Vande Bharat Express: ಐಟಿ ಸಿಟಿ ಬೆಂಗಳೂರು- ಹೈದಾರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್, ಸಮಯ, ದರ ವಿವರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್‌ 24 ರಂದು ಭಾರತದಲ್ಲಿ ಒಂಬತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಉದ್ಘಾಟಿಸಿದರು. ಈ ಒಂಬತ್ತು ರೈಲುಗಳಲ್ಲಿ ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡಾ ಒಂದಾಗಿದೆ. ಈ ರೈಲು ಭಾರತದ ಎರಡು ಐಟಿ ಹಬ್‌ಗಳನ್ನು ಹತ್ತಿರ ತಂದಿದೆ.

ಇದು ಮಾತ್ರವಲ್ಲದೆ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಆರಂಭವಾಗಿದೆ. ಹೈದರಾಬಾದ್-ಬೆಂಗಳೂರು ಮತ್ತು ವಿಜಯವಾಡ-ಚೆನ್ನೈ ರೈಲುಗಳು ಸೆಪ್ಟೆಂಬರ್‌ 24 ಭಾನುವಾರವೇ ಆರಂಭಿಸಲಾಗಿದೆ. ಸಿಕಂದರಾಬಾದ್- ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್-ತಿರುಪತಿ ರೈಲುಗಳ ನಂತರ ತೆಲಂಗಾಣಕ್ಕೆ ಇದು ಮೂರನೇ ಅರೆ-ಹೈ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ.

 ಬೆಂಗಳೂರು- ಹೈದಾರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ವಿವರ

ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌

ಬೆಂಗಳೂರು ದೇಶದ ಪ್ರಮುಖ ನಗರವಾಗಿದೆ. ಕರ್ನಾಟಕದ ಈ ರಾಜಧಾನಿಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಜನರು ಉದ್ಯೋಗಕ್ಕಾಗಿ ಬಂದು ನೆಲೆಸುತ್ತಾರೆ. ಹೀಗಿರುವಾಗ ಬೇರೆ ರಾಜ್ಯಗಳಿಗೆ ರೈಲುಗಳ ಸಂಖ್ಯೆ ಹೆಚ್ಚಾದಷ್ಟು ಪ್ರಯಾಣಿಕರಿಗೆ ಪ್ರಯೋಜನ ಹೆಚ್ಚಾಗಲಿದೆ. ಈಗಾಗಲೇ ಕೊಯಮತ್ತೂರು ಬೆಂಗಳೂರು ವಂದೇ ಭಾರತ್ ರೈಲು ಆರಂಭವಾಗಿದೆ. ಈ ಲೇಖನಲ್ಲಿ ನಾವು ಬೆಂಗಳೂರು- ಹೈದಾರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ವಿವರ ತಿಳಿಯೋಣ.

ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಮಾರ್ಗ

ಹೈದರಾಬಾದ್-ಬೆಂಗಳೂರು ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳನ್ನು ಕರ್ನಾಟಕದೊಂದಿಗೆ ಸಂಪರ್ಕಿಸುವ ಮೊದಲ ವಂದೇ ಭಾರತ್ ರೈಲು. ಇದು 12 ಜಿಲ್ಲೆಗಳು ಮತ್ತು ನಾಲ್ಕು ಪ್ರಮುಖ ನಗರಗಳಲ್ಲಿ ಸಂಚರಿಸಲಿದೆ. ಹೈದರಾಬಾದ್‌ನ ಕಾಚೇಗೌಡ ನಿಲ್ದಾಣದಿಂದ ಹೊರಡುವ ರೈಲು ಬೆಂಗಳೂರಿನ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.

ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಸಮಯ

ಎರಡು ಟೆಕ್ ಹಬ್‌ಗಳ ನಡುವಿನ 610 ಕಿಮೀ ದೂರವನ್ನು ಎಂಟು ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಈ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ವೇಗದ ರೈಲಿಗಿಂತ ಸುಮಾರು ಮೂರು ಗಂಟೆ ಕಡಿಮೆ ಸಮಯ ಇದಾಗಿದೆ. ರೈಲು ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಸೆಪ್ಟೆಂಬರ್ 25 ರಿಂದ ಯಶವಂತಪುರದಿಂದ ಮತ್ತು ಸೆಪ್ಟೆಂಬರ್ 26 ರಿಂದ ಕಾಚೇಗೌಡದಿಂದ ನಿಯಮಿತ ಸೇವೆ ಪ್ರಾರಂಭವಾಗಿದೆ. ರೈಲು ಎಂಟು ಕೋಚ್‌ಗಳನ್ನು (7 ಎಸಿ ಚೇರ್ ಕಾರ್ ಕೋಚ್‌ಗಳು ಮತ್ತು ಒಂದು ಎಕ್ಸಿಕ್ಯೂಟಿವ್ ಚೇರ್ ಕಾರ್ ಕೋಚ್) 530 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಎಂಟು ಕಾರ್ ರೇಕ್ ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ

ರೈಲು ಸಂಖ್ಯೆ 20703 ಕಾಚೇಗೌಡ - ಯಶವಂತಪುರ ಕಾಚೇಗೌಡದಿಂದ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ. ಮಹಬೂಬ್‌ನಗರ, ಕರ್ನೂಲ್, ಅನಂತಪುರ ಮತ್ತು ಧರ್ಮಾವರಂನಲ್ಲಿ ನಿಲುಗಡೆ ಇರುತ್ತದೆ. ಹಿಂದಿರುಗುವಾಗ ರೈಲು ಸಂಖ್ಯೆ 20704 ಯಶವಂತಪುರ - ಕಾಚೇಗೌಡ, ಯಶವಂತಪುರದಿಂದ ಮಧ್ಯಾಹ್ನ 2:45 ಕ್ಕೆ ಹೊರಡಲಿದೆ ಮತ್ತು 11:15 ಕ್ಕೆ ಕಾಚೇಗೌಡ ತಲುಪುತ್ತದೆ.

ವಿಜಯವಾಡದಿಂದ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಚೆನ್ನೈ ತಲುಪಲಿದೆ. ತೆನಾಲಿ, ಒಂಗೋಲ್, ನೆಲ್ಲೂರು ಮತ್ತು ರೇಣಿಗುಂಟಾದಲ್ಲಿ ನಿಲುಗಡೆ ಇರುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ, ರೈಲು ಚೆನ್ನೈನಿಂದ ಮಧ್ಯಾಹ್ನ 3.20 ಕ್ಕೆ ಹೊರಡಲಿದೆ. ಮತ್ತು 10 ಗಂಟೆಗೆ ವಿಜಯವಾಡ ತಲುಪುತ್ತದೆ.

ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಯಶವಂತಪುರ ಮತ್ತು ಕಾಚೇಗೌಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ 1,540 ರೂಪಾಯಿ ಆಗಿದೆ. ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 2,865 ರೂಪಾಯಿ ಆಗಿದೆ. ಆದರೆ ಕಾಚೇಗೌಡ ಮತ್ತು ಯಶವಂತಪುರ ನಡುವಿನ ಪ್ರಯಾಣದ ದರಗಳು ಸ್ವಲ್ಪ ಹೆಚ್ಚಾಗಿದೆ. ಸಾಮಾನ್ಯ ದರ 1600 ರೂಪಾಯಿ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್‍ಗಳಿಗೆ 2915 ರೂಪಾಯಿ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+