ಇನ್ನೂ ಟ್ರಾಫಿಕ್ ಸಿಗ್ನಲ್ ಕೆಂಪು ಬಣ್ಣವೇ ತೋರಿಸುತ್ತಿರುತ್ತದೆ ಆಗಲೇ 'ಹಾರ್ನ್' ಕೇಳಲು ಆರಂಭವಾಗುತ್ತದೆ. ಅದ್ಯಾವ ಪರಿ ರೇಜಿಗೆ ಆಗುತ್ತದೆ ಅಂದರೆ, ಅದೇ ಕಾರಣಕ್ಕೆ ಜಗಳ ಆಗುವುದನ್ನೂ ನೀವು ನೋಡಿರಬಹುದು. ಮುಂಬೈ ಪೊಲೀಸರು ಈ 'ಹಾರ್ನ್' ಮಾರಿಗೆ ಒಂದು ಔಷಧ ಕಂಡುಹಿಡಿದಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಡಿಯೋ ಕೂಡ ಬಿಡುಗಡೆ ಆಗಿದೆ.
ಅಂದ ಹಾಗೆ ವಿಶ್ವದ ಅತ್ಯಂತ ಸಂಚಾರ ದಟ್ಟಣೆ ನಗರದಲ್ಲಿ ಮುಂಬೈ ಕೂಡ ಒಂದು. ವಿಪರೀತ ಹಾರ್ನ್ ಮಾಡುವ ಪ್ರವೃತ್ತಿಯಿಂದ ಅಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಕಾರಣಕ್ಕೆ ಒಂದು ಕಡೆ ಟ್ರಾಫಿಕ್ ಸಿಗ್ನಲ್ ನಲ್ಲಿ ಡೆಸಿಬಲ್ ಮೀಟರ್ ಅಳವಡಿಸಿದ್ದಾರೆ (ಶಬ್ದದ ಪ್ರಮಾಣವನ್ನು ಅಳೆಯುವ ಸಾಧನ).

ವಿಡಿಯೋದಲ್ಲಿ ತೋರಿಸುವ ಪ್ರಕಾರ, 85dbಗಿಂತ ಡೆಸಿಬಲ್ ಮಟ್ಟ ಹೆಚ್ಚಾದರೆ, ಅಂದರೆ ಹಾರ್ನ್ ಮಾಡುವ ಮೂಲಕ ಆ ಪ್ರಮಾಣದ ಶಬ್ದಕ್ಕೆ ಕಾರಣರಾದರೆ ಸಿಗ್ನಲ್ ಮತ್ತೆ ಮೊದಲಿಂದ ಆರಂಭವಾಗುತ್ತದೆ. ಮೊದಲ ಸೆಕೆಂಡ್ ನಿಂದ ಶುರುವಾಗುತ್ತದೆ. ರೆಡ್ ಸಿಗ್ನಲ್ ನೋಡುತ್ತಾ ಮತ್ತೂ ಕೆಲ ಸಮಯ ನಿಲ್ಲಬೇಕಾಗುತ್ತದೆ.
"ನೀವು ಇನ್ನಷ್ಟು ಸಮಯ ಕಾಯುತ್ತೀರಿ ಅನ್ನೋದಾದರೆ ಆರಾಮವಾಗಿ ಹಾರ್ನ್ ಮಾಡಿ" ಎಂಬ ಸಂದೇಶದೊಂದಿಗೆ ವಿಡಿಯೋ ಮುಗಿಯುತ್ತದೆ. ಈ ವಿಡಿಯೋಗೆ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದು, ಡೆಸಿಬಲ್ ಮೀಟರ್ ಅಳವಡಿಸುವುದು ಅತ್ಯುತ್ತಮ ಆಲೋಚನೆ. ನಾವು ಪ್ರಯತ್ನಿಸುತ್ತೇವೆ" ಎಂದಿದ್ದಾರೆ. ತೆಲಂಗಾಣದ ಸಚಿವರಿಂದಲೂ ಮುಂಬೈ ಪೊಲೀಸರ ಹೊಸ ಆಲೋಚನೆ ಮೆಚ್ಚುಗೆ ವ್ಯಕ್ತವಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications