ಭಾರತವು ವೈವಿಧ್ಯಮಯ ಸಂಸ್ಕೃತಿಗಳನ್ನು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಭೂಮಿಯಾಗಿದೆ. ಹಾಗೆಯೇ ಅಪಾರ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ದೇಶದಲ್ಲಿ ಸಾವಿರಾರು ದೇವಾಲಯಗಳಿವೆ, ಮಸೀದಿ, ಚರ್ಚ್ಗಳಿದೆ. ದೇವಾಲಯಗಳು ಸಂಪತ್ತಿನ ವಿಚಾರದಲ್ಲಿಯೂ ನಾವು ಆಶ್ಚರ್ಯಪಡುವಂತಿದೆ.
ಈ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗಿದ್ದರೂ ಕೂಡಾ ಆರ್ಥಿಕ ಶಕ್ತಿ ಕೇಂದ್ರಗಳಾಗಿವೆ. ಈ ಲೇಖನದಲ್ಲಿ ನಾವು ಭಾರತದಲ್ಲಿನ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ನೀಡಿದ್ದೇವೆ. ಹಾಗೆಯೇ ಆದಾಯವನ್ನು ಕೂಡಾ ವಿವರಿಸಿದ್ದೇವೆ, ಇಲ್ಲಿದೆ ವಿವರ ಮುಂದೆ ಓದಿ....

ಟಾಪ್ 10 ಶ್ರೀಮಂತ ದೇವಾಲಯಗಳಿವು
1. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶದ ತಿರುಪತಿ
2. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳದ ತಿರುವನಂತಪುರಂ
3. ಸಿದ್ಧಿವಿನಾಯಕ ದೇವಸ್ಥಾನ, ಮಹಾರಾಷ್ಟ್ರದ ಮುಂಬೈ
4. ಶಿರಡಿ ಸಾಯಿಬಾಬಾ ದೇವಸ್ಥಾನ, ಮಹಾರಾಷ್ಟ್ರದ ಶಿರಡಿ
5. ಗೋಲ್ಡನ್ ಟೆಂಪಲ್, ಪಂಜಾಬ್ನ ಅಮೃತಸರ
6. ಮೀನಾಕ್ಷಿ ದೇವಸ್ಥಾನ, ತಮಿಳುನಾಡಿನ ಮಧುರೈ
7. ಗುರುವಾಯೂರ್ ದೇವಸ್ಥಾನ, ಕೇರಳದ ಗುರುವಾಯೂರ್
8. ಸೋಮನಾಥ ದೇವಸ್ಥಾನ, ಗುಜರಾತ್ನ ವೆರಾವಲ್ (ಸೋಮನಾಥ)
9. ವೈಷ್ಣೋ ದೇವಿ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರದ ಕತ್ರಾ
10. ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯ, ನವದೆಹಲಿದ ನೋಯ್ಡಾ ಮೋರ್
ದೇಶದ ಅತೀ ಶ್ರೀಮಂತ ದೇವಾಲಯ
ಸ್ಥಳ: ತಿರುಪತಿ, ಆಂಧ್ರಪ್ರದೇಶ (ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ)
ವಾಸ್ತುಶಿಲ್ಪದ ಶೈಲಿ: ದ್ರಾವಿಡ
ದೇವಾಲಯದ ಸಮಯ: ಬೆಳಿಗ್ಗೆ 05:30 ರಿಂದ ಮಧ್ಯಾಹ್ನ 12:00, ಸಂಜೆ 05:00 ರಿಂದ ರಾತ್ರಿ 08:00
ದೇವರು: ವೆಂಕಟೇಶ್ವರ (ವಿಷ್ಣು)
ಹಬ್ಬಗಳು: ಬ್ರಹ್ಮೋತ್ಸವ, ರಥ ಸಪ್ತಮಿ, ವೈಕುಂಠ ಏಕಾದಶಿ
ಆಂಧ್ರಪ್ರದೇಶದಲ್ಲಿರುವ 8ನೇ ಶತಮಾನದ ಅದ್ಭುತವಾದ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನವು ವೆಂಕಟೇಶ್ವರನನ್ನು ಪೂಜಿಸುವ ಪವಿತ್ರ ದೇವಾಲಯವಾಗಿದೆ. ಈ ದೇವಾಲಯಕ್ಕೆ ವಾರ್ಷಿಕವಾಗಿ ಲಕ್ಷಾಂತರ ಯಾತ್ರಿಕರು ಆಗಮಿಸುತ್ತಾರೆ.
ದೇವಾಲಯದ ವೆಂಕಟೇಶ್ವರನ 8-ಅಡಿ ಎತ್ತರದ ಮೂರ್ತಿಯಿದೆ. ಅಮೂಲ್ಯವಾದ ರತ್ನದ ಕಲ್ಲುಗಳಿಂದ ಅಲಂಕರಿಸಲ್ಪಟ್ಟ ಈ ಮೂರ್ತಿ ಚಿನ್ನದಿಂದ ಲೇಪಿತವಾಗಿದೆ. ಇದರ ವಾರ್ಷಿಕ ನಿವ್ವಳ ಆದಾಯ 13.6 ಬಿಲಿಯನ್ ಡಾಲರ್ ಆಗಿದ್ದು, ದಿನದ ಆದಾಯ 0.75 ಮಿಲಿಯನ್ ಡಾಲರ್ ಆಗಿದೆ.
ಭಾರತದ ಎರಡನೇ ಶ್ರೀಮಂತ ದೇವಾಲಯ
ಸ್ಥಳ: ತಿರುವನಂತಪುರಂ, ಕೇರಳ (ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ)
ದೇವತೆ: ಮಹಾ ವಿಷ್ಣು
ವಾಸ್ತುಶಿಲ್ಪದ ಶೈಲಿ: ಕೇರಳದ ವಾಸ್ತುಶಿಲ್ಪ, ದ್ರಾವಿಡ ವಾಸ್ತುಶಿಲ್ಪ
ದೇವಾಲಯದ ಸಮಯ: ಬೆಳಿಗ್ಗೆ 03:30 ರಿಂದ ಮಧ್ಯಾಹ್ನ 12:00, ಸಂಜೆ 05:00ರಿಂದ ರಾತ್ರಿ 08:30
ಕೇರಳದ ತಿರುವನಂತಪುರದಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯವು ಭಗವಾನ್ ವಿಷ್ಣುವಿನ ದೇವಾಲಯವಾಗಿದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯದ ವಾಸ್ತುಶಿಲ್ಪವು ಮಲಯಾಳಂ, ತಮಿಳು ಮತ್ತು ಚೇರ ಶೈಲಿಗಳ ಸಂಯೋಜನೆಯಾಗಿದೆ. ಅಂದವಾದ ಕಲ್ಲಿನ ಕೆತ್ತನೆಗಳು ಮತ್ತು ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. 20 ಬಿಲಿಯನ್ ಡಾಲರ್ ಅಂದಾಜು ಮೌಲ್ಯದೊಂದಿಗೆ ಭಾರತದ ಎರಡನೇ ಶ್ರೀಮಂತ ದೇವಾಲಯವಾಗಿದೆ.
ಮೂರನೇ ಶ್ರೀಮಂತ ದೇವಾಲಯ
ಸ್ಥಳ: ಮುಂಬೈ, ಮಹಾರಾಷ್ಟ್ರ (ಸಿದ್ಧಿವಿನಾಯಕ ದೇವಸ್ಥಾನ)
ವಾಸ್ತುಶಿಲ್ಪ ಶೈಲಿ: ದ್ರಾವಿಡ
ದೇವತೆ: ಗಣೇಶ
ದೇವಾಲಯದ ಸಮಯ: ಬುಧವಾರದಿಂದ ಸೋಮವಾರ: 05:30 AM ರಿಂದ 10:00 PM
ಗಣೇಶನಿಗೆ ಸಮರ್ಪಿತವಾದ ಮತ್ತು ಬಾಳಾಸಾಹೇಬ್ ಸಾವಂತ್ ನಿರ್ಮಿಸಿದ ಸಿದ್ಧಿವಿನಾಯಕ ದೇವಾಲಯವು ಗೋಪುರಗಳು, ಅಮೃತಶಿಲೆ ಮತ್ತು ಚಿನ್ನದ ಬಣ್ಣದ ಗುಮ್ಮಟಗಳೊಂದಿಗೆ ಅದ್ಭುತ ವಾಸ್ತುಶಿಲ್ಪ ಹೊಂದಿದೆ. ಇದು ಭಾರತದಲ್ಲಿ ಮೂರನೇ ಅತ್ಯಂತ ಶ್ರೀಮಂತ ದೇವಾಲಯ ಎಂದು ಶ್ರೇಯಾಂಕ ಪಡೆದಿದೆ. ಇದು ಭಕ್ತರಿಂದ ಗಣನೀಯ ದೇಣಿಗೆಯನ್ನು ಪಡೆಯುತ್ತದೆ. 4 ಕೆಜಿಯ ಶುದ್ಧ ಚಿನ್ನದ ವಿಗ್ರಹವನ್ನು ಹೊಂದಿದೆ. ಸುಮಾರು 125 ಕೋಟಿ ರೂಪಾಯಿಗಳ ಅಂದಾಜು ಮೌಲ್ಯವನ್ನು ಹೊಂದಿದೆ.


Click it and Unblock the Notifications