ಬೆಂಗಳೂರನ್ನು ಭಾರತದ ಐಟಿ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಹಲವಾರು ಸಿರಿವಂತರು ಹಾಗೂ ಖ್ಯಾತ ಉದ್ಯಮಿಗಳು ನೆಲೆಸಿದ್ದಾರೆ. ಕಿರಣ್ ಮಜುಂದಾರ್ ಶಾ, ವಿಪ್ರೊದ ಅಜೀಂ ಪ್ರೇಮ್ಜಿ ಮತ್ತು ಇನ್ಫೋಸಿಸ್ನ ಎನ್ಆರ್ ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಈ ಬಾರಿ ಚಿರಪರಿಚಿತರಲ್ಲದ ಬೆಂಗಳೂರಿನ ವ್ಯಕ್ತಿಯೊಬ್ಬರು 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಬಿಲಿಯನೇರ್ ಅರ್ಜುನ್ ಮೆಂಡಾ. ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಅತ್ಯಂತ ಶ್ರೀಮಂತ ವ್ಯಕ್ತಿ ಅರ್ಜುನ್ ಮೆಂಡಾ ಈ ಮೂಲಕ ಗಮನಸೆಳೆದಿದ್ದಾರೆ. ಬೆಂಗಳೂರು ಮೂಲದ ಸಂಸ್ಥೆ ಆರ್ಎಂಜೆಂಡ್ ಕಾರ್ಪ್ ಮುನ್ನಡೆಸುತ್ತಿರುವ ಅರ್ಜುನ್ ಮೆಂಡಾ ಮತ್ತು ಅವರ ಕುಟುಂಬವು 37,000 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದೆ.

ಅರ್ಜುನ್ ಮೆಂಡಾ ಯಾರು?
ಅರ್ಜುನ್ ಮೆಂಡಾ ಇಂದು ಅತ್ಯಂತ ಸಿರಿವಂತನಾಗಿ ಹೊರಹೊಮ್ಮಿದ್ದರೂ, ಪುಟ್ಟ ಉದ್ಯಮವನ್ನು ಪ್ರಾರಂಭಿಸಿ ಅದನ್ನು ಬಹು-ಶತಕೋಟಿ-ಡಾಲರ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸುವ ದಾರಿ ಸುಲಭದಾಯಕವಾಗಿರಲಿಲ್ಲ. ಅದಕ್ಕಾಗಿ ಅವರ ಶ್ರಮ ಪಟ್ಟು, ಶೃದ್ದೆಯಿಂದ ಕೆಲಸ ಮಾಡಿದ್ದಾರೆ. ಮೆಂಡಾ ಅವರು ಈಗ ಪಾಕಿಸ್ತಾನದಲ್ಲಿರುವ ಶಿಕರ್ಪುರ್ ಸಿಂಗ್ನಲ್ಲಿ ಜನಿಸಿದ್ದರು.
ಭಾರತ - ಪಾಕಿಸ್ಥಾನ ಇಬ್ಬಾಗವಾದಾಗ ಮೆಂಡಾ ಮತ್ತು ಅವರ ಕುಟುಂಬವು ಪಾಕ್ ನಲ್ಲಿದ್ದ ತಮ್ಮ ಸಂಪೂರ್ಣ ಸಂಪತ್ತು ಮತ್ತು ಆಸ್ತಿಯನ್ನು ತ್ಯಜಿಸಿ ಭಾರತಕ್ಕೆ ಬಂದರು. ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ವಿದ್ಯಾರ್ಥಿವೇತನದ ಕಾರಣದಿಂದ ಅರ್ಜುನ್ ಮೆಂಡಾ ಅವರು ಐಐಟಿ ಖರಗ್ಪುರದಲ್ಲಿ ಅಭ್ಯಾಸಿಸಲು ಸಾಧ್ಯವಾಯಿತು. ಇಂದು ಮೆಂಡಾ ಫೌಂಡೇಶನ್ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಹಲವರ ಕನಸುಗಳನ್ನು ನನಸು ಮಾಡುತ್ತಿದೆ.
ಮೆಂಡಾ ಅವರು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ನಲ್ಲಿ ಇಂಡಸ್ಟ್ರೀಯಲ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967 ರಲ್ಲಿ, ಅವರು ಬೆಂಗಳೂರಿನಲ್ಲಿ ಸಣ್ಣಮಟ್ಟದ ಕಾರ್ಯಾಚರಣೆಯೊಂದಿಗೆ ಉದ್ಯಮಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೆಲವು ವರ್ಷಗಳ ನಂತರ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿ 1980 ರ ದಶಕದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಎಂಟ್ರಿ ಕೊಟ್ಟರು. 2002 ರಲ್ಲಿ, ಆರ್ಎಂಜೆಡ್ ಕಾರ್ಪ್ ಅನ್ನು ಸ್ಥಾಪಿಸಿದರು.
ಇಂದು ಆರ್ಎಂಜೆಡ್ ಕಾರ್ಪ್ ವ್ಯವಹಾರವನ್ನು ಅವರ ಇಬ್ಬರು ಪುತ್ರರಾದ ರಾಜ್ ಮತ್ತು ಮನೋಜ್ ಮೆಂಡಾ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಮೆಂಡಾ ಗ್ರೂಪ್ ಚೇರ್ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಂಪನಿಯೂ ಕಾರ್ಪೊರೇಟ್ ಕಚೇರಿಗಳ ಟಾಪ್ ಬಿಲ್ಡರ್ಗಳಲ್ಲಿ ಒಂದಾಗಿದ್ದು ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಇತರ ಸಾಫ್ಟ್ವೇರ್ ಹಬ್ಗಳಲ್ಲಿ ಇವರ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
More From GoodReturns

LPG-Bengaluru: ಎಲ್ಪಿಜಿ ಕೊರತೆ ಬೆನ್ನಲ್ಲೇ, ಬೆಂಗಳೂರಲ್ಲಿ ಸಿಲಿಂಡರನ್ನೇ ಕಳ್ಳತನ ಮಾಡಿದ ಖದೀಮ! ವಿಡಿಯೋ ವೈರಲ್

Indane cylinder: ಇಂಡೇನ್ ಸಿಲಿಂಡರ್ ಬುಕಿಂಗ್ ಈಗ ಸುಲಭ; ವಾಟ್ಸಾಪ್ ಮೂಲಕ ಬುಕ್ ಮಾಡೋದೇಗೆ ತಿಳಿಯಿರಿ

LPG: ಮತ್ತೆ ಬೆಂಗಳೂರಿನಲ್ಲಿ ಶುರುವಾಗುತ್ತಾ Work From Home? ಎಲ್ಪಿಜಿ ಕೊರತೆ ಬೆನ್ನಲ್ಲೇ ಉದ್ಯೋಗಿಗಳ ಹೊಸ ಡಿಮ್ಯಾಂಡ್

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

LPG-Power Cut: ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್! ಮತ್ತೆ ಎದುರಾಗುತ್ತಾ ಕರೆಂಟ್ ಸಮಸ್ಯೆ?

Bengaluru Traffic: ಬೆಂಗಳೂರಿಗರೇ ಇಲ್ಲಿ ಗಮನಿಸಿ; ಇಂದು ಇಲ್ಲೆಲ್ಲಾ ಸಂಚಾರ ಬಂದ್!

Hosur railway line: ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ರೈಲು ಆದಷ್ಟು ಬೇಗ ಆರಂಭ-ಯಾವಾಗೆಂದು ತಿಳಿಯಿರಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications