ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ H- 1B ಸೇರಿದಂತೆ ಇತರ ಉದ್ಯೋಗ ವೀಸಾಗಳನ್ನು ಅಮಾನತು ಮಾಡುವ ಚಿಂತನೆಯಲ್ಲಿ ಇದ್ದಾರೆ. ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ತುಂಬ ಹೆಚ್ಚಾಗಿರುವುದರಿಂದ ಈ ಆಲೋಚನೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಈ ಪ್ರಸ್ತಾವಿತ ಅಮಾನತು ಅಕ್ಟೋಬರ್ 1ರ ತನಕ ವಿಸ್ತರಣೆ ಆಗಬಹುದು ಎಂದು ಆಡಳಿತ ಮೂಲಗಳ ಮಾಹಿತಿಯನ್ನು ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಹೀಗೆ ಮಾಡುವುದರಿಂದ ಯಾವುದೇ ಹೊಸ H-1B ವೀಸಾ ಇರುವವರು, ಅಮೆರಿಕದ ಹೊರಗಿನವರು ನಿರ್ಬಂಧ ತೆರವಾಗುವ ತನಕ ಉದ್ಯೋಗದ ಸಲುವಾಗಿ ತೆರಳುವುದು ಸಾಧ್ಯವಾಗುವುದಿಲ್ಲ.
ಭಾರತದ ಐಟಿ ತಂತ್ರಜ್ಞರಿಗೆ ಹಿನ್ನಡೆ
ಭಾರತದ ತಂತ್ರಜ್ಞಾನ ವೃತ್ತಿಪರರಿಗೆ H-1B ಬಹಳ ಬೇಕಾದಂಥ ವಿದೇಶಿ ವೀಸಾ. ಟ್ರಂಪ್ ತೆಗೆದುಕೊಳ್ಳುವ ಈ ನಿರ್ಧಾರದಿಂದ ಭಾರತದ ಸಾವಿರಾರು ಐಟಿ ವೃತ್ತಿಪರರ ಮೇಲೆ ಪರಿಣಾಮ ಆಗಲಿದೆ. ಈಗಾಗಲೇ H-1B ವೀಸಾ ಹೊಂದಿದ್ದ ಸಾವಿರಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ.
ಎಷ್ಟು ಬಗೆಯ ಉದ್ಯೋಗ ವೀಸಾ?
ಶ್ವೇತಭವನದ ಮೂಲಗಳ ಪ್ರಕಾರ, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವಿವಿಧ ಪ್ರಸ್ತಾವಗಳನ್ನು ಪರಿಗಣಿಸಲಾಗುತ್ತಿದೆ. ಸದ್ಯಕ್ಕೆ ಅಮೆರಿಕನ್ನರಿಗೆ ಉದ್ಯೋಗ ಸಿಗುವಂತಾಗಲು ಏನು ಮಾಡಬೇಕು ಎಂಬ ಬಗ್ಗೆ ಆಲೋಚನೆ ಶುರುವಾಗಿದೆ. ಇನ್ನು H-1B ವೀಸಾ ಜತೆಗೆ ಅಲ್ಪಾವಧಿಯ ಸೀಸನಲ್ ಕಾರ್ಮಿಕರಿಗೆ H-2B ವೀಸಾ, ಅಲ್ಪಾವಧಿ ಕಾರ್ಮಿಕರಿಗೆ J-1 ವೀಸಾ ಹಾಗೂ ಆಂತರಿಕ ಕಂಪೆನಿ ವರ್ಗಾವಣೆಗೆ L-1 ವೀಸಾ ಇದೆ.
H-1B ವೀಸಾ ಪ್ರಾಮುಖ್ಯತೆ ಏನು?
H-1B ವೀಸಾ ಪ್ರಾಮುಖ್ಯತೆ ಏನೆಂದರೆ, ಇದು ಹಲವು ವರ್ಷಗಳಿಗೆ ಆಗುವ ಉದ್ಯೋಗ ವೀಸಾ. ತಂತ್ರಜ್ಞಾನ, ಅಕೌಂಟಿಂಗ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಬೇರೆ ದೇಶಗಳ ಉದ್ಯೋಗಿಗಳಿಗೆ ಇದನ್ನೇ ಬಳಲಾಗುತ್ತದೆ. ಈ ಹೊಸ ನಿಯಮಗಳಿಂದ ಅಮೆರಿಕದಲ್ಲಿ ಪ್ರತಿಭೆಗಳಿಗೆ ಕೊರತೆ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications