, 2023
* ಎಷ್ಟು ಮಂದಿಯ ಪ್ರವಾಸ: 716 ಸೀಟುಗಳು
* ಹತ್ತುವ ಮತ್ತು ಇಳಿಯುವ ಸ್ಥಳ: ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ತೆನಾಲಿ, ಓಂಗೋಲ್, ನೆಲ್ಲೂರು, ಗುಡೂರು ಮತ್ತು ರೇಣಿಗುಂಟಾ
* ಮುಂಜಾನೆಯ ಚಹಾ, ಮಧ್ಯಾಹ್ನದ ಊಟ, ರಾತ್ರಿ ಊಟ (ಸಸ್ಯಾಹಾರಿ)
* ಎಲ್ಲ ಪ್ರಯಾಣಿಕರಿಗೆ ಪ್ರವಾಸ ವಿಮೆ
* ವೃತ್ತಿಪರ ಬೆಂಗಾವಲು ಸೇವೆಗಳು.
* ರೈಲಿನಲ್ಲಿ ಸುರಕ್ಷತೆ

ಪ್ರವಾಸ ಪ್ಯಾಕೇಜ್ ದರ

ಇಕಾನಮಿ: ಡಬಲ್/ ಟ್ರಿಪಲ್ 14,300 ರೂಪಾಯಿ, 5ರಿಂದ 11 ವರ್ಷ ವಯಸ್ಸು 13,300 ರೂಪಾಯಿ
ಸ್ಟಾರ್ಡರ್ಡ್: ಡಬಲ್/ ಟ್ರಿಪಲ್ 21,900 ರೂಪಾಯಿ, 5ರಿಂದ 11 ವರ್ಷ ವಯಸ್ಸು 20,800 ರೂಪಾಯಿ
ಕನ್ಫರ್ಟ್: ಡಬಲ್/ ಟ್ರಿಪಲ್ 28,500 ರೂಪಾಯಿ, 5ರಿಂದ 11 ವರ್ಷ ವಯಸ್ಸು 27,100 ರೂಪಾಯಿ

ಪ್ಯಾಕೇಜ್‌ನಲ್ಲಿ ಕವರ್ ಆಗುವ ಸ್ಥಳ

ತಿರುವಣ್ಣಾಮಲೈ: ಅರುಣಾಚಲಂ ದೇವಸ್ಥಾನ
ರಾಮೇಶ್ವರಂ: ರಾಮನಾಥಸ್ವಾಮಿ ದೇವಸ್ಥಾನ
ಮಧುರೈ: ಮೀನಾಕ್ಷಿ ಅಮ್ಮನ ದೇವಸ್ಥಾನ
ಕನ್ಯಾಕುಮಾರಿ: ರಾಕ್ ಮೆಮೋರಿಯಲ್, ಕುಮಾರಿ ಅಮ್ಮನ ದೇವಸ್ಥಾನ
ತಿರುವನಂತಪುರ: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
ತಿರುಚ್ಚಿ: ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ತಂಜಾವೂರು: ಬೃಹದೀಶ್ವರ ದೇವಸ್ಥಾನ

ದಿನ 1: ಪ್ರವಾಸ ಆರಂಭ
ದಿನ 2: ಅರುಣಾಚಲಂನ ದೇವಾಲಯಕ್ಕೆ ಭೇಟಿ.
ದಿನ 3: ಮದುರೈನ ಸ್ಥಳೀಯ ದೇವಾಲಯಕ್ಕೆ ಭೇಟಿ, ರಾಮೇಶ್ವರಂನಲ್ಲಿ ಭೋಜನ, ರಾತ್ರಿ ತಂಗಲು ವ್ಯವಸ್ಥೆ
ದಿನ 4: ರಾಮೇಶ್ವರಂನಿಂದ ಮಧುರೈಗೆ ಭೇಟಿ ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ. ಕನ್ಯಾಕುಮಾರಿಗೆ ಪ್ರಯಾಣ
ದಿನ 5: ಕನ್ಯಾಕುಮಾರಿ ತಲುಪಿ, ರಾಕ್ ಮೆಮೋರಿಯಲ್, ಗಾಂಧಿ ಮಂಟಪ, ಸನ್‌ಸೆಟ್ ಪಾಯಿಂಟ್‌ಗೆ ಭೇಟಿ.
ದಿನ 6: ತಿರುವನಂತಪುರಕ್ಕೆ (ಕೊಚುವೇಲಿ ನಿಲ್ದಾಣ) ತಲುಪಿ, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಕೋವಲಂ ಬೀಚ್‌ಗೆ ಭೇಟಿ.
ದಿನ 7: ತಿರುಚಿರಾಪಳ್ಳಿ ನಿಲ್ದಾಣಕ್ಕೆ ಆಗಮನ. ಶ್ರೀರಂಗಂ ದೇವಸ್ಥಾನಕ್ಕೆ, ಬೃಹದೀಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸ್ ನಿಮ್ಮ ಸ್ಥಳಕ್ಕೆ

ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರ್ಪಡೆಯಾಗಲ್ಲ?

* ಸ್ಮಾರಕ ಪ್ರವೇಶ ಶುಲ್ಕಗಳು, ಬೋಟಿಂಗ್, ಸಾಹಸ ಕ್ರೀಡೆಗಳ ಶುಲ್ಕಗಳು
* ಯಾವುದೇ ಕೊಠಡಿ ಸೇವೆಗೆ ಶುಲ್ಕ ವಿಧಿಸಲಾಗುತ್ತದೆ.
* ಪ್ರೇಕ್ಷಣೀಯ ಸ್ಥಳಗಳ ವೆಚ್ಚ, ಪ್ರವೇಶ ಮತ್ತು ಸ್ಥಳೀಯ ಮಾರ್ಗದರ್ಶಕರು ಇತ್ಯಾದಿಗಳನ್ನು ಪ್ರವಾಸದಲ್ಲಿ ಸೇರಿಸಲಾಗುವುದಿಲ್ಲ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+