ಎಡೆಲ್ ಗಿವ್ ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ರ ಪ್ರಕಾರ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಭಾರತದ ಅತ್ಯಂತ ಉದಾರವಾಗಿ ದಾನ ಮಾಡುವ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಯಾಕೆಂದರೆ 2021-22ನೇ ಸಾಲಿನಲ್ಲಿ ಅವರು 120 ಕೋಟಿ ರೂಪಾಯಿಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ.
ರೋಹಿಣಿಯವರು ಹೆಚ್ಚಿನ ದೇಣಿಗೆಗಳೆಲ್ಲವೂ ಇಕೋಲಜಿ (ಪರಿಸರ ವಿಜ್ಞಾನ), ನೈರ್ಮಲ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಹೆಚ್ಚು ಹಂಚಿ ಹೋಗಿದೆ. ಲೋಕೋಪಕಾರಿ ಪಟ್ಟಿಯಲ್ಲಿ ನಿಲೇಕಣಿ ಅವರು 11ನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಸಾಮಾಜಿಕ ಕಾರಣಗಳಿಗಾಗಿ 21 ಕೋಟಿ ರೂ. ವಿನಿಯೋಗಿಸಿದ ಯುಎಸ್ವಿಯ ಲೀನಾ ಗಾಂಧಿ ತಿವಾರಿ ಇದ್ದಾರೆ.

ರೋಹಿಣಿ ನಿಲೇಕಣಿ ಅವರು ಪ್ರತಿಷ್ಠಿತ ಪಬ್ಲಿಷರ್ ಗಳಿಗಾಗಿ ಕೆಲಸ ಮಾಡುವ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಲಾಭರಹಿತ ಶೈಕ್ಷಣಿಕ ವೇದಿಕೆಯಾಗಿರುವ EkStep ಮತ್ತು ಲಾಭರಹಿತ ಮಕ್ಕಳ ಪ್ರಕಾಶಕ ಪ್ರಥಮ್ ಬುಕ್ಸ್ನ ಸ್ಥಾಪಕ ಪಾಲುದಾರರಾಗಿದ್ದಾರೆ.ಇದಲ್ಲದೇ ಸುಸ್ಥಿರ ನೀರು ಮತ್ತು ನೈರ್ಮಲ್ಯಕ್ಕಾಗಿ ರಾಷ್ಟ್ರೀಯ ಯೋಜನೆಗಳನ್ನು ಉತ್ತೇಜಿಸಲು,ಅವರು ಅರ್ಘ್ಯಮ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದಾರೆ.
ರೋಹಿಣಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದು ಅವರ ತಾಯಿ ಗೃಹಿಣಿಯಾಗಿದ್ದು, ತಂದೆ ಇಂಜಿನಿಯರ್ ಆಗಿದ್ದರು. ಅವರು ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದುಕೊಂಡಿದ್ದಾರೆ.
ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ರೋಹಿಣಿ 1980 ರಲ್ಲಿ ಈಗ ನಿಷ್ಕ್ರಿಯವಾಗಿರುವ ಬಾಂಬೆ ಮ್ಯಾಗಜೀನ್ನಲ್ಲಿ ವರದಿಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ನಂತರ ಬೆಂಗಳೂರಿನಲ್ಲಿ ಸಂಡೇ ಮ್ಯಾಗಜೀನ್ಗಾಗಿ ಕೆಲಸ ಮಾಡಿದರು.
ಡಿಸೆಂಬರ್ 31, 2022 ರ ಕಾರ್ಪೊರೇಟ್ ಷೇರುದಾರರ ದಾಖಲೆಗಳ ಪ್ರಕಾರ, ರೋಹಿಣಿ ನಿಲೇಕಣಿ ಅವರು ಸಾರ್ವಜನಿಕವಾಗಿ ಒಂದು ಈಕ್ವಿಟಿಯನ್ನು ಹೊಂದಿದ್ದು, ಇದು ಟ್ರೆಂಡ್ಲೈನ್ ಪ್ರಕಾರ 4,878.0 ಕೋಟಿ ರೂಪಾಯಿ ಆಗಿದೆ. ನಿಲೇಕಣಿ ಕುಟುಂಬದ ನಿವ್ವಳ ಸಂಪತ್ತು ಪ್ರಸ್ತುತ $1.7 ಬಿಲಿಯನ್ ಎಂದು ಅಂದಾಜಿಸಲಾಗಿದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications