ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಇತ್ತೀಚೆಗೆ ಹೊಸ ಪಾಲಿಸಿಯನ್ನು ಆರಂಭ ಮಾಡಿದೆ. ಅದು ಎಲ್ಐಸಿ ಜೀವನ್ ಅಜಾದ್ ಪಾಲಿಸಿಯಾಗಿದೆ. ಇದು ನಾನ್-ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದೆ. ಈ ಹೊಸ ಪಾಲಿಸಿಯು ಕಳೆದ 10-15 ದಿನಗಳಲ್ಲಿ 50,000 ಮಾರಾಟವಾಗಿದೆ ಎಂದು ಸಂಸ್ಥೆಯು ಹೇಳಿದೆ. ಈ ಪಾಲಿಸಿಯು ಜನವರಿ 2023ರಲ್ಲಿ ಆರಂಭವಾಗಿದೆ ಎಂದು ಎಲ್ಐಸಿ ಚೇರ್ಮನ್ ಎಂ ಆರ್ ಕುಮಾರ್ ತಿಳಿಸಿದ್ದಾರೆ. '
ಎಲ್ಐಸಿ ಅಜಾದ್ ಉಳಿತಾಯದೊಂದಿಗೆ ಜೀವ ವಿಮೆಯನ್ನು ನೀಡುವ ಯೋಜನೆಯಾಗಿದೆ. ಹಾಗೆಯೇ ಮೆಚ್ಯೂರಿಟಿ ವೇಳೆ ನಿಗದಿತ ಭಾರೀ ಮೊತ್ತವನ್ನು ನೀಡುತ್ತದೆ. ಈ ಪಾಲಿಸಿ ಪ್ರೀಮಿಯಂ ಅವಧಿಯು ಪಾಲಿಸಿ ಟರ್ಮ್ನಿಂದ 8 ವರ್ಷವನ್ನು ಕಳೆದಾಗ ಬರುವ ಅವಧಿಯಾಗಿದೆ. ಆದ್ದರಿಂದಾಗಿ 18 ವರ್ಷದ ವಿಮೆಯನ್ನು ಆಯ್ಕೆ ಮಾಡಿದರೆ, 10 ವರ್ಷದ ಪ್ರೀಮಿಯಂ ಅನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಪಾಲಿಸಿಯು 15 ವರ್ಷದಿಂದ 20 ವರ್ಷದ ಪಾಲಿಸಿ ಅವಧಿಯನ್ನು ಹೊಂದಿದೆ. ಕನಿಷ್ಠ ಮೊತ್ತವು 2 ಲಕ್ಷ ರೂಪಾಯಿ ಆಗಿದ್ದು, ಗರಿಷ್ಠ ಮೊತ್ತ 5 ಲಕ್ಷ ರೂಪಾಯಿ ಆಗಿದೆ. ಈ ಪಾಲಿಸಿ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

ಪಾಲಿಸಿಯ ಬಗ್ಗೆ ಮಾಹಿತಿ
ಎಲ್ಐಸಿ ಜೀವನ್ ಅಜಾದ್ ಯೋಜನೆಯು ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ, ಉಳಿತಾಯ ಮಾಡಲಾಗುವ ಜೀವ ವಿಮೆ ಯೋಜನೆಯಾಗಿದೆ. ಹಾಗೆಯೇ ಕನಿಷ್ಠ ಪ್ರೀಮಿಯಂ ಅನ್ನು ಹೊಂದಿದೆ. ಇದು ನಿಗದಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ. ಪ್ರೀಮಿಯಂ ಪಾವತಿ ಅವಧಿಯು 8 ವರ್ಷಕ್ಕಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್ಗಿಂತ ಕಡಿಮೆ ಅವಧಿ ಇದಾಗಿದೆ.
ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಹಣಕಾಸು ಸಹಾಯವನ್ನು ಯೋಜನೆಯು ನೀಡುತ್ತದೆ. ಮೆಚ್ಯೂರಿಟಿ ವೇಳೆ ಅಧಿಕ ಮೊತ್ತ ನಿಮಗೆ ಲಭ್ಯವಾಗಲಿದೆ. ಸಾವನ್ನಪ್ಪಿದರೆ ಅಥವಾ ಅಪಘಾತದಲ್ಲಿ ಅಂಗವೂನತೆ ಉಂಟಾದರೆ ನಿಮ್ಮ ಕುಟುಂಬಕ್ಕೆ ಅಥವಾ ನಾಮಿನಿಗೆ ಬೆನಿಫಿಟ್ ಲಭ್ಯವಾಗಲಿದೆ. 3 ಲಕ್ಷ ರೂಪಾಯಿವರೆಗೆ ವಿಮೆ ಪಾಲಿಸಿ ಇದೆ.
ಎಲ್ಐಸಿ ಜೀವನ ಅಜಾದ್ ಯೋಜನೆಯ ಅತೀ ಕಡಿಮೆ ಮೊತ್ತ 2 ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ಅಧಿಕ ಮೊತ್ತದ ಹೂಡಿಕೆಯನ್ನು ಕೂಡಾ ಮಾಡಬಹುದು. 15ರಿಂದ 20 ವರ್ಷ ಪಾಲಿಸಿ ಅವಧಿಯಾಗಿದೆ. ಈ ಯೋಜನೆಯಲ್ಲಿ ವಯೋಮಿತಿ ಕೂಡಾ ಇದೆ. 90 ದಿನದ ಮಗುವಿನಿಂದ ಹಿಡಿದು 50 ವರ್ಷಗಳವರೆಗಿನ ವಯಸ್ಸಿನವರು ಹೂಡಿಕೆಯನ್ನು ಮಾಡಬಹುದು. ಪ್ರೀಮಿಯಂ ಅನ್ನು ವಾರ್ಷಿಕವಾಗಿ, ಅರ್ಧವಾರ್ಷಿಕ, ತ್ರೈಮಾಸಿಕವಾಗಿ, ಮಾಸಿಕವಾಗಿ ಹೂಡಿಕೆಯನ್ನು ಮಾಡಬಹುದು. ಪಾಲಿಸಿಯನ್ನು 2 ವರ್ಷದಲ್ಲಿ ಸರೆಂಡರ್ ಮಾಡಬಹುದು. ಅಥವಾ ಎರಡು ಬಾರಿ ಪ್ರೀಮಿಯಂ ಪಾವತಿಸಿ ಸರಂಡರ್ ಮಾಡಬಹುದು. ಹಾಗೆಯೇ ಈ ವಿಮೆ ಅಡಿಯಲ್ಲಿ ಸಾಲವನ್ನು ಕೂಡಾ ಪಡೆಯಬಹುದು.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Myauru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Bidadi Township: ಬಿಡದಿ ಟೌನ್ಶಿಪ್ ಯೋಜನೆ; 7,000 ಎಕರೆಗೂ ಅಧಿಕ ಭೂಸ್ವಾಧೀನಕ್ಕೆ ಸರ್ಕಾರ ಸಿದ್ಧ



Click it and Unblock the Notifications