ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಬೇಕು: ಉರ್ಜಿತ್ ಪಟೇಲ್
ಸಾರ್ವಜನಿಕ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಮತ್ತು ಕೆಟ್ಟ ಸಾಲದ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಬಂಡವಾಳ ಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್ಬಿಐ) ಉರ್ಜಿತ್ ಪಟೇಲ್ ಹೇಳಿದ್ದಾರೆ.
ಸಾರ್ವಜನಿಕ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಮತ್ತು ಕೆಟ್ಟ ಸಾಲದ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಬಂಡವಾಳ ಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್ಬಿಐ) ಉರ್ಜಿತ್ ಪಟೇಲ್ ಹೇಳಿದ್ದಾರೆ.
150 ಬಿಲಿಯನ್ ಡಾಲರ್ ಸಾಲದಿಂದಾಗಿ ಏಷ್ಯಾದ ಮೂರನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿರುವ ಭಾರತದ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ ಸಾಲದಾತರ ಹೊರೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಅನುತ್ಪಾದಕ ಆಸ್ತಿ ಎಂಬುದು ಬ್ಯಾಂಕುಗಳ ದೊಡ್ಡ ಸಮಸ್ಯೆಯಾಗಿದ್ದು, ಇದು ಬ್ಯಾಂಕುಗಳು ನೀಡಿರುವ ಸಾಲ ಮತ್ತು ಬಡ್ಡಿ ಎರಡನ್ನು ಸಾಲಗಾರರು ಬಾಕಿ ಉಳಿಸಿಕೊಳ್ಳುವ ಪರಿಸ್ಥಿತಿ. ಬ್ಯಾಂಕುಗಳಿಗೆ ಪ್ರತಿವರ್ಷ ಆಡಿಟಿಂಗ್ ನಲ್ಲಿ ಈ ಅನುತ್ಪಾದಕ ಆಸ್ತಿ ದೊಡ್ಡ ಸವಾಲಾಗಿ ಎದುರಾಗುತ್ತದೆ. ಇದರಿಂದ ಬ್ಯಾಂಕುಗಳಿಗೆ ನಷ್ಟವಾಗುತ್ತದೆ. ಹೀಗಾಗಿ ಅನುತ್ಪಾದಕ ಆಸ್ತಿಯನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆಯುತ್ತದೆ. ಇದು ಸಾಲ ಮಾಫಿ ಅಥವಾ ಮನ್ನಾ ರೂಪ ಪಡೆದುಕೊಳ್ಳುತ್ತದೆ. ಉದ್ಯಮಪತಿಗಳ 81 ಸಾವಿರ ಕೋಟಿ ಸಾಲ ಮಾಫಿ ಮಾಡಿದ ಕೇಂದ್ರ!