ವಿದೇಶೀ ಹೂಡಿಕೆದಾರರು ಸೆಪ್ಟೆಂಬರ್ 30, 2020ರ ಕೊನೆಗೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯಲ್ಲಿ 27.2% ಪಾಲನ್ನು ಹೊಂದಿದ್ದಾರೆ. ಷೇರಿನ ಪಾಲು ದಾಖಲೆ ಪ್ರಮಾಣಕ್ಕೆ ಏರಿಕೆ ಆಗಿದೆ ಎಂದು ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಕಂಪೆನಿ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಷೇರು ಪ್ರಮಾಣದ ಬಗ್ಗೆ ಗುರುವಾರ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.
ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಪೋರ್ಟ್ ಫೋಲಿಯೋ ಹೂಡಿಕೆದಾರರು 165.8 ಕೋಟಿ ಷೇರುಗಳು ಅಥವಾ 25.2 ಪರ್ಸೆಂಟ್ ಷೇರಿನ ಪಾಲು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಜೂನ್ 30ರ ತ್ರೈಮಾಸಿಕದಲ್ಲಿ ವಿದೇಶೀ ಹೂಡಿಕೆದಾರರು 163.07 ಕೋಟಿ ಷೇರು ಅಥವಾ 24.72 ಪರ್ಸೆಂಟ್ ಹೊಂದಿದ್ದರು.
ಇದನ್ನು ಹೊರತುಪಡಿಸಿ ಸೆಪ್ಟೆಂಬರ್ 30, 2020ಕ್ಕೆ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಬೈಯರ್ಸ್ (QIB) 2.05 ಪರ್ಸೆಂಟ್ ಹೊಂದಿದ್ದಾರೆ. ಆ ಮೂಲಕ ಒಟ್ಟು ಷೇರಿನ ಪಾಲು 27.2% ಮುಟ್ಟಿದೆ. ಜೆಪಿ ಮೋರ್ಗನ್ ಈ ಬಗ್ಗೆ ಹೇಳಿದ್ದು, ರಿಲಯನ್ಸ್ ನಲ್ಲಿ ಎಫ್ ಐಐ ಮಾಲೀಕತ್ವವು ಹೊಸ ಎತ್ತರಕ್ಕೆ ಏರಿದೆ ಮತ್ತು 27.2 ಪರ್ಸೆಂಟ್ ಷೇರಿನ ಪಾಲು ತಲುಪಿದೆ. ಕಳೆದ ತ್ರೈಮಾಸಿಕಕ್ಕಿಂತ ಈ ಸಲ 60 bps ಹೆಚ್ಚಾಗಿದೆ ಎಂದಿದೆ.

ಭಾರತದ ಎನರ್ಜಿ ವಲಯದ ಕಂಪೆನಿಗಳ ಪೈಕಿ ಕಳೆದ ಕೆಲವು ತ್ರೈಮಾಸಿಕದಿಂದ ಎಫ್ ಐಐ ಪಾಲನ್ನು ಹೆಚ್ಚಳ ಮಾಡುತ್ತಾ ಬಂದಿರುವ ಏಕೈಕ ಕಂಪೆನಿ ರಿಲಯನ್ಸ್. ಇನ್ನು ತೈಲ ಮಾರ್ಕೆಟಿಂಗ್ ಹಾಗೂ ಗ್ಯಾಸ್ ಕಂಪೆನಿಗಳಲ್ಲಿ ಕಡಿಮೆ ಮಾಡುತ್ತಾ ಬಂದಿವೆ. ಇನ್ನು ಪ್ರವರ್ತಕರು ಕೂಡ ರಿಲಯನ್ಸ್ ನಲ್ಲಿ ಷೇರಿನ ಪಾಲನ್ನು 50.37 ಪರ್ಸೆಂಟ್ ನಿಂದ 50.49 ಪರ್ಸೆಂಟ್ ಗೆ ಹೆಚ್ಚಿಸಿಕೊಂಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರಿನ ಬೆಲೆ 2020ರ ಏಪ್ರಿಲ್ ನಿಂದ ಈಚೆಗೆ ದುಪ್ಪಟ್ಟಾಗಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications