ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಅತೀ ಅಧಿಕ ರಿಟರ್ನ್ ಅನ್ನು ಪಡೆಯಲು ಎಲ್ಲಿ ಸಾಧ್ಯ ಎಂದು ನೋಡುತ್ತೇವೆ. ಹಾಗೆಯೇ ಹೆಚ್ಚು ರಿಟರ್ನ್ ಜೊತೆ ಸುರಕ್ಷತೆಯನ್ನು ಕೂಡಾ ನೋಡುತ್ತೇವೆ. ನಾವು ಹೂಡಿಕೆ ಮಾಡಿದ ಹಣವು ಸುರಕ್ಷಿತವಾಗಿರಲಾರದು ಎಂದಾದಾಗ ಹೂಡಿಕೆಗೆ ಹಿಂಜರಿಯುವುದು ಸಹಜವಲ್ಲವೇ. ನಮಗೆ ಅಧಿಕ ರಿಟರ್ನ್ ಹಾಗೂ ಸುರಕ್ಷತೆ ಎರಡೂ ಬೇಕೆಂದಾಗ ಭಾರತೀಯ ಜೀವ ವಿಮಾ ಸಂಸ್ಥೆ (ಎಲ್ಐಸಿ) ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ.
ಎಲ್ಐಸಿಯ ಹಲವಾರು ಯೋಜನೆಗಳ ಪೈಕಿ ಇತ್ತೀಚೆಗೆ ಅಪ್ಡೇಟ್ ಆದ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಉತ್ತಮ ರಿಟರ್ನ್ ನೀಡುವ ಯೋಜನೆಯಾಗಿದೆ. ಅಧಿಕ ಆನ್ಯೂಟಿ ರೇಟ್ ಹೊಂದಿರುವ ಯೋಜನೆ ಇದಾಗಿದೆ. ಇದು ಪಿಂಚಣಿ ಯೋಜನೆಯಾಗಿದೆ. ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆಯಲು ಬಯಸುವವರಿಗೆ ಇದು ಉತ್ತಮವಾಗಿದೆ.
ಯಾರು ತಾನು ನಿವೃತ್ತಿ ಪಡೆದಾಗ ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಕೊಂಚ ಅಧಿಕ ಮೊತ್ತದ ಹಣ ಲಭ್ಯವಾಗಬೇಕು ಎಂದು ಬಯಸುತ್ತಾರೋ ಅವರಿಗೆ ಈ ಯೋಜನೆ ಉತ್ತಮವಾಗಿದೆ. ನೀವು ಹೂಡಿಕೆ ಆರಂಭಿಸಿ ಅದರ ಮೆಚ್ಯೂರಿಟಿಗಾಗಿ ಕಾಯಬೇಕಾಗುತ್ತದೆ. ಇದರ ಅವಧಿ 1ರಿಂದ 12 ವರ್ಷಗಳಾಗಿದೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಯೋಜನೆಯ ಬಗ್ಗೆ ಮಾಹಿತಿ
ಎಲ್ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ಗರಿಷ್ಠ ಖರೀದಿ ಮಿತಿ ಇಲ್ಲ. ಅಧಿಕ ಖರೀದಿ ಮಾಡುವ ಅವಕಾಶ ಇರುವ ಕಾರಣ ಅಧಿಕ ಅನ್ಯೂಟಿ ಈ ಯೋಜನೆಯಲ್ಲಿದೆ. ಎಲ್ಐಸಿ ಅಧಿಕೃತ ವೆಬ್ಸೈಟ್ನಲ್ಲಿ ಕಾಲ್ಕುಲೇಟರ್ ಇರಲಿದ್ದು ಅದರ ಸಹಾಯದಿಂದ ನೀವು ಅನ್ಯೂಟಿಯ ಲೆಕ್ಕಾಚಾರವನ್ನು ಯೋಜನೆಯನ್ನು ಖರೀದಿ ಮಾಡುವ ಸಂದರ್ಭದಲ್ಲೇ ಲೆಕ್ಕ ಹಾಕಿಕೊಳ್ಳಬಹುದು.
1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
ಎಲ್ಐಸಿ ವೆಬ್ಸೈಟ್ ಕಾಲ್ಕುಲೇಟರ್ ಪ್ರಕಾರ ನೀವು ಎಲ್ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ಮಾಸಿಕವಾಗಿ ಒಂದು ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆಯಬೇಕಾದರೆ, ಒಂದು ಕೋಟಿ ರೂಪಾಯಿಯ ವಿಮೆಯನ್ನು ಖರೀದಿ ಮಾಡಬೇಕಾಗುತ್ತದೆ. ನೀವು ಒಂದು ಕೋಟಿ ರೂಪಾಯಿಯ ವಿಮೆಯನ್ನು ಖರೀದಿ ಮಾಡಿದರೆ ನಿಮಗೆ 12 ವರ್ಷದ ಅವಧಿಯ ಬಳಿಕ ಮಾಸಿಕವಾಗಿ 1.06 ಲಕ್ಷ ರೂಪಾಯಿಯ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಹತ್ತು ವರ್ಷಗಳ ಅವಧಿಗೆ ಹೂಡಿಕೆಯನ್ನು ಮಾಡಿದರೆ 94,840 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.
50 ಸಾವಿರ ಪಿಂಚಣಿಯನ್ನು ಪಡೆಯವುದು ಹೇಗೆ?
ಎಲ್ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ನೀವು ಮಾಸಿಕವಾಗಿ 50 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಬೇಕಾದರೆ 50 ಲಕ್ಷ ರೂಪಾಯಿಗೆ ಪ್ಲ್ಯಾನ್ ಅನ್ನು ಖರೀದಿಸಬೇಕಾಗುತ್ತದೆ. 50 ಲಕ್ಷ ರೂಪಾಯಿಗೆ ಮಾಸಿಕ ಪಿಂಚಣಿಯನ್ನು ಖರೀದಿಸಿದರೆ, 12 ವರ್ಷ ಅವಧಿಯ ಬಳಿಕ ಮಾಸಿಕವಾಗಿ 53,460 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹತ್ತು ವರ್ಷಗಳ ಅವಧಿಗೆ ಹೂಡಿಕೆಯನ್ನು ಮಾಡಿದರೆ, ಮಾಸಿಕವಾಗಿ 47,420 ರೂಪಾಯಿ ಪಿಂಚಣಿ ಪಡೆಯಬಹುದು.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

India Post: ಅಂಚೆ ಕಚೇರಿಯಲ್ಲಿ ಇಂದಿನಿಂದ ಹೊಸ ಸೇವೆ ಆರಂಭ; ಇನ್ಮೇಲೆ ಮತ್ತಷ್ಟು ಸುಲಭ

India Aviation Rules: ವಿಮಾನ ಪ್ರಯಾಣದಲ್ಲಿ ದೊಡ್ಡ ಬದಲಾವಣೆ; 60 ಶೇಕಡಾ ಆಸನಗಳು ಉಚಿತ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ



Click it and Unblock the Notifications