ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (Fugitive Economic Offenders Act) ಆರೋಪಿಗಳಾಗಿರುವವರಿಂದ 15,113 ಕೋಟಿ ರೂಪಾಯಿಗಳನ್ನು ಸರ್ಕಾರ ವಸೂಲಿ ಮಾಡಲಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರವು ತಿಳಿಸಿದೆ. ಈ ಪಟ್ಟಿಯಲ್ಲಿ ಸುಮಾರು 10 ಮಂದಿ ಪ್ರಮುಖ ಆರೋಪಿಗಳನ್ನು ಸರ್ಕಾರ ಗುರುತಿಸಿದೆ.
ವಿಜಯ್ ಮಲ್ಯ, ನೀರವ್ ಮೋದಿ, ನಿತಿನ್ ಜಯಂತಿಲಾಲ್ ಸಂದೇಸರ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಜಯಂತಿಲಾಲ್ ಸಂದೇಸರ, ಹಿತೇಶ್ ಕುಮಾರ್ ನರೇಂದ್ರಭಾಯಿ ಪಟೇಲ್, ಜುನೈದ್ ಇಕ್ಬಾಲ್ ಮೆಮನ್, ಹಜ್ರಾ ಇಕ್ಬಾಲ್ ಮೆಮನ್, ಆಸಿಫ್ ಇಕ್ಬಾಲ್ ಮೆಮನ್ ಮತ್ತು ರಾಮಚಂದ್ರನ್ ವಿಶ್ವನಾಥನ್ ಎಂಬ ಹತ್ತು ಮಂದಿಯನ್ನು ಎಫ್ಇಒಗಳು ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ ಹಜ್ರಾ ಇಕ್ಬಾಲ್ ಮೆಮನ್ ಯಾರು, ಏನು ಆರೋಪ ಎಂಬ ಬಗ್ಗೆ ತಿಳಿಯೋಣ

ಹಜ್ರಾ ಇಕ್ಬಾಲ್ ಮೆಮನ್ ಭಾರತದಲ್ಲಿ ಅತೀ ಹೆಚ್ಚು ವಾಂಟೆಂಡ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಹಜ್ರಾ ಇಕ್ಬಾಲ್ ಭಾರತದಲ್ಲಿ ವಂಚನೆಯನ್ನು ಮಾಡಿ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳಾಗಿದ್ದಾರೆ. ಹಾಗೆಯೇ ಕೋರ್ಟ್ ಕೂಡಾ ಇವರನ್ನು ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಗುರುತಿಸಿದೆ.
ಹಜ್ರಾ ಇಕ್ಬಾಲ್ ಮೆಮನ್ ಯಾರು ತಿಳಿಯಿರಿ
ಗ್ಯಾಂಗ್ ಸ್ಟಾರ್ ಇಕ್ಬಾಲ್ ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ ಮೆಮನ್. ಇನ್ನು ಇಕ್ಬಾಲ್ ಮಿರ್ಚಿ 2013ರ ಆಗಸ್ಟ್ 14ರಂದು ಸಾವನ್ನಪ್ಪಿದ್ದಾರೆ. ಇಕ್ಬಾಲ್ ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ ಮೆಮನ್, ಪುತ್ರರಾದ ಆಸಿಫ್ ಮೆಮನ್ ಹಾಗೂ ಜುನೈದ್ ಮೆಮನ್ರನ್ನು ಕೂಡಾ 2021ರಲ್ಲಿ ಭಾರತದಿಂದ ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಣೆ ಮಾಡಲಾಗಿದೆ.
ಈ ಮೂವರ ಮೇಲೆಯೂ ಮನಿಲಾಂಡರಿಂಗ್ ಆರೋಪವಿದೆ. ಮುಂಬೈನಲ್ಲಿ ಹಲವಾರು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ಗಳನ್ನು ಖರೀದಿ ಮಾಡಲು ಅಕ್ರಮವಾಗಿ ಪಡೆದ ಹಣವನ್ನು ಬಳಕೆ ಮಾಡಲಾಗಿರುವ ಆರೋಪವನ್ನು ತಾಯಿ ಹಾಗೂ ಇಬ್ಬರು ಪುತ್ರರು ಹೊಂದಿದ್ದಾರೆ. 2021ರಲ್ಲಿ ಜಾರಿ ನಿರ್ದೇಶನಾಲಯ (ಇಡಿ) 800 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.
ನೀರವ್ ಮೋದಿ, ವಿಜಯ್ ಮಲ್ಯ ಸೇರಿದಂತೆ ಹಲವಾರು ಆರ್ಥಿಕ ಅಪರಾಧಿಗಳು ನಿರ್ದಿಷ್ಟವಾಗಿ ಒಂದು ದೇಶದಲ್ಲಿ ಇದ್ದಾರೆ ಎಂಬ ಮಾಹಿತಿಯಾದರೂ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಈ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಆದರೆ ಹಜ್ರಾ ಇಕ್ಬಾಲ್ ಮೆಮನ್ ಮತ್ತು ಕುಟುಂಬ ವಿದೇಶದಲ್ಲಿದೆ ಎಂಬ ಮಾಹಿತಿಯಿದ್ದರೂ ಯಾವ ದೇಶದಲ್ಲಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ.
ಹಜ್ರಾ ಪತಿ ಇಕ್ಬಾಲ್ ಮಿರ್ಚಿ ಯಾರು?
ಸಾಮಾನ್ಯವಾಗಿ ಇಕ್ಬಾಲ್ ಮಿರ್ಚಿ ಎಂದೇ ಕರೆಯಲಾಗುವ ಹಜ್ರಾ ಇಕ್ಬಾಲ್ ಮೆಮನ್ ಪತಿ ಮೊಹಮ್ಮದ್ ಇಕ್ಬಾಲ್ ಮೆಮನ್ ಭಾರತದ ಗ್ಯಾಂಗ್ ಸ್ಟಾರ್ ಆಗಿದ್ದು 2013ರಲ್ಲೇ ನಿಧನ ಹೊಂದಿದ್ದಾರೆ. ಇಕ್ಬಾಲ್ ಮಿರ್ಚಿ ಭಾರತದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ದಾವುದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ. ಹಾಗೆಯೇ ಡ್ರಗ್ಸ್ ದಂದೆಯನ್ನು ನಡೆಸುತ್ತಿದ್ದ.
1990ರಲ್ಲಿ ಭಾರತದಲ್ಲಿ ಡ್ರಗ್ಸ್ ಸರಬರಾಜಿನಲ್ಲಿ ದೊಡ್ಡ ಕೈ ಎನಿಸಿಕೊಂಡಿದ್ದ ಇಕ್ಬಾಲ್ ಮಿರ್ಚಿ 1993ರ ಬಾಂಬೆ ಬಾಂಬ್ ದಾಳಿ ಪ್ರಕರಣದಲ್ಲಿಯೂ ಆರೋಪಿ. ಮೆಮನ್ಸ್ ಕುಟುಂಬವು ಮಿರ್ಚಿ ಎಂಬ ಬ್ರ್ಯಾಂಡ್ ಹೆಸರಿನ ಮೂಲಕ ಕೆಂಪು ಮೆಣಸಿನ ಪುಡಿ ಮಾರಾಟ ಮಾಡುತ್ತಿದ್ದ ಸಂಸ್ಥೆ. ಆದರೆ ಈ ಮೂಲಕವೇ ಭಾರತದಲ್ಲಿ ಡ್ರಗ್ಸ್ ದಂಧೆ ನಡೆಸಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications