ಗುರುರಾಘವೇಂದ್ರ ಬ್ಯಾಂಕ್ ನ್ಯೂನತೆ ಸರಿಪಡಿಸಲು 42 ದಿನದ ಗಡುವು, ಸಭೆಗೆ ಬಾರದ ಅಧ್ಯಕ್ಷ
ಬೆಂಗಳೂರು, ಜನವರಿ 13: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆರ್ಥಿಕ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲಾದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಂದ ಗ್ರಾಹಕರ ಜತೆಗಿನ ಸಭೆಯು ಸೋಮವಾರ ನಡೆದಿದ್ದು, ಆ ಸಭೆಯಲ್ಲಿ ಬ್ಯಾಂಕ್ ನ ಪರವಾಗಿ ಮ್ಯಾನೇಜರ್ ಮುರಳೀಧರ್ ಆರಿಕಾಡಿ ಗ್ರಾಹಕರಿಗೆ ಹೇಳಿದ್ದೇನು ಎಂಬ ವಿವರಗಳು ಇಲ್ಲಿವೆ.
* ನಮ್ಮ ಬ್ಯಾಂಕ್ ಈಗ ಅಗ್ನಿ ಪರೀಕ್ಷೆ ಎದುರಿಸುತ್ತಿದೆ. ಸಹಕಾರ ಬ್ಯಾಂಕ್ ಗಳ ವ್ಯವಹಾರ ಸುಧಾರಣೆ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಕ್ರಮ ತೆಗೆದುಕೊಂಡಿದೆ.
* ಬ್ಯಾಂಕ್ ನಲ್ಲಿ ಜನರು ಹೂಡಿಕೆ ಮಾಡಿರುವ ಹಣದ ಪೈಕಿ ಶೇಕಡಾ ಐವತ್ತೆರಡು ಪರ್ಸೆಂಟ್ ನಷ್ಟು ಮೊತ್ತವನ್ನು ಸಾಲ ನೀಡಿದ್ದೇವೆ. ಉಳಿದ ನಲವತ್ತೆಂಟು ಪರ್ಸೆಂಟ್ ನಮ್ಮ ಬಳಿಯೇ ಇದೆ.
* ಈಗಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಹೂಡಿಕೆದಾರರ ಹಣವನ್ನು ಹಿಂತಿರುಗಿಸುವುದು ನಮ್ಮ ಉದ್ದೇಶ. ಯಾವುದೇ ಹಣಕ್ಕೆ ತೊಂದರೆಯಾಗುವುದಿಲ್ಲ.
'ಹಿಂದೂ ವರ್ಷನ್ ಆಫ್ ಐಎಂಎ' ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ವಂಚನೆ ನಡೆಯಿತೆ?
* ಮಂದಗತಿಯ ಮಾರುಕಟ್ಟೆಯಿಂದಾಗಿ (ಮಾರ್ಕೆಟ್ ಸ್ಲೋಡೌನ್) ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದ್ದೇವೆ. ಕೆಲವು ಗ್ರಾಹಕರಿಗೆ ಇಪ್ಪತ್ತು ವರ್ಷದ ಅವಧಿಗೆ ಸಾಲ ನೀಡಿದ್ದೇವೆ. ಅವರು ಸರಿಯಾದ ಸಮಯಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ.
* ಸಾವಿರದ ಇನ್ನೂರಾ ಎಂಬತ್ತು ಕೋಟಿಯಷ್ಟು ಬ್ಯಾಂಕ್ ಸೆಕ್ಯೂರಿಟಿ ಇದೆ. ಸಾವಿರದ ಆರುನೂರಾ ಎಂಬತ್ತು ಕೋಟಿ ಸಾಲ ಇದೆ.
* ಯಾವುದೇ ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೊಟ್ಟ ಸಾಲಕ್ಕೆ ಪೂರ್ಣ ಭದ್ರತೆ ಇದೆ. ಯಾರೂ ಹೆದರಬೇಡಿ.
* ಆರ್ ಬಿಐ ನೋಟಿಸ್ ನೀಡಿದ್ದು ಶುಕ್ರವಾರ. ಆ ನಂತರ ಶನಿವಾರ- ಭಾನುವಾರ ರಜಾ ಇದ್ದುದರಿಂದ ಈ ಗೊಂದಲ ಆಗಿದೆ. ಒಂದೇ ದಿನದಲ್ಲಿ ಆರು ಕೋಟಿ ಕ್ಯಾಶ್ ವಿಥ್ ಡ್ರಾ ಮಾಡಿಕೊಟ್ಟಿದ್ದೇವೆ.
* ಕೊಟ್ಟ ಸಾಲಕ್ಕೆ ಸಂಪೂರ್ಣ ಭದ್ರತೆ ಇದೆ. ಯಾವುದೇ ಅವ್ಯವಹಾರ ಆಗಿಲ್ಲ. ಹೆದರುವ ಅಗತ್ಯ ಇಲ್ಲ.
* ಹಣವನ್ನು ಯಾರೂ ಹಿಂಪಡೆಯಲು ಹೋಗಬೇಡಿ, ನವೀಕರಿಸಿ.
NR ಕಾಲೋನಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ವಹಿವಾಟಿಗೆ RBI ನಿರ್ಬಂಧ
* ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ನಲವತ್ತೆರಡು ದಿನಗಳ ಸಮಯ ನೀಡಲಾಗಿದೆ.
* ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರಿಂದ ಸಭೆಗೆ ಬಾರದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ: ಬ್ಯಾಂಕ್ ಸಲಹೆಗಾರ ಮಯ್ಯ ಹೇಳಿಕೆ