ಬೇಸಿಗೆ ರಜೆ ಆರಂಭವಾಗುವುದಕ್ಕೂ ಮುನ್ನವೇ ಹಲವಾರು ಕುಟುಂಬಗಳು ಪ್ರವಾಸಕ್ಕಾಗಿ ಪ್ಲ್ಯಾನಿಂಗ್ಗಳನ್ನು ಮಾಡಲು ಆರಂಭಿಸಿದೆ. ನಮ್ಮ ಈ ವರ್ಷದ ರಜಾ ಅವಧಿಯನ್ನು ಎಲ್ಲಿ ಕಳೆಯುವುದು ಎಂಬ ಚಿಂತನೆ ನಡೆಸುತ್ತಿದೆ, ಯೋಜನೆ ರೂಪಿಸುತ್ತಿದೆ. ಈ ನಡುವೆ ವಾರಾಂತ್ಯದಲ್ಲಿ ಸರೋವರಗಳ ನಗರವೆಂದೆ ಪ್ರಸಿದ್ಧವಾದ ಉದಯಪುರಕ್ಕೆ ಭೇಟಿ ನೀಡುವುದು ನಿಮ್ಮ ಉತ್ತಮ ಆಯ್ಕೆಯಾಗಿದೆ. ಅದು ಕೂಡಾ ಮುಖ್ಯವಾಗಿ ಹವಾಮಾನ ಬದಲಾವಣೆಯಾಗುವ ಸಂದರ್ಭದಲ್ಲಿ ಇಲ್ಲಿಗೆ ನೀವು ಪ್ರವಾಸ ಹೋಗುವುದು ಮನರಂಜಕ.
ಭಾರತೀಯ ರೈಲ್ವೆಯ ವಿಭಾಗವಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ಮುಂದಿನ ವಾರ ಮಾರ್ಚ್ 30 ರಂದು ಉದಯಪುರಕ್ಕೆ ರೈಲಿನ ಪ್ರವಾಸ ಆರಂಭ ಮಾಡಲು ನಿರ್ಧಾರ ಮಾಡಿದೆ. ಇದು ಅತೀ ಕಡಿಮೆ ದರ ಪ್ರವಾಸ ಪ್ಯಾಕೇಜ್ ಆಗಿದೆ. ಅದು ಕೂಡಾ ಹೆಚ್ಚು ದಿನಗಳಿಗೆ. ಹೌದು, ಮೂರು ರಾತ್ರಿ ನಾಲ್ಕು ದಿನಗಳ ಪ್ಯಾಕೇಜ್ ಬರೀ 5,175 ರೂಪಾಯಿಗೆ ಲಭ್ಯವಾಗಲಿದೆ. ಅಂದರೆ ನಾವು 5,175 ರೂಪಾಯಿಯ ಪ್ಯಾಕೇಜ್ನಲ್ಲಿ ಉದಯಪುರ ಪ್ರವಾಸ ಪ್ಯಾಕೇಜ್ ಖರೀದಿಸಿ ಸರೋವರಗಳ ನಗರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಪ್ಯಾಕೇಜ್ನಲ್ಲಿ ಏನೆಲ್ಲ ಇರಲಿದೆ?
ಈ 5,175 ರೂಪಾಯಿಯ ಉದಯಪುರ ಪ್ರವಾಸ ಪ್ಯಾಕೇಜ್ನಲ್ಲಿ ರೈಲಿನ ಟಿಕೆಟ್, ವಸತಿ ವ್ಯವಸ್ಥೆ, ಆಹಾರ, ಸ್ಥಳೀಯ ಸಾರಿಗೆ ವ್ಯವಸ್ಥೆಯು ಸೇರ್ಪಡೆಯಾಗಲಿದೆ. ಈ ಪ್ರವಾಸ ಪ್ಯಾಕೇಜ್ನಲ್ಲಿ ಪ್ರಮುಖವಾದ ರೋಮಾಂಚಕ ಸ್ಥಳ ಸರೋವರಗಳ ನಗರ ಉದಯಪುರವಾಗಿದೆ. ನೀವು ರಾಜಸ್ಥಾನದ ಆಹಾರವನ್ನು ಸೇವಿಸಲು ಇಷ್ಟಪಡುವುದಾದರೆ ರಾಜಸ್ಥಾನದ ಈ ನಗರಕ್ಕೆ ಈ ಪ್ಯಾಕೇಜ್ ಮೂಲಕ ಭೇಟಿ ನೀಡಬಹುದಾಗಿದೆ. ಹಾಗೆಯೇ ಸ್ಥಳೀಯ ನೃತ್ಯ, ಸಂಗೀತವನ್ನು ಆಹ್ಲಾದಿಸಬಹುದು ಮತ್ತು ನಿಮಗೆ ವೈಯಕ್ತಿಕವಾಗಿ ಬೇಕಾದ ವಸ್ತುಗಳನ್ನು ಖರೀದಿ ಕೂಡಾ ಮಾಡಬಹುದು.
ಪ್ರವಾಸದ ಪ್ಯಾಕೇಜ್ ದೆಹಲಿಯಿಂದ ಆರಂಭವಾಗುತ್ತದೆ. ಅಂದರೆ ರೈಲು ದೆಹಲಿಯಿಂದ ಹೊರಡುತ್ತದೆ. ಅಲ್ಲಿಂದ ಉದಯಪುರಕ್ಕೆ ತಲುಪಲಿದೆ. ಇನ್ನು ದೆಹಲಿಯಿಂದ ಉದಯಪುರಕ್ಕೆ ಹೋಗುವ ಅಥವಾ ಹಿಂದಿರುಗುವ ಒಂದು ನಿಗದಿತ ಸ್ಥಳದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಮೊದಲ ದಿನ ದೆಹಲಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಉದಯಪುರಕ್ಕೆ ಭೇಟಿ ನೀಡಿದ ಬಳಿಕ ಹೋಟೆಲ್ಗೆ ಭೇಟಿ ನೀಡಿ, ಇತರೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಸಹೇಲಿಯೋನ್ ಕಿ ಬಾರಿ, ಸುಖದಿಯಾ ಸರ್ಕಲ್, ಸಿಟಿ ಪ್ಯಾಲೇಸ್ ಮ್ಯೂಸಿಯಂ ಮತ್ತು ಭಾರತೀಯ ಲೋಕ ಕಲಾ ಮಂಡಲಕ್ಕೆ ಭೇಟಿ ನೀಡಬಹುದಾಗಿದೆ.
ಪ್ರವಾಸಿಗರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ನಗರದಲ್ಲಿ ಸುತ್ತಾಡಲು, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ವಾಹನವನ್ನು ಆಯ್ಕೆ ಮಾಡಬಹುದು. ಸ್ಥಳೀಯ ಸಾರಿಗೆಗೆ ಕಾರು ಲಭ್ಯವಾಗುತ್ತದೆ. ಪ್ರವಾಸದ ಪ್ಯಾಕೇಜ್ ರೈಲಿನಲ್ಲಿ ಉದಯಪುರಕ್ಕೆ ಪ್ರಯಾಣ, ವಸತಿ ಮತ್ತು ಊಟವನ್ನು ಒಳಗೊಂಡಿರುತ್ತದೆ. ಈ ಪ್ರವಾಸದ ಪ್ಯಾಕೇಜ್ನ ವೆಚ್ಚವು 5,100 ರೂಪಾಯಿಯಿಂದ 11,000 ರೂಪಾಯಿ ಆಗಿದೆ. ಪ್ರಯಾಣಿಕರು ತಮ್ಮ ಅಗತ್ಯತೆ ಮತ್ತು ಬೇಕಾದ ಸೌಲಭ್ಯಗಳಿಗೆ ಅನುಗುಣವಾಗಿ ಬೆಲೆಯನ್ನು ಆಯ್ಕೆ ಮಾಡಬಹುದು.
ಸರ್ಕಾರಿ ನೌಕರರಿಗೆ ಅನುಕೂಲ
ಸರ್ಕಾರಿ ನೌಕರರು ತಮ್ಮ ಎಲ್ಟಿಸಿ ಬಳಸುವ ಆಯ್ಕೆಯನ್ನು ಮಾಡಬಹುದು. ಇದಕ್ಕಾಗಿ, ನಿಮ್ಮ ಕಚೇರಿಯಲ್ಲಿ ನೀವು ಎಲ್ಲಾ ಬಿಲ್ಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಬಜೆಟ್ಗೆ ಅನುಗುಣವಾಗಿ, ನೀವು ಐಆರ್ಸಿಟಿಸಿ ಟೂರ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಇದು ಕಂಫರ್ಟ್ ಅಥವಾ ಸ್ಟ್ಯಾಂಡರ್ಡ್ ವಿಭಾಗಗಳಲ್ಲಿ ಲಭ್ಯವಾಗಲಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications