ಪ್ರಸ್ತುತ ನಮಗೆ ಹೂಡಿಕೆ ಮಾಡಲು ಹಲವಾರು ಆಯ್ಕೆಗಳು ಇದೆ. ಆದರೆ ಹೂಡಿಕೆ ಯೋಜನೆಗಳಲ್ಲಿ ಅಪಾಯ ತಪ್ಪಿದಲ್ಲ. ನಮಗೆ ಯಾವುದೇ ಅಪಾಯವಿಲ್ಲದೆ ಉತ್ತಮ ರಿಟರ್ನ್ ಪಡೆಯಬೇಕು ಎಂದಾದರೆ ಅಂತಹ ಹೂಡಿಕೆ ಆಯ್ಕೆಗಳು ಕೂಡಾ ಇದೆ. ಅದರಲ್ಲಿ ಅಂಚೆ ಕಚೇರಿ ಯೋಜನೆಗಳು ಕೂಡಾ ಒಂದಾಗಿದೆ.
ಭಾರತದಲ್ಲಿ ಹೂಡಿಕೆ ಯೋಜನೆಗಳು ಬೇರೆ ಬೇರೆ ರೀತಿಯಲ್ಲಿದೆ. ಎಫ್ಡಿ, ಆರ್ಡಿ, ಉಳಿತಾಯ ಯೋಜನೆ ಹೀಗೆ ಹಲವಾರು ವಿಧಾನಗಳಲ್ಲಿ ಹೂಡಿಕೆ ಯೋಜನೆಗಳು ಇದೆ. ಆದರೆ ನಾವು ಮಾಸಿಕವಾಗಿ ಹೂಡಿಕೆ ಮಾಡಲು ಬಯಸಿದರೆ ಅದಕ್ಕೆ ಉತ್ತಮ ಆಯ್ಕೆ ಆರ್ಡಿಯಾಗಿದೆ. ನಾವು ಮಾಸಿಕವಾಗಿ ಹೂಡಿಕೆ ಮಾಡಿ, ಕೊನೆಯಲ್ಲಿ ಬಡ್ಡಿದರದ ಜೊತೆಗೆ ಅಧಿಕ ಮೊತ್ತವನ್ನು ಪಡೆಯಲು ಸಾಧ್ಯವಾಗಲಿದೆ.
ಮಾಸಿಕವಾಗಿ ಕೊಂಚ ಹಣವನ್ನು ಹೂಡಿಕೆ ಮಾಡಿ ಕೊನೆಯದಾಗಿ ಅಧಿಕ ಮೊತ್ತವನ್ನು ಪಡೆಯಲು ಬಯಸುವವರಿಗೆ ಈ ರಿಕ್ಯೂರಿಂಗ್ ಡೆಪಾಸಿಟ್ (ಆರ್ಡಿ) ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ಉತ್ತಮ ಆಯ್ಕೆಯಾಗಿದೆ. ಇನ್ನು ನೀವು ಅಂಚೆ ಕಚೇರಿಯಲ್ಲಿ ಮಾಸಿಕವಾಗಿ 5 ಸಾವಿರ ರೂಪಾಯಿ ಆರ್ಡಿ ಹೂಡಿಕೆ ಮಾಡಿದರೆ ಎಷ್ಟು ಮೊತ್ತ ಪಡೆಯಲು ಸಾಧ್ಯ ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.

ಮ್ಯೂಚುವಲ್ ಫಂಡ್/ ಆರ್ಡಿ
ಮ್ಯೂಚುವಲ್ ಫಂಡ್ ಹಾಗೂ ಆರ್ಡಿಯನ್ನು ನೋಡಿದಾಗ ನಮಗೆ ಮ್ಯೂಚುವಲ್ ಫಂಡ್ನಲ್ಲಿ ಅಧಿಕ ರಿಸ್ಕ್ ಇದೆ. ಆದರೆ ನಾವು ದೀರ್ಘಾವಧಿ ಹೂಡಿಕೆ ಮಾಡುವುದಾದರೆ ಆರ್ಡಿಯೇ ಉತ್ತಮವಾಗಿದೆ. ಹಾಗೆಯೇ ಸುರಕ್ಷಿತವಾಗಿದೆ. ಯಾವುದೇ ಅಪಾಯವೂ ಕೂಡಾ ಇಲ್ಲ. ಆರ್ಡಿಯನ್ನು ನಾವು 500 ರೂಪಾಯಿ ಹೂಡಿಕೆ ಮಾಡುವ ಮೂಲಕವೂ ಆರಂಭ ಮಾಡಬಹುದು. ಆದರೆ ಅಧಿಕ ರಿಟರ್ನ್ ನಮಗೆ ಲಭ್ಯವಾಗಲಿದೆ.
ನಾವು ಐದು ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದರೆ ಸುಮಾರು ಶೇಕಡ 5.8ರಷ್ಟು ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಎಸ್ಐಪಿಗಳಲ್ಲಿ ಶೇಕಡ 12ರಷ್ಟು ರಿಟರ್ನ್ ಪಡೆಯಬಹುದು. ಹಾಗೆಯೇ ಶೇಕಡ 15, 18 ಅದಕ್ಕಿಂತಲೂ ಅಧಿಮ ರಿಟರ್ನ್ ಅನ್ನು ಪಡೆಯಬಹುದು. ಆದರೆ ಎಲ್ಲವೂ ನಮ್ಮ ಅದೃಷ್ಟದ ಮೇಲೆ ನಿಂತಿದೆ. ಅದೃಷ್ಟಕ್ಕೆ ಬಲೆ ಹಾಕಿ ನಷ್ಟ ಹೊಂದುವ ಬದಲು ಆರ್ಡಿಯಲ್ಲೇ ಹೂಡಿಕೆ ಮಾಡುವುದು ಉತ್ತಮವಲ್ಲವೇ?
ಪೋಸ್ಟ್ ಆಫೀಸ್ ಆರ್ಡಿ
ನೀವು ಅಂಚೆ ಕಚೇರಿ ಆರ್ಡಿಯಲ್ಲಿ ಪ್ರತಿ ತಿಂಗಳು 5 ಸಾವಿರ ರೂಪಾಯಿಯಂತೆ 5 ವರ್ಷಗಳ ಕಾಲ ಹೂಡಿಕೆಯನ್ನು ಮಾಡಿದರೆ. ನೀವು ಅಧಿಕ ರಿಟರ್ನ್ 48,740 ರೂಪಾಯಿ ಆಗಲಿದೆ. ಆದ್ದರಿಂದಾಗಿ ನೀವು 3,48,740 ಅನ್ನು ಪಡೆಯಲು ಸಾಧ್ಯವಾಗಲಿದೆ. ಅಂದರೆ ನೀವು 3,00,000 ರೂಪಾಯಿ ಹೂಡಿಕೆ ಮಾಡಿದರೆ, 48,740 ರೂಪಾಯಿ ಅಧಿಕ ಲಭ್ಯವಾಗಲಿದೆ.
ಎಸ್ಐಪಿಯಲ್ಲಿಯಾದರೆ ನೀವು ಶೇಕಡ 12ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಹೂಡಿಕೆ ಮೇಲೆ ಒಟ್ಟಾಗಿ 1,12,432 ರೂಪಾಯಿ ರಿಟರ್ನ್ ಲಭ್ಯವಾಗಲಿದೆ. ಅಂದರೆ ನೀವು ಐದು ವರ್ಷದ ಬಳಿಕ 4,12,432 ರೂಪಾಯಿ ಪಡೆಯಲಿದ್ದೀರಿ. ಹಾಗೆಯೇ ಅದಕ್ಕೂ ಅಧಿಕ ರಿಟರ್ನ್ ಲಭ್ಯವಾಗುವ ಎಸ್ಐಪಿಗಳು ಕೂಡಾ ಇದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications