ಭಾರತದ ವಾಣಿಜ್ಯ ನಗರಿ ಮುಂಬೈಯು ಇತ್ತೀಚೆಗೆ ದೇಶದಲ್ಲೇ ಅತ್ಯಂತ ದೊಡ್ಡ ವ್ಯವಹಾರದ ರಿಯಲ್ ಎಸ್ಟೇಟ್ ಡೀಲ್ಗೆ ಸಾಕ್ಷಿಯಾಗಿದೆ. ಆ ಮೂಲಕ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ದುಬಾರಿ ಆಸ್ತಿ ವ್ಯವಹಾರ ನಡೆಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.
ವಾಡಿಯಾ ಬಿಸಿನೆಸ್ ಗ್ರೂಪ್ಗೆ ಸೇರಿದ ನುಸ್ಲಿ ವಾಡಿಯಾ ಅವರು ತಮ್ಮ ಗ್ರೂಪ್ಗೆ ಸೇರಿದ ಬಾಂಬೆ ಡೈಯಿಂಗ್ ಕಂಪನಿಯ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಈ ಆಸ್ತಿ ಪರಭಾರೆ ಡೀಲ್ ಮೊತ್ತ ಸುಮಾರು 5200 ಕೋಟಿ ರೂ. ಆಗಿರುವುದಾಗಿ ಅಂದಾಜಿಸಲಾಗಿದೆ.

ಒಂದು ಕಾಲದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಬಾಂಬೆ ಡೈಯಿಂಗ್ ಬ್ರಾಂಡ್ ಜವಳಿ ಕ್ಷೇತ್ರದಲ್ಲಿ ಇತ್ತೀಚೆಗೆ ಬಂದ ಟ್ರೆಡೆಂಟ್, ವೆಲ್ಸ್ಪುನ್ ಹಾಗೂ ಇಂಡೋ ಕೌಂಟ್ನಂಥ ಬ್ರಾಂಡ್ಗಳ ಮುಂದೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆ ಬ್ರಾಂಡ್ ಅನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಈ ಡೀಲ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಫೋರ್ಬ್ಸ್ ವರದಿ ಮಾಡಿರುವ ಪ್ರಕಾರ, ಬಾಂಬೆ ಡೈಯಿಂಗ್ ಮೇಲಿನ ಸಾಲವನ್ನು ಪೂರ್ಣಗೊಳಿಸಿ ಕಂಪನಿಯನ್ನು ಲಾಭದತ್ತ ಮುನ್ನಡೆಸುವ ದೃಷ್ಟಿಯಿಂದ ವಾಡಿಯಾ ಅವರು ವರೋಲಿಯಲ್ಲಿರುವ ಅದರ ಆಸ್ತಿಯನ್ನು ಮಾರಾಟ ಮಾಡಿದೆ.
ವಾಡಿಯಾ ಗ್ರೂಪ್ ಪ್ರಸ್ತುತ ಮುನ್ನಡೆಸುತ್ತಿರುವ ಬ್ರಿಟಾನಿಯಾ ಕಂಪನಿಯು ಎಫ್ಎಂಸಿಜಿ ವಲಯದಲ್ಲಿ ದೈತ್ಯ ಉದ್ಯಮವಾಗಿ ನಿರೀಕ್ಷೆಗೆ ತಕ್ಕಂತೆ ಲಾಭದಾಯವಾಗಿ ನಡೆಯುತ್ತಿವೆ. ಬಾಂಬೆ ಬರ್ಮಾ, ಗೋ ಏರ್ ಹಾಗೂ ನ್ಯಾಷನಲ್ ಪೆರೊಕ್ಸೈಡ್ ವಾಡಿಯಾ ಒಡೆತನದ ಇತರೆ ಕಂಪನಿಗಳು. ನುಸ್ಲಿ ಅವರ ಮಗ ನೆಸ್ ಇತ್ತೀಚೆಗೆ ಪ್ರಾರಂಭಿಸಿದ ಗೋ ಏರ್ ವಿಮಾನಯಾನ ಸೇವೆಯು ಇತ್ತೀಚೆಗೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ವಿಶ್ಲೇಷಕರು ಹೇಳುವ ಪ್ರಕಾರ, ಜವಳಿ ಕ್ಷೇತ್ರದ ಈ ದೈತ್ಯ ಕಂಪನಿಯು ರಿಯಲ್ ಎಸ್ಟೇಟ್ ಕಂಪನಿಯಾಗಿ ಪರಿವರ್ತನೆಯಾದರೂ ಅಚ್ಚರಿಯಿಲ್ಲ. ಈ ಕಂಪನಿಯು ಭವಿಷ್ಯದಲ್ಲಿ 15000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಆಫ್ಲೋಡ್ ಮಾಡುವ ನಿರೀಕ್ಷೆಯನ್ನು ಹೊಂದಿದೆ.
ಈ ಬಹುದೊಡ್ಡ ಭೂ ಪರಭಾರೆ ಪ್ರಕಾರ ಬಾಂಬೆ ಡೈಯಿಂಗ್ನ 22 ಎಕರೆ ಜಾಗವನ್ನು 5200 ಕೋಟಿ ರೂ.ಗೆ ಗೂಸ್ ರಿಯಾಲಿಟಿ ಪ್ರೈವೆಟ್ ಲಿಮಿಟೆಡ್ಗೆ ಮಾರಾಟ ಮಾಡಲಾಗಿದೆ. ಅದರಲ್ಲಿ 4675 ರೂಪಾಯಿಯನ್ನು ತತ್ಕ್ಷಣಕ್ಕೆ ಹಾಗೂ ಉಳಿದ 525 ಕೋಟಿ ರೂಪಾಯಿಯನ್ನು ಕೆಲವೊಂದು ಮಾನದಂಡಗಳ ಆಧಾರದಲ್ಲಿ ಪಾವತಿಸಲಾಗುತ್ತದೆ.
ಈ ಡೀಲ್ ಬಾಂಬೈ ಡೈಯಿಂಗ್ ಒಮ್ಮೆಲೇ 4300 ಕೋಟಿ ರೂಪಾಯಿ ಪೂರ್ವ-ತೆರಿಗೆ ಲಾಭವನ್ನು ಗಳಿಸುವುದಕ್ಕೆ ಅನುವು ಮಾಡಿಕೊಡಲಿದೆ. ಇದು ಕಂಪನಿಯ ಬ್ಯಾಲೆನ್ಸ್ಶೀಟ್ನ್ನು ಆರ್ಥಿಕವಾಗಿ ಸದೃಢಗೊಳಿಸಲಿದೆ. ಫೋರ್ಬ್ಸ್ ಪ್ರಕಾರ, 79 ವರ್ಷದ ನುಸ್ಲಿ ವಾಡಿಯಾ ಅವರು ಪ್ರಸ್ತುತ 4.1 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications