ಬೆಂಗಳೂರು ಮೂಲದ ಸ್ಟಾರ್ಟಪ್ ದುಕಾನ್ ತನ್ನ ಶೇ. 90ರಷ್ಟು ಗ್ರಾಹಕ ಬೆಂಬಲ ವಿಭಾಗದ ತಂಡವನ್ನು ಕೆಲಸದಿಂದ ತೆಗೆದು ಹಾಕಿದೆ. ಅವರ ಜಾಗಕ್ಕೆ ಕೃತಕ ಬುದ್ಧಿಮತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ನಿರ್ಧಾರವನ್ನು ದುಕಾನ್ ಸ್ಥಾಪಕ ಹಾಗೂ ಸಿಇಒ ಸುಮಿತ್ ಶಾ ಅವರು ಟ್ವಿಟ್ಟರ್ನಲ್ಲಿ ಘೋಷಣೆ ಮಾಡಿದ್ದಾರೆ.
ಈ ನಿರ್ಧಾರದ ಬಗ್ಗೆ ತಿಳಿಸಿರುವ ಸುಮಿತ್ ಶಾ ಅವರು, ಲಾಭದಾಯಕತೆಗೆ ಆದ್ಯತೆ ನೀಡಲಾಗಿದ್ದು, ಇದರಿಂದ ಗ್ರಾಹಕ ಸಪೋರ್ಟ್ಗೆ ಸಂಬಂಧಿಸಿದ ವೆಚ್ಚವು ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೆ ರೆಸಲ್ಯೂಷನ್ ಸಮಯವು ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ. ಶಾ ಅವರ ಈ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿದೆ. ಈ ನಡುವೆ ಕಂಪನಿಯು ಬಹು ಜವಾಬ್ದಾರಿಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಶಾ ಹೇಳಿದ್ದಾರೆ.

ಸುಮಿತ್ ಶಾ ಬಗ್ಗೆ ಮಾಹಿತಿ ತಿಳಿಯಿರಿ
ಶಾ ಅವರು ದುಕಾನ್ನ ಸಹ-ಸಂಸ್ಥಾಪಕ ಹಾಗೂ ಸಿಇಒ ಆಗಿದ್ದಾರೆ. ಇದು ಡಿಐವೈ ಪ್ಲಾಟ್ಫಾರ್ಮ್ ಆಗಿದೆ. ಇದು ಯಾವುದೇ ಅನುಭವ ಹೊಂದಿರದ ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಇ-ಕಾಮರ್ಸ್ ಸ್ಟೋರ್ಗಳನ್ನು ತೆರೆಯಲು ನೆರವಾಗುತ್ತದೆ. ಸುಮಿತ್ ಶಾ ಅವರು 2020ರಲ್ಲಿ ಸುಭಾಷ್ ಚೌಧರಿ ಅವರ ಜತೆ ಸೇರಿ ಡುಕಾನ್ ಅನ್ನು ಸ್ಥಾಪಿಸಿದ್ದಾರೆ. ಚೌಧರಿ ಅವರು ಕಂಪನಿಯ ಸಹ ಸ್ಥಾಪಕ ಹಾಗೂ ಸಿಟಿಒ ಆಗಿದ್ದಾರೆ.
ದುಕಾನ್ ಅನ್ನು ಪ್ರಾರಂಭಿಸುವ ಮೊದಲು ಸುಮಿತ್ ಶಾ ಅವರು Rankz.io ಹಾಗೂ Risemetric ಅನ್ನು ಕ್ರಮವಾಗಿ 2018 ಮತ್ತು 2014ರಲ್ಲಿ ಸ್ಥಾಪಿಸಿದ್ದರು. ಸುಮಿತ್ ಶಾ ಅವರು ಉದ್ಯಮಿ ಹಾಗೂ ಪ್ರಾಡೆಕ್ಟ್ ಡಿಸೈನರ್ ಆಗಿದ್ದಾರೆ. ಸುಮಿತ್ ಶಾ ಅವರು ಮುಂಬೈ ಮೂಲದವರು. ಅಷ್ಟೇಅಲ್ಲ, ಎಂಜಿನಿಯರಿಂಗ್ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪ್ರಮುಖ ಕೆಲವೊಂದು ಕೋರ್ಸ್ಗಳನ್ನು ಆನ್ಲೈನ್ ಮೂಲಕ ಕಲಿತುಕೊಂಡ ನಂತರ ಅವರು ಮ್ಯಾಕ್ಡೊನಾಲ್ಡ್, ಕ್ರೆಡ್ ಸೇರಿದಂತೆ ಹಲವು ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದರು.
ಸುಮಿತ್ ಶಾ ಈ ಹಿಂದೆ ಕಾರ್ಯನಿರ್ವಹಣೆ ಮಾಡಿದ್ದ ಸಂಸ್ಥೆಗಳು
ಸುಮಿತ್ ಶಾ ಅವರು ಹೌಸಿಂಗ್ ಡಾಟ್ ಕಾಮ್ ಹಾಗೂ TinyOwl ಕಂಪನಿಯಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ನಂತರದಲ್ಲಿ ಸುಮಿತ್ ಅವರು ಗೆಳೆಯ ಸುಭಾಷ್ ಜತೆ ಸೇರಿಕೊಂಡು ರಿಸಿಮೆಟ್ರಿಕ್ ಎನ್ನುವ ತಮ್ಮದೇ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಸುಮಿತ್ ಶಾ ನಾಲ್ಕು ವರ್ಷದ ಬಳಿಕ ಅಂದರೆ 2018ರಲ್ಲಿ Rankz.io ಅನ್ನು ಸ್ಥಾಪಿಸಿದ್ದರು.
ಆದರೆ ಈಗ ಶೇಕಡ 90 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳಿಗೆ ಸುಮಿತ್ ಶಾ ಗುರಿಯಾಗಿದ್ದಾರೆ. "ಎಐ ಚಾಟ್ಬಾಟ್ ಹಿನ್ನೆಲೆಯಲ್ಲಿ ನಾವು ಶೇ.90 ರಷ್ಟು ನಮ್ಮ ಸಪೋರ್ಟ್ ಟೀಂನವರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಇದು ಅತ್ಯಂತ ಕಠಿಣ? ಹೌದು. ಖಂಡಿತವಾಗಿ? ಅನಿವಾರ್ಯ," ಎಂದು ಸುಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಲಿನಾ, ಎಐ ಅಸಿಸ್ಟೆಂಟ್ ಬಗ್ಗೆ ಅವರು ಬಹಳ ವಿವರವಾಗಿ ಹೇಳಿದ್ದು, ಇದು ಅತ್ಯಂತ ಕಳಪೆ ಸಂವಹನ, ವಿಳಂಬ ಪ್ರತಿಕ್ರಿಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಸುಮಾರು 12 ಟ್ವೀಟ್ಗಳ ಬಳಿಕ ಶಾ ಅವರು ಪ್ರತಿಕ್ರಿಯಿಸಿದ್ದು, ಕಂಪನಿಯು ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ವಜಾಗೊಂಡ ಸಿಬ್ಬಂದಿಗೆ ನೀಡಿರುವ ಸಹಾಯದ ಕುರಿತು ಟ್ವಿಟರ್ ಬಳಕೆದಾರರು ಕೇಳಿದಾಗ, ಶಾ ಅವರು ತಮ್ಮ ಲಿಂಕ್ಡ್ಇನ್ ಪೋಸ್ಟ್ಗಾಗಿ ಗಮನಹರಿಸುವಂತೆ ಹೇಳಿದ್ದು, ಇದು ಕಠಿಣ ನಿರ್ಧಾರ ಎಂದು ಪುನರುಚ್ಚರಿಸಿದ್ದಾರೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications