ಎಲ್ಐಸಿ ಜೀವನ್ ಶಾಂತಿ: ಭಾರತೀಯ ಜೀವ ವಿಮಾ ನಿಗಮವು ಅನುಕೂಲಸ್ಥರಿಗಾಗಿಯೇ "ಎಲ್ಐಸಿ ಜೀವನ್ ಶಾಂತಿ" ಎಂಬ ವಿನೂತನವಾದ ಯೋಜನೆಯನ್ನು ಪ್ರಾರಂಭಿಸಿದೆ. ನಿವೃತ್ತಿಯ ವೇಳೆ ಪಿಂಚಣಿ ಸೌಕರ್ಯವನ್ನು ಬಯಸುವವರಿಗಾಗಿಯೇ ಈ ಯೋಜನೆಯನ್ನು ವಿನ್ಯಾಸಗೊಳಿಸಲಿದೆ. ನಿವೃತ್ತಿಯ ನಂತರವೂ ಆರ್ಥಿಕ ಸ್ವಾವಲಂಬನೆ ಬಯಸುವವರಿಗೆ "ಎಲ್ಐಸಿ ಜೀವನ್ ಶಾಂತಿ" ಯೋಜನೆ ಸಹಾಯ ಮಾಡಲಿದ್ದು, ಇದರಿಂದಾಗಿ ಮುಂದೆ ಪಾಲಿಸಿದಾರರು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಬಹುದಾಗಿದೆ.
ಯಾಕೆಂದರೆ "ಜೀವನ್ ಶಾಂತಿ ಯೋಜನೆ"ಯಡಿಯಲ್ಲಿ ನೀವು ಮಾಸಿಕವಾಗಿ ಒಂದು ಲಕ್ಷ ರೂ.ಗಳಿಂತಲೂ ಹೆಚ್ಚು ಪಿಂಚಣಿ ಪಡೆಯಬಹುದಾಗಿದೆ. ಇದಲ್ಲದೆ ನಿಗಮವು ಇತ್ತೀಚೆಗೆ ತಮ್ಮ ವಾರ್ಷಿಕ ದರಗಳನ್ನು ನವೀಕರಿಸಿದ್ದು, ಹೀಗಾಗಿ ಪಾಲಿಸಿದಾರರು ತಮ್ಮ ಪ್ರೀಮಿಯಂಗಳಿಗೆ ಹೆಚ್ಚಿನ ಪಿಂಚಣಿ ಪಡೆಯಬಹುದಾಗಿದೆ.

ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ನಿಯಮಿತ ಆದಾಯವನ್ನು ಬಯಸುವವರಿಗಾಗಿಯೇ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆದುಕೊಳ್ಳಲು ಬಯಸುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಏಕ ಪ್ರೀಮಿಯಂ ಪಾವತಿ ಮೂಲಕದ ಇದರಲ್ಲಿ ಹೂಡಿಕೆ ಮಾಡಿ ತಮ್ಮ ಪಿಂಚಣಿ ಗುರಿಯನ್ನು ಸಾಧಿಸಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಗರಿಷ್ಟ ಮಿತಿ ಇರುವುದಿಲ್ಲ. ನಿಮಗೆ ತಿಂಗಳಿಗೆ ಬೇಕಾಗಿರುವ ಆಧಾಯದ ಆಧಾರ ಮೇಲೆ ನೀವು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ನಿಮಗೆ ಮಾಸಿಕವಾಗಿ ಒಂದು ಲಕ್ಷ ರೂ. ಪೆನ್ಷನ್ ಬೇಕು ಎಂದಾದರೆ, ನೀವು ಒಂದು ಕೋಟಿ ರೂ.ಗಳಂತೆ 12 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. 12 ವರ್ಷದ ಬಳಿಕ ನಿಮಗೆ ಮಾಸಿಕವಾಗಿ 1.06 ಲಕ್ಷ ರೂ. ಆದಾಯ ದೊರಕುತ್ತದೆ.
ಒಂದು ವೇಳೆ ನೀವು ಕೇವಲ ಹತ್ತು ವರ್ಷ ಮಾತ್ರ ಹೂಡಿಕೆ ಮಾಡಲು ಬಯಸಿದರೆ, ನಿಮಗೆ ತಿಂಗಳಿಗೆ 94,840 ರೂ. ಪಿಂಚಣೆ ದೊರಕುತ್ತದೆ. ನೀವು ಕೇವಲ 50,000 ರೂ. ಮಾತ್ರ ಪೆನ್ಷನ್ ಸಾಕು ಎಂದು ಭಾವಿಸಿದರೆ, ನೀವು ಕೇವಲ 50 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. 12 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನಿಮಗೆ 53,460 ರೂ. ಮಾಸಿಕವಾಗಿ ದೊರಕುತ್ತದೆ.
More From GoodReturns

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ



Click it and Unblock the Notifications