For Quick Alerts
ALLOW NOTIFICATIONS  
For Daily Alerts

ಗುರುರಾಘವೇಂದ್ರ ಬ್ಯಾಂಕ್ ನ್ಯೂನತೆ ಸರಿಪಡಿಸಲು 42 ದಿನದ ಗಡುವು, ಸಭೆಗೆ ಬಾರದ ಅಧ್ಯಕ್ಷ

|

ಬೆಂಗಳೂರು, ಜನವರಿ 13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆರ್ಥಿಕ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ ಗ್ರಾಹಕರ ಜತೆಗಿನ ಸಭೆಯು ಸೋಮವಾರ ನಡೆದಿದ್ದು, ಆ ಸಭೆಯಲ್ಲಿ ಬ್ಯಾಂಕ್ ನ ಪರವಾಗಿ ಮ್ಯಾನೇಜರ್ ಮುರಳೀಧರ್ ಆರಿಕಾಡಿ ಗ್ರಾಹಕರಿಗೆ ಹೇಳಿದ್ದೇನು ಎಂಬ ವಿವರಗಳು ಇಲ್ಲಿವೆ.

* ನಮ್ಮ ಬ್ಯಾಂಕ್ ಈಗ ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಸಹಕಾರ ಬ್ಯಾಂಕ್ ಗಳ ವ್ಯವಹಾರ ಸುಧಾರಣೆ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮ ತೆಗೆದುಕೊಂಡಿದೆ.

* ಬ್ಯಾಂಕ್ ನಲ್ಲಿ ಜನರು ಹೂಡಿಕೆ ಮಾಡಿರುವ ಹಣದ ಪೈಕಿ ಶೇಕಡಾ ಐವತ್ತೆರಡು ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲ ನೀಡಿದ್ದೇವೆ. ಉಳಿದ ನಲವತ್ತೆಂಟು ಪರ್ಸೆಂಟ್ ನಮ್ಮ ಬಳಿಯೇ ಇದೆ.

* ಈಗಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಹೂಡಿಕೆದಾರರ ಹಣವನ್ನು ಹಿಂತಿರುಗಿಸುವುದು ನಮ್ಮ ಉದ್ದೇಶ. ಯಾವುದೇ ಹಣಕ್ಕೆ ತೊಂದರೆಯಾಗುವುದಿಲ್ಲ.

'ಹಿಂದೂ ವರ್ಷನ್ ಆಫ್ ಐಎಂಎ' ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ವಂಚನೆ ನಡೆಯಿತೆ?'ಹಿಂದೂ ವರ್ಷನ್ ಆಫ್ ಐಎಂಎ' ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ವಂಚನೆ ನಡೆಯಿತೆ?

* ಮಂದಗತಿಯ ಮಾರುಕಟ್ಟೆಯಿಂದಾಗಿ (ಮಾರ್ಕೆಟ್ ಸ್ಲೋಡೌನ್) ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ್ದೇವೆ. ಕೆಲವು ಗ್ರಾಹಕರಿಗೆ ಇಪ್ಪತ್ತು ವರ್ಷದ ಅವಧಿಗೆ ಸಾಲ ನೀಡಿದ್ದೇವೆ. ಅವರು ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ.

ಗುರುರಾಘವೇಂದ್ರ ಬ್ಯಾಂಕ್ ನ್ಯೂನತೆ ಸರಿಪಡಿಸಲು 42 ದಿನದ ಗಡುವು

* ಸಾವಿರದ ಇನ್ನೂರಾ ಎಂಬತ್ತು ಕೋಟಿಯಷ್ಟು ಬ್ಯಾಂಕ್ ಸೆಕ್ಯೂರಿಟಿ ಇದೆ. ಸಾವಿರದ ಆರುನೂರಾ ಎಂಬತ್ತು ಕೋಟಿ ಸಾಲ ಇದೆ.

* ಯಾವುದೇ ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೊಟ್ಟ ಸಾಲಕ್ಕೆ ಪೂರ್ಣ ಭದ್ರತೆ ಇದೆ. ಯಾರೂ ಹೆದರಬೇಡಿ.

* ಆರ್ ಬಿಐ ನೋಟಿಸ್ ನೀಡಿದ್ದು ಶುಕ್ರವಾರ. ಆ ನಂತರ ಶನಿವಾರ- ಭಾನುವಾರ ರಜಾ ಇದ್ದುದರಿಂದ ಈ ಗೊಂದಲ ಆಗಿದೆ. ಒಂದೇ ದಿನದಲ್ಲಿ ಆರು ಕೋಟಿ ಕ್ಯಾಶ್ ವಿಥ್ ಡ್ರಾ ಮಾಡಿಕೊಟ್ಟಿದ್ದೇವೆ.

* ಕೊಟ್ಟ ಸಾಲಕ್ಕೆ ಸಂಪೂರ್ಣ ಭದ್ರತೆ ಇದೆ. ಯಾವುದೇ ಅವ್ಯವಹಾರ ಆಗಿಲ್ಲ. ಹೆದರುವ ಅಗತ್ಯ ಇಲ್ಲ.

* ಹಣವನ್ನು ಯಾರೂ ಹಿಂಪಡೆಯಲು ಹೋಗಬೇಡಿ, ನವೀಕರಿಸಿ.

NR ಕಾಲೋನಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ವಹಿವಾಟಿಗೆ RBI ನಿರ್ಬಂಧNR ಕಾಲೋನಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ವಹಿವಾಟಿಗೆ RBI ನಿರ್ಬಂಧ

* ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ನಲವತ್ತೆರಡು ದಿನಗಳ ಸಮಯ ನೀಡಲಾಗಿದೆ.

* ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಸಭೆಗೆ ಬಾರದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ: ಬ್ಯಾಂಕ್ ಸಲಹೆಗಾರ ಮಯ್ಯ ಹೇಳಿಕೆ

English summary

Guru Raghavendra Bank President Not Attended Investors Meeting

Guru Raghavendra Sahakara bank president not attended investors meeting, organised by bank on the background of alleged irregularities.
Story first published: Monday, January 13, 2020, 19:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X