ಈಗ ತಾನೆ ಷೇರು ಮಾರುಕಟ್ಟೆಗೆ ಕಾಲಿಡಬೇಕು, ಅಥವಾ ಹೊಸದಾಗಿ ಹೂಡಕೆ ಮಾಡಬೇಕು ಎಂದು ಅಂದುಕೊಂಡು ಆಗಮಿಸುವವರು ಸಾಮಾನ್ಯವಾಗಿ ಒಂದೇ ಕಡೆ ಎಡವುತ್ತಾರೆ. ನಂತರ ನಷ್ಟ ಮಾಡಿಕೊಂಡು ಮಾರುಕಟ್ಟೆ ಸಹವಾಸವೇ ಸಾಕಪ್ಪಾ ಎಂದು ಹಿಂದಕ್ಕೆ ತೆರಳುತ್ತಾರೆ.
ಹಾಗಾದರೆ ತಪ್ಪು ಹೆಜ್ಜೆ ಇಡುವುದು ಎಲ್ಲಿ? ಅಥವಾ ನಮ್ಮನ್ನು ದಿಕ್ಕು ತಪ್ಪಿಸುವವರು ಯಾರು? ಸಲಹೆ ಸೂಚನೆಗಳನ್ನು ಪಡೆಯದೇ ಮುಂದುವರಿಯುವುದು ಅಪಾಯಕಾರಿಯೇ? ಈ ಎಲ್ಲ ಅಂಶಗಳ ಮೇಲೆ ಗಮನ ಹರಿಸಬೇಕಾಗುತ್ತದೆ.[ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ]

ಹೊಸ ಹೂಡಿಕೆದಾರ ಸಾಮಾನ್ಯವಾಗಿ ಮಾಡುವ ತಪ್ಪುಗಳಿವು
* ಹಣದ ಹೂಡಿಕೆ ಬಗ್ಗೆ ಸದಾ ಯೋಚಿಸುತ್ತಿರುವುದು
ಒಮ್ಮೆ ಹೂಡಿಕೆ ಮಾಡಿ ಬಿಟ್ಟರೆ ಒತ್ತಮ. ಅದನ್ನು ಬಿಟ್ಟು ಹೂಡಿಕೆ ಮಾಡಿದ ನಂತರ, ಇಲ್ಲಿ ಮಾಡಬಾರದಿತ್ತು, ಬೇರೆಡೆ ಮಾಡಿದ್ದರೆ ಹೆಚ್ಚಿನ ಲಾಭ ಸಿಗುತ್ತಿತ್ತು ಎಂದು ಕೊರಗುತ್ತ ಕುಳಿತುಕೊಂಡರೆ ಮಾನಸಿಕ ನೆಮ್ಮದಿಯೂ ಹಾಳಾಗಿ ಹೋಗುತ್ತದೆ. ನೀವು ಯಾವ ಪ್ರಮಾಣದ ಹೂಡಿಕೆ ಮಾಡಿದ್ದೀರಿ ಎಂಬ ಸಂಗತಿಯೂ ಪ್ರಮುಖವಾಗುತ್ತದೆ.
* ಚಿಂತನೆ ಮತ್ತು ಯೋಜನೆ ಕೊರತೆ
ದಿಢೀರ್ ಎಂದು ಏಕಾಏಕಿ ಹೂಡಿಕೆ ಮಾಡುವುದು ಯಾವ ಕಾರಣಕ್ಕೂ ಸಲ್ಲ. ನಿಮ್ಮ ಹಣಕಾಸು ಸ್ಥಿತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಣ ಹಾಕಬೇಕಾಗುತ್ತದೆ. ಆದರೆ ಅರ್ಧ ಜನ ಇದನ್ನು ಮಾಡದೇ ದಿಢೀರ್ ಎಂದು ಹೂಡಿಕೆ ಮಾಡಿ ನಂತರ ಪರಿತಪಿಸುತ್ತಾರೆ.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]
* ಜನರ ಹಿಂಬಾಲಿಸುವಿಕೆ
ಜನರು ಯಾವ ರೀತಿ ಹೂಡಿಕೆ ಮಾಡುತ್ತಿದ್ದಾರೆ, ಮಾರುಕಟ್ಟೆಯ ಇವತ್ತಿನ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಆದರೆ ಇದೇ ಅಂತಿಮವಲ್ಲ. ಜನರ ಹಿಂಬಾಲಿಕೆ ಕಡಿಮೆ ಮಾಡುವುದು ಒಳ್ಳೆಯದು.
* ಕಲಿಕೆ ಇಲ್ಲ, ಖಾಲಿ ತಲೆ
ಜಿಡಿಪಿ ದರ, ಹಣದುಬ್ಬರ, ಆರ್ಥಿಕ ಸ್ಥಿತಿ ದಿಕ್ಕು ಈ ಬಗ್ಗೆ ಅಲ್ಪವನ್ನಾದರೂ ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಅದನ್ನು ಬಿಟ್ಟು ಒಂದಿಷ್ಟು ಹಣ ಕೈ ಯಲ್ಲಿ ಇದ್ದರೆ ನೇರವಾಗಿ ಮಾರುಕಟ್ಟೆಗೆ ಹಾಕುವುದು ಸರಿಯಲ್ಲ.
* ಗೋಜಲು ಮಾಡಿಕೊಳ್ಳುವುದು
ವಿಮೆ, ಮ್ಯೂಚುವಲ್ ಫಂಡ್, ಹೂಡಿಕೆ, ಬಂಡವಾಳ ಎಲ್ಲವನ್ನು ಒಂದರ ಒಳಗೆ ಒಂದು ಸೇರಿಸಿ ಗೋಜಲುಮಯ ಮಾಡಿಕೊಂಡರೇ ನೀವು ಪರಿತಪಿಸುತ್ತೀರಿ. ಹಾಗಾಗಿ ಒಮ್ಮೆ ಸರಳವಾಗಿ ಯೋಚಿಸಿ ಹಣ ಹೊಂದಿಕೆ ಮಾಡಿಕೊಂಡು ಸರಿಯಾದ ಕಡೆ ಹೂಡಿಕೆ ಮಾಡಿ
ಕೊನೆ ಮಾತು
ಹೂಡಿಕೆ ಮಾಡಲು ಅನೇಕ ಜನರು ವಿವಿಧ ಸಲಹೆಗಳನ್ನು ನೀಡುತ್ತಾ ರೆ. ಎಲ್ಲವನ್ನು ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ಅಂತಮಿವಾಗಿ ಮಾರುಕಟ್ಟೆಯ ದಿಢೀರ್ ಬೆಳವಣಿಗೆಗಳು ನಿಮ್ಮ ಲಾಭ ನಷ್ಟವನ್ನು ನಿರ್ಧರಿಸುತ್ತದೆ.(ಗುಡ್ ರಿಟರ್ನ್ಸ್.ಇನ್)
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications