48 ವರ್ಷದ ಕಾರ್ತಿಕ್ ಶರ್ಮಾ ಅವರು ಸಾಧನೆಯ ಹಾದಿಯಲ್ಲಿ ಭಾರತದಲ್ಲಿ ತಮ್ಮನ್ನು ಸ್ವಯಂ ಗುರುತಿಸಿಕೊಂಡಿರುವ ಯುವ ಉದ್ಯಮಿಯಾಗಿದ್ದಾರೆ. ವಿಶೇಷವೆಂದರೆ ಶರ್ಮಾ ಅವರು ತಮ್ಮಲ್ಲಿರುವ ಅಪಾರ ಸಂಪತ್ತು ಹಾಗೂ ಸಾಧನೆಗಳ ನಡುವೆಯೂ ಪ್ರಚಾರಗಳಿಂದ ಬಹಳ ದೂರ ಉಳಿದುಕೊಂಡಿದ್ದಾರೆ. ಐಐಟಿ ಪದವಿಯೊಂದಿಗೆ ಭಾರತವನ್ನು ತೊರೆದ ಬಳಿಕ ಯುಎಸ್ನಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.
ತಮ್ಮ ಕಂಪನಿಯನ್ನು ಪ್ರಾರಂಭಿಸಿದ ಸುಮಾರು ಒಂದೂವರೆ ದಶಕದ ನಂತರ 2021ರಲ್ಲಿ 2 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಅವರು ವಿಶ್ವದ ಪ್ರಮುಖ ಹೆಡ್ಜ್ ಫಂಡ್ ಮ್ಯಾನೇಜರ್ಗಳಲ್ಲಿ ಒಬ್ಬರಾಗಿ ಹೆಸರು ಗಳಿಸಿದ್ದಾರೆ. 2023ರಲ್ಲಿ ಸುಮಾರು 24,000 ಕೋಟಿ ರೂಪಾಯಿ (2.9 ಬಿಲಿಯನ್ ಡಾಲರ್) ನಿವ್ವಳ ಮೌಲ್ಯವನ್ನು ಸಂಪಾದಿಸಿದ್ದಾರೆ.

ಕಾರ್ತಿಕ್ ಶರ್ಮಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಭಾರತದಲ್ಲಿ ಮಾಡಿದ್ದು, ನಂತರದಲ್ಲಿ ಮದ್ರಾಸ್ನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ನಂತರ ಅವರು ಅಮೆರಿಕಾಕ್ಕೆ ತೆರಳಿದ್ದರು. ಅಲ್ಲಿ ಶರ್ಮಾ ಅವರು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.
ಕಾರ್ತಿಕ್ ಶರ್ಮಾ ಅವರು 1998ರಲ್ಲಿ ಜಾಗತಿಕ ಸಲಹಾ ಎಂಎನ್ಸಿ ಮೆಕಿನ್ಸೆ & ಕಂಪನಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಮುಂದೆ ಕಾರ್ತಿಕ್ ಶರ್ಮಾ ಅವರು ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸೇರಿಕೊಂಡರು. ಅಲ್ಲಿ ಕಾರ್ತಿಕ್ ಶರ್ಮಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಲು ಕಾರ್ಪೊರೇಟ್ ವಲಯದಲ್ಲಿ ಗುರುತಿಸಿಕೊಂಡರು.
2006ರಲ್ಲಿ, ಕಾರ್ತಿಕ್ ಶರ್ಮಾ ಎಸ್ಆರ್ಎಸ್ ಹೂಡಿಕೆಯನ್ನು ಸ್ಥಾಪಿಸಿದ್ದರು. ಅದು ಪ್ರಸ್ತುತ ಸುಮಾರು 10 ಬಿಲಿಯನ್ ಡಾಲರ್ (82,600 ಕೋಟಿಗೂ ಹೆಚ್ಚು) ಬಂಡವಾಳವನ್ನು ನಿರ್ವಹಿಸುತ್ತಿದೆ. 2010ರಲ್ಲಿ, ಕಾರ್ತಿಕ್ ಶರ್ಮಾ ಅವರ ಸಂಸ್ಥೆಯು ಕಾರ್ ಬಾಡಿಗೆ ಕಂಪನಿಯಾದ Avisನ ಷೇರುಗಳನ್ನು ಖರೀದಿಸಲು ನಿರ್ಣಾಯಕ ಬೆಟ್ ಮಾಡಿತ್ತು.
11 ವರ್ಷಗಳಲ್ಲಿ ಶರ್ಮಾ ಅವರ ಆಸ್ತಿ ಮೌಲ್ಯವು ಶೇಕಡ 456 ರಷ್ಟು ಬೆಳೆದಿದೆ. ಕಾರ್ತಿಕ್ ಶರ್ಮಾ 2022ರಲ್ಲಿ ಬಿಲಿಯನೇರ್ ಆಗಿ ಗುರುತಿಸಿಕೊಂಡರು. ಒಂದು ಹಂತದಲ್ಲಿ ಅವರನ್ನು ಅತ್ಯಂತ ಪ್ರತಿಭಾವಂತ ಪಾಲುದಾರ ಎಂದು ಕರೆಯಲಾಯಿತು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications