ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಲ್ಲೂ ಮುಖ್ಯವಾಗಿ ದೇವಾಲಯಗಳಿಗೆ ಪ್ರವಾಸ ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಿರುತ್ತಾರೆ.
ಅದರಲ್ಲಿ ಪುಣ್ಯ ಕ್ಷೇತ್ರ ಯಾತ್ರೆ ಕೂಡ ಒಂದಾಗಿದೆ. ನೀವು ಈ ಪ್ರವಾಸ ಪ್ಯಾಕೇಜ್ನಲ್ಲಿ ಬರೀ 15 ಸಾವಿರ ರೂಪಾಯಿ ನೀಡಿ, 8 ರಾತ್ರಿಗಳು, 9 ದಿನಗಳು ಪ್ರವಾಸ ಮಾಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪ್ಯಾಕೇಜ್ ವಿವರ ಇಲ್ಲಿದೆ
ಪ್ಯಾಕೇಜ್ ಹೆಸರು: ಪುಣ್ಯ ಕ್ಷೇತ್ರ ಯಾತ್ರಾ: ಪುರಿ, ಕಾಶಿ, ಅಯೋಧ್ಯೆ
ಪ್ರವಾಸ ದಿನಗಳು: 8 ರಾತ್ರಿಗಳು 9 ದಿನ
ಪ್ರವಾಸ ದಿನಾಂಕ: ಡಿಸೆಂಬರ್ 9
ಬೋರ್ಡಿಂಗ್, ಡಿಬೋರ್ಡಿಂಗ್: ಸಿಕಂದರಾಬಾದ್, ಕಾಜಿಪೇಟ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಮಲ್ಕೋಟ್, ಪೆಂಡುರ್ಟಿ ಮತ್ತು ವಿಜಯನಗರಂ
ಪ್ಯಾಕೇಜ್ ದರ ಎಷ್ಟಿದೆ ನೋಡಿ
ಇಕಾನಮಿ ಕ್ಲಾಸ್: ಡಬಲ್/ ಟ್ರಿಪಲ್ 15,200 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 14,200 ರೂಪಾಯಿ
ಸ್ಟಾರ್ಡರ್ಸ್ ಕ್ಲಾಸ್: ಡಬಲ್/ ಟ್ರಿಪಲ್ 24,000 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 23,900 ರೂಪಾಯಿ
ಕನ್ಫಾರ್ಟ್ ಕ್ಲಾಸ್: ಡಬಲ್/ ಟ್ರಿಪಲ್ 31,500 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 31,100 ರೂಪಾಯಿ
ಯಾವ ಸ್ಥಳಕ್ಕೆ ಪ್ರವಾಸ?
ಪುರಿ: ಜಗನ್ನಾಥ ದೇವಾಲಯ.
ಗಯಾ: ವಿಷ್ಣು ಪಾದ ದೇವಾಲಯ.
ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕಾರಿಡಾರ್, ಕಾಶಿ ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನ. ಸಂಜೆ ಗಂಗಾ ಆರತಿ
ಅಯೋಧ್ಯೆ: ರಾಮ ಜನ್ಮ ಭೂಮಿ, ಹನುಮಾನ್ಗರ್ಹಿ ಮತ್ತು ಸರಯೂ ನದಿಯಲ್ಲಿ ಆರತಿ.
ಪ್ರಯಾಗ್ರಾಜ್: ತ್ರಿವೇಣಿ ಸಂಗಮ, ಹನುಮಾನ್ ಮಂದಿರ ಮತ್ತು ಶಂಕರ್ ವಿಮಾನ ಮಂಟಪ.
ಪ್ಯಾಕೇಜ್ನಲ್ಲಿ ಏನೆಲ್ಲ ಸೇರುತ್ತದೆ?
* ರೈಲು ಪ್ರಯಾಣ ವೆಚ್ಚ, ಹೊಟೇಲ್ ರೂಮ್ಗಳ ವೆಚ್ಚ ಪ್ಯಾಕೇಜ್ನಲ್ಲಿ ಸೇರುತ್ತದೆ. ಪ್ಯಾಕೇಜ್ ಆಧಾರದಲ್ಲಿ ಹೊಟೇಲ್ ರೂಮ್ ಲಭ್ಯವಾಗುತ್ತದೆ.
* ಬೆಳಗಿನ ಚಹಾ, ಉಪಹಾರ ಮಧ್ಯಾಹ್ನ ಮತ್ತು ರಾತ್ರಿಯ ಊಟ (ಸಸ್ಯಾಹಾರಿ ಮಾತ್ರ).
* ಪ್ರಯಾಣಿಕರಿಗೆ ಪ್ರಯಾಣ ವಿಮೆ.
* ವೃತ್ತಿಪರ ಬೆಂಗಾವಲು ಸೇವೆಗಳು.
* ರೈಲಿನಲ್ಲಿ ಭದ್ರತೆ
* ಅಗತ್ಯ ಸಹಾಯಕ್ಕಾಗಿ ಐಆರ್ಸಿಟಿಸಿ ಟೂರ್ ಮ್ಯಾನೇಜರ್ಗಳು ಪ್ರವಾಸದ ಉದ್ದಕ್ಕೂ ಪ್ರಯಾಣಿಸುತ್ತಾರೆ.
* ಎಲ್ಲಾ ಅನ್ವಯವಾಗುವ ತೆರಿಗೆಗಳು.
ಪ್ಯಾಕೇಜ್ನಲ್ಲಿ ಈ ಕೆಳಗಿನವು ಸೇರಿರಲ್ಲ
* ಸ್ಮಾರಕ ಪ್ರವೇಶ ಶುಲ್ಕಗಳು, ಬೋಟಿಂಗ್, ಸಾಹಸ ಕ್ರೀಡೆಗಳು ಇತ್ಯಾದಿ.
* ಊಟವನ್ನು ಮೊದಲೇ ನಿರ್ಧಾರ ಮಾಡಲಾಗಿರುತ್ತದೆ. ಮೆನುವಿನಲ್ಲಿ ಆಯ್ಕೆ ಲಭ್ಯವಿಲ್ಲ.
* ಯಾವುದೇ ಕೊಠಡಿ ಸೇವೆಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.
* ಪ್ರೇಕ್ಷಣೀಯ ಸ್ಥಳಗಳ ವೆಚ್ಚ, ಪ್ರವೇಶ ಮತ್ತು ಸ್ಥಳೀಯ ಮಾರ್ಗದರ್ಶಕರು ಇತ್ಯಾದಿಗಳು ಪ್ಯಾಕೇಜ್ನಲ್ಲಿ ಸೇರುವುದಿಲ್ಲ.
* ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳು, ಇಂಧನ ಸರ್ಚಾರ್ಜ್
* ಲಾಂಡ್ರಿ ವೆಚ್ಚಗಳು, ವೈನ್ಗಳು, ಖನಿಜಯುಕ್ತ ನೀರು, ಆಹಾರ ಮತ್ತು ಪಾನೀಯದಂತಹ ವೆಚ್ಚಗಳು ಸೇರುವುದಿಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications