ಈ ಹಿಂದೆ ನಗರದ ವಿ.ವಿ.ಪುರಂ ವೃತ್ತದ ಬಳಿ ನಡೆಯುತ್ತಿದ್ದ ಪ್ರಸಿದ್ದ ಅವರೆ ಕಾಳು ಮೇಳ ಅಥವಾ ಅವರೆಬೇಳೆ ಮೇಳ ಈಗ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಈಗಾಗಲೇ ಅಂದರೆ ಜನವರಿ ಐದರಿಂದ ಈ ಮೇಳ ಆರಂಭವಾಗಿದ್ದು, ಒಂಬತ್ತನೇ ತಾರೀಕಿನವರೆಗೆ ನಡೆಯುತ್ತದೆ.
ಇದೇ ರೀತಿ ಮೈಸೂರಿನಲ್ಲೂ ಈ ಮೇಳ ಈಗಾಗಲೇ ನಡೆದಿದೆ ಮತ್ತು ಭರ್ಜರಿ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಬೆಂಗಳೂರಿನ ಸಜ್ಜನರಾವ್ ಸರ್ಕಲ್ ಬಳಿಯ ವಾಸವಿ ಕಾಂಡಿಮೆಂಟ್ಸ್ ಭಾಗದಲ್ಲಿ ನಡೆಯುತ್ತಿದ್ದ ಮೇಳ, ಫುಡ್ ಸ್ಟ್ರೀಟ್ ಚಿತ್ರಣ ಬದಲಾಗುತ್ತಿರುವುದರಿಂದ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿದೆ.
ಕಡಲೇಕಾಯಿ ಪರಿಷೆಯಲ್ಲಿ ಮಿಂದೆದ್ದ ಬೆಂಗಳೂರಿನ ಜನತೆ ಈಗ ಅವರೆಕಾಳು ಮೇಳಕ್ಕೆ ದಾಂಗುಡಿ ಇಡುತ್ತಿದ್ದಾರೆ. ಈ ಬಾರಿಯ ಮೇಳದಲ್ಲಿ ಅಪ್ಪು ಸ್ಪೆಷಲ್ ಐಟಂಗಳು ಇರುವುದು ವಿಶೇಷ.

ಐದು ದಿನಗಳ ಈ ಮೇಳದಲ್ಲಿ ಕೋಟ್ಯಾಂತರ ರೂಪಾಯಿಯ ವಹಿವಾಟು ನಡೆಯುತ್ತದೆ. ಅಕ್ಕಪಕ್ಕದ ಹಲವು ರಾಜ್ಯಗಳ ಬೆಳೆಗಾರರು ಮೂಟೆಗಟ್ಟಲೆ ಅವರೆಕಾಯಿಯೊಂದಿಗೆ ನಗರಕ್ಕೆ ಆಗಮಿಸಿ ವ್ಯಾಪಾರ ನಡೆಸುತ್ತಾರೆ. ಚೌಕಾಸಿಯೇ ಇಲ್ಲಿ ವ್ಯಾಪಾರ ನಡೆಸುವ ಗ್ರಾಹಕರಿಗೆ ಮೂಲಮಂತ್ರ ಎನ್ನುವುದು ಗೊತ್ತಿರುವ ವಿಚಾರ.
ಮಧ್ಯವರ್ತಿಗಳ ನೆರವೆಲ್ಲದೆ ನಡೆಯುವ ವಹಿವಾಟಿದು!
ರಾಮನಗರ, ಹುಣಸೂರು, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಆನೇಕಲ್ ಮುಂತಾದ ಭಾಗದ ಜನರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೇ ವಹಿವಾಟು ನಡೆಸುತ್ತಾರೆ. ಇನ್ನುಳಿದ ಭಾಗದಿಂದ ಬರುವ ಬೆಳೆಗಾರರು ಮಿಡ್ಲ್ ಮ್ಯಾನ್ ಮೂಲಕ ವಹಿವಾಟು ನಡೆಸುತ್ತಾರೆ.
1995ರಲ್ಲಿ ವಾಸವಿ ಕಾಂಡಿಮೆಂಟ್ಸ್ ಅವರೆಬೇಳೆ ತಿನಿಸುಗಳನ್ನು ಮಾರಾಟ ಮಾಡಲು ಆರಂಭಿಸಿತ್ತು. ಫುಡ್ ಸ್ಟ್ರೀಟಿಗೆ ಬರುವ ರೈತರು ಮಾರಾಟವಾಗದೆ ಉಳಿದ ಅವರೆಬೇಳೆ ಅವರೆಕಾಯಿಗಳನ್ನು ಅಲ್ಲಿಯೇ ಚೆಲ್ಲಿ ಹೋಗುತ್ತಿದ್ದರು. ಈ ರೀತಿ ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಅವರೆಮೇಳ ಯೋಜಿಸಿಲು ಆರಂಭಿಸಿದ್ದು ಈ ಮೇಳದ ಇತಿಹಾಸ.
ಅವರೆಕಾಳು ಜಿಲೇಬಿ, ಜಾಮೂನು, ಸೋನಪಾಪಡಿ, ದೋಸೆ ಸೇರಿದಂತೆ ವಿವಿಧ ಖಾದ್ಯಗಳು ಇಪ್ಪತ್ತು ರೂಪಾಯಿಯಿಂದ ಅರವತ್ತು ರೂಪಾಯಿಯವರೆಗೆ ದೊರಕಲಿದೆ. ಕೊರೊನಾ ಕಾರಣದಿಂದಾಗಿ ಫುಲ್ ಸ್ವಿಂಗ್ ನಲ್ಲಿ ಈ ಮೇಳ ಕಳೆದ ಎರಡು ವರ್ಷದಲ್ಲಿ ನಡೆಯಲಿಲ್ಲ. ಆದರೆ, ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೇಳ ನಡೆಯುತ್ತಿದೆ, ಜೊತೆಗೆ, ಜನರ ಸ್ಪಂದನೆ ಕೂಡಾ ಉತ್ತಮವಾಗಿದೆ. ನಿರ್ದಿಷ್ಟ ಪ್ರಮಾಣದಲ್ಲಿ ಈ ಮೇಳದಲ್ಲಿ ನಡೆಯುವ ವಹಿವಾಟಿನ ಅಂದಾಜು ಇಲ್ಲದಿದ್ದರೂ, ಕೋಟ್ಯಾಂತರ ರೂಪಾಯಿ ಟರ್ನೌರ್ ನಡೆಯುತ್ತದೆ.
More From GoodReturns

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Bidadi Township: ಬಿಡದಿ ಟೌನ್ಶಿಪ್ ಯೋಜನೆ; 7,000 ಎಕರೆಗೂ ಅಧಿಕ ಭೂಸ್ವಾಧೀನಕ್ಕೆ ಸರ್ಕಾರ ಸಿದ್ಧ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Mysore Road: ಮೈಸೂರು ರೋಡ್ ಟ್ರಾಫಿಕ್ಗೆ ಆದಷ್ಟು ಬೇಗ ಮುಕ್ತಿ; 810 ಕೋಟಿ ವೆಚ್ಚದಲ್ಲಿ ಬರಲಿದೆ ಈ ಯೋಜನೆ

IPL 2026 Bengaluru: RCB ಅಭಿಮಾನಿಗಳಿಗೆ ಸಿಹಿ ಸುದ್ದಿ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗೆ ಅನುಮತಿ

EPFO 3.0: ಬೃಹತ್ ಬದಲಾವಣೆ; ಪಿಎಫ್ ಹಣ ತೆಗೆಯುವುದು ಇನ್ನೂ ಸುಲಭ, ಕ್ಷಣಾರ್ಧದಲ್ಲಿ ಕೆಲಸ ಮುಗಿಸಿ

Investment Tips: ಮಹಿಳೆಯರೇ ಇಲ್ಲಿ ಗಮನಿಸಿ, ನಿಮಗಾಗಿ ಇಲ್ಲಿದೆ ಹೂಡಿಕೆ ಟ್ರಿಕ್ಸ್

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ



Click it and Unblock the Notifications