ಭಾರತದಲ್ಲಿ ಅತೀ ದೊಡ್ಡ ವಿಮಾ ಸಂಸ್ಥೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ನಿಮ್ಮ ಹೂಡಿಕೆಗೆ ಆದಾಯವನ್ನು ನೀಡುವುದರ ಜತೆಗೆ ಜೀವ ರಕ್ಷಣೆಯನ್ನು ನೀಡುತ್ತದೆ. ನಾವು ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವ ವಿಚಾರಕ್ಕೆ ಬಂದಾಗ ಎಲ್ಐಸಿ ಅತೀ ಉತ್ತಮ ಆಯ್ಕೆ ಎಂದು ಹಲವಾರು ತಜ್ಞರುಗಳ ಅಭಿಪ್ರಾಯವಾಗಿದೆ.
ಎಲ್ಐಸಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಇತ್ತೀಚೆಗೆ ಎಲ್ಐಸಿ"ಜೀವನ್ ಆನಂದ್ ಯೋಜನೆ" ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು ಆ ಯೋಜನೆಯ ವಿವರವನ್ನು ನಾವಿಲ್ಲಿ ನೀಡಿದ್ದೇವೆ.
ಈ ಯೋಜನೆಯೂ ಸಾವಿನ ವಿರುದ್ದದ ರಕ್ಷಣೆಯ ಪ್ರಯೋಜನಗಳನ್ನು ಒದಗಿಸುವುದರ ಜತೆಗೆ ರೈಡರ್ ಬೆನಿಫಿಟ್ ಅನ್ನು ಒದಗಿಸುತ್ತದೆ. ಆದರೂ ಪಾಲಿಸಿದಾರರೂ, ಅಪಘಾತದಿಂದ ಮೃತ್ಯು ಮತ್ತು ಅಂಗವೈಕಲ್ಯದ ಬೆನಿಫಿಟ್ ರೈಡರ್ ಅಥವಾ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಇವುಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡುವ ಅವಕಾಶ ಹೊಂದಿದ್ದಾರೆ.

ಪಾಲಿಸಿಗೆ ಅಗತ್ಯವಿರುವ ಅರ್ಹತೆ ಮತ್ತು ಷರತ್ತು
1. 1,00,000 ರೂ. ಕನಿಷ್ಟ ಮೂಲ ವಿಮಾ ಮೊತ್ತ ಆಗಿರುತ್ತದೆ.
2. ಗರಿಷ್ಟ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ
(ಮೂಲ ವಿಮಾ ಮೊತ್ತಕ್ಕೆ 5000 ಗುಣಿಸಿದಷ್ಟು)
3. ಕನಿಷ್ಟ ವಯೋಮಿತಿ 18 ವರ್ಷಗಳು (ಪೂರ್ಣಗೊಂಡಿರಬೇಕು)
4. ಗರಿಷ್ಟ ವಯಸ್ಸಿನ ಮಿತಿ 50 ವರ್ಷಗಳು (ಜನ್ಮದಿನಕ್ಕೆ ಹತ್ತಿರವಾಗಿರುವಂತೆ)
5. ಗರಿಷ್ಟ ಮೆಚ್ಯೂರಿಟಿ ವಯಸ್ಸು 75 ವರ್ಷ (ಜನ್ಮದಿನಕ್ಕೆ ಹತ್ತಿರವಾಗಿರುವಂತೆ)
6. ಕನಿಷ್ಟ ಪಾಲಿಸಿಯ ಅವಧಿ 15 ವರ್ಷಗಳು
7. ಗರಿಷ್ಟ ಪಾಲಿಸಿಯ ಅವಧಿ 35 ವರ್ಷಗಳು
ಒಂದು ವೇಳೆ ಪಾಲಿಸಿಯ ಮೆಚ್ಯೂರಿಟಿ ಅವಧಿಗೂ ಮುನ್ನ ಪಾಲಿಸಿದಾರರು ಮೃತಪಟ್ಟರೆ ಅವರ ನಾಮಿನಿಯೂ ಶೇಕಡ 12ರವರೆಗೆ ಡೆತ್ ಬೆನಿಫಿಟ್ನ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ಪಾಲಿಸಿಯಲ್ಲಿ ಖಚಿತವಾದ ಕನಿಷ್ಟ ವಿಮಾ ಮೊತ್ತ 1 ಲಕ್ಷ ರೂಪಾಯಿ ಆಗಿದ್ದು ಗರಿಷ್ಟ ಮೊತ್ತಕ್ಕೆ ಮಿತಿಯಿಲ್ಲ.
ಇದಲ್ಲದೆ ಅಪಘಾತದಿಂದ ಸಾವು, ಮತ್ತು ಅಂಗವೈಕ್ಯಲ ಮತ್ತು ಅಕ್ಸಿಡೆಂಟ್ ಬೆನಿಫಿಟ್, ನ್ಯೂ ಟರ್ಮ್ ರೈಡರ್ ಮತ್ತು ನ್ಯೂ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ಗಳು ರೈಡರ್ ಪ್ರಯೋಜನ ವ್ಯಾಪ್ತಿಯಲ್ಲಿ ಒಳಗೊಂಡಿರುತ್ತದೆ. "ಜೀವನ್ ಆನಂದ್ ಯೋಜನೆ" ವಿಮೆಯಲ್ಲಿ ಬಹಳಷ್ಟು ಅನುಕೂಲಗಳಿದ್ದರೂ, ಇದು ತೆರಿಗೆ ಪ್ರಯೋಜನ ಒದಗಿಸುವುದಿಲ್ಲ ಎನ್ನುವುದು ನೆನಪಿಡಬೇಕಾದ ಅಂಶವಾಗಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ



Click it and Unblock the Notifications